ವಿಶ್ವದಲ್ಲೇ ಅತ್ಯಂತ ಕಡಿಮೆ ಸಾಧನೆ ಮಾಡಿರುವ ತಂಡಗಳಲ್ಲಿ ಭಾರತವು ಸೇರಿದೆ: ಮೈಕಲ್‌ ವಾಘನ್‌

michael vaughan :  ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಮೈಕಲ್‌ ವಾಘನ್‌ ಅವರು ಭಾರತ ತಂಡದ ಸಾಧನೆ ಬಗ್ಗೆ ಅಭಿಪ್ರಾಯ ತಿಳಿಸಿದ್ಧಾರೆ. ಪಾಕ್‌ ಮತ್ತು ಆಸಿಸ್‌ ಟೆಸ್ಟ್‌ ಪಂದ್ಯದ ವೇಳೆ ಮಾತನಾಡಿದ ಅವರು, ಭಾರತು ಕಳೆದ ಕೆಲವು ವರ್ಷಗಳಿಂದ ಏನ್ನು ಸಾಧಿಸಲ್ಲ, ಹಾಗೂ ಅವರಲ್ಲಿರುವ ಕೌಶಲ್ಯಗಳಿಗೆ ಅವರು ಹೆಚ್ಚಿನದನ್ನೇ ಸಾಧಿಸ ಬೇಕು ಎಂದರು.  

Written by - Zee Kannada News Desk | Last Updated : Dec 30, 2023, 04:12 PM IST
  • ಟೀಂ ಇಂಡಿಯಾ ಕಡಿಮೆ ಸಾಧನೆ ಮಾಡಿದ ತಂಡಗಳಲ್ಲಿ ಒಂದಾಗಿದೆ ಎಂದು ಮೈಕಲ್‌ ವಾಘನ್‌ ಹೇಳಿದರು
  • ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯದ ವೇಳೆ ಮೈಕಲ್‌ ವಾಘನ್‌ ಮಾತನಾಡಿದರು
  • ಭಾರತದ ತಂಡದಲ್ಲಿರು ಪ್ರತಿಭೆಗೆ ಅವರು ಹೆಚ್ಚಿನ್ನದನ್ನೆ ಸಾಧಿಸಬೇಕು ಎಂದರು
ವಿಶ್ವದಲ್ಲೇ ಅತ್ಯಂತ ಕಡಿಮೆ ಸಾಧನೆ ಮಾಡಿರುವ ತಂಡಗಳಲ್ಲಿ ಭಾರತವು ಸೇರಿದೆ: ಮೈಕಲ್‌ ವಾಘನ್‌ title=

Michael Vaughan :ಭಾರತ ತಂಡದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರಿದ್ಧಾರೆ. ವಿಶ್ವದ ಇತರೆ ಕ್ರಿಕೆಟ್‌ ತಂಡಗಳು ಭಾರತ ತಂಡ ಹೆಸರು ಕೇಳಿದರೆ ಸಾಕು ಇದೊಂದು ಕಠಿಣವಾದ ತಂಡ ಎಂದು ಭಾವಿಸುತ್ತಾರೆ. ಪ್ರಸ್ತುತ ಟೀಮ್‌ ಇಂಡಿಯಾದಲ್ಲಿ ದಿಗ್ಗಜ ಆಟಗಾರರು ಹಾಗೂ ಶ್ರೇಷ್ಠ ಆಟಗಾರ ಪಟ್ಟಿಯಲ್ಲಿರುವ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅಂಕಣಕ್ಕೆ ಇಳಿದರೆ ಸಾಕು ಪ್ರಿತಿಯೊಂದು ಮ್ಯಾಚ್‌ನಲ್ಲೂ ಹೊಸತೊಂದು ದಾಖಲೆ ಸೃಷ್ಠಿಸುವ ಸಾಮರ್ಥ್ಯ ಹೊಂದಿದ್ಧಾರೆ.

 ಆದರೇ ಇದೇ ಭಾರತ ತಂಡದ ಬಗ್ಗೆ ಇಂಗ್ಲೆಂಡ್‌ ತಂಡದ ಮಾಜಿ ದಿಗ್ಜ ಆಟಗಾರನೊಬ್ಬ ಅಚ್ರಿಯ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್‌ ತಂಡದ ಪರ ಹಲವಾರು ಪಂದ್ಯಗಳನ್ನು ಆಡಿದ್ದ ಮೈಕಲ್‌ ವಾಘನ್‌ ಅವರು ಭಾರತವು ಕಡಿಮೆ ಸಾಧನೆ ಮಾಡಿದ ತಂಡಗಳ ಪಟ್ಟಿಯಲ್ಲಿ ಒಂದಾಗಿದೆ ಎಂದು ಹೇಳಿದ್ಧಾರೆ.

ಇದನ್ನು ಓದಿ-ಕಿವೀಸ್ vs ಬಾಂಗ್ಲಾ ಟಿ20ಗೆ ಮಳೆರಾಯನ ಅಡ್ಡಿ...! ಫಲಿತಾಂಶ ಇಲ್ಲದೆ 2ನೇ ಪಂದ್ಯ ರದ್ದು

ಡಿಸೆಂಬರ್‌ 26 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ 2ನೇ ಟಸ್ಟ್‌ ಪಂದ್ಯ ಆರಂಭವಾಗಿತ್ತು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ದ ಮೂರನೆ ದಿನದಂದೆ ಗೆದ್ದು ಬೀಗಿದೆ (ಶುಕ್ರವಾರ). ಈ ಪಂದ್ಯದ ವೇಳೆ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಮೈಕಲ್‌ ವಾಘನ್‌ ಅವರು ಮಾತನಾಡಿ ಭಾರತದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ಧಾರೆ.

ಭಾರತ ತಂಡವು ಕಡಿಮೆ ಸಾಧನೆ ಮಾಡಿರುವ ತಂಡಗಳ ಸಾಲಿನಲ್ಲಿ ಸೇರಿಕೊಂಡಿದೆ ಎಂದರು. ಭಾರತವು ತಮ್ಮಲ್ಲಿರುವ ಪ್ರತಿಭೆಯನ್ನು ಪರಿಗಣಿಸಿ ಅವರು ಮಾಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಬೇಕು ಎನ್ನುವುದು ಮೈಕಲ್‌ ವಾಘನ್‌ರವರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೆ ಅವರು ಭಾರತವು ಕಳೆದ ಕೆಲವು ವರ್ಷಗಳಿಂದ  ವಿಶ್ವಕಪ್‌ ಭಾರತದ ಗೆಲುವಿನ ಸಾಧನೆ ಬಗ್ಗೆ ಪ್ರಶ್ನೆ ಮಾಡಿದರು.

ಇದನ್ನು ಓದಿ-ಟೀಂ ಇಂಡಿಯಾಗೆ ಭಾರಿ ದಂಡ ವಿಧಿಸಿದ ಐಸಿಸಿ: ಕಾರಣವಾಯ್ತು ನಿಧಾನಗತಿಯ ಬೌಲಿಂಗ್...!

“ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಗೆದ್ದಿಲ್ಲ. ಅವರು ಇನ್ನು ಹೆಚ್ಚಿನದನ್ನು ಸಾಧಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಏನನ್ನೂ ಗೆಲ್ಲುವುದಿಲ್ಲ. ಅವರು ಕೊನೆಯ ಬಾರಿಗೆ ಏನನ್ನಾದರೂ ಗೆದ್ದದ್ದು ಯಾವಾಗ? ಅವರಲ್ಲಿರುವ ಎಲ್ಲಾ ಪ್ರತಿಭೆಗಳೊಂದಿಗೆ, ಎಲ್ಲಾ ಕೌಶಲ್ಯಗಳನ್ನು ಪರಿಗನಣಿಸಿದರೆ ಅವರು ಹೆಚ್ಚಿನದನ್ನು ಸಾಧಿಸಬೇಕಾಗಿತ್ತು" ಎಂದು ವಾನ್ ಫಾಕ್ಸ್ ಸ್ಪೋರ್ಟ್ಸ್ ಪ್ಯಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News