IPL 2024: ಇಬ್ಭಾಗವಾಯ್ತು ಮುಂಬೈ ಇಂಡಿಯನ್ಸ್! ರೋಹಿತ್’ಗೆ ದಿಗ್ಗಜರ ಬೆಂಬಲ, ಹಾರ್ದಿಕ್’ಗೆ ಯಂಗ್ ಪ್ಲೇಯರ್ಸ್ ಸಾಥ್!

mumbai indians divided into two groups: ಒಂದೇ ತಂಡದೊಳಗೆ ಎರಡು ಬಣಗಳು ರೂಪುಗೊಂಡಿವೆ. ರೋಹಿತ್ ಶರ್ಮಾ ನೇತೃತ್ವದ ಒಂದು ಬಣವಿದ್ದರೆ, ಅದಕ್ಕೆ ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತು ಇಂತಹ ಸ್ಟಾರ್ ಆಟಗಾರರ ಬೆಂಬಲವಿದೆ ಎನ್ನಲಾಗಿದೆ.

Written by - Bhavishya Shetty | Last Updated : Mar 30, 2024, 03:13 PM IST
    • ಮುಂಬೈ ಇಂಡಿಯನ್ಸ್ ತಂಡದ ಆಂತರಿಕ ಚಲನವಲನದ ಬಗ್ಗೆ ಬೆಳಕು
    • ಒಂದೇ ತಂಡದೊಳಗೆ ಎರಡು ಬಣಗಳು ರೂಪುಗೊಂಡಿವೆ
    • ಮುಂಬೈ ಇಂಡಿಯನ್ಸ್ ಪ್ರಸಕ್ತ ಋತುವಿನಲ್ಲಿ ಎರಡು ಪಂದ್ಯಗಳನ್ನು ಆಡಿದೆ
IPL 2024: ಇಬ್ಭಾಗವಾಯ್ತು ಮುಂಬೈ ಇಂಡಿಯನ್ಸ್! ರೋಹಿತ್’ಗೆ ದಿಗ್ಗಜರ ಬೆಂಬಲ, ಹಾರ್ದಿಕ್’ಗೆ ಯಂಗ್ ಪ್ಲೇಯರ್ಸ್ ಸಾಥ್! title=
Mumbai Indians

IPL 2024: ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ಕಳೆದುಕೊಂಡಾಗಿನಿಂದ, ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾರೆ. ನಡೆಯುತ್ತಿರುವ ಐಪಿಎಲ್‌’ನ ಮೊದಲ ಎರಡು ಪಂದ್ಯಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿತ್ತು. ಅಂದು ಅಭಿಮಾನಿಗಳು ಹಾರ್ದಿಕ್ ಪಾಂಡ್ಯನನ್ನು ತೀವ್ರವಾಗಿ ಟೀಕಿಸಿದ್ದಲ್ಲದೆ, ತಮ್ಮ ಸಂಪೂರ್ಣ ಬೆಂಬಲ ರೋಹಿತ್ ಶರ್ಮಾಗೆ ಮಾತ್ರ ಎಂಬ ಸ್ಪಷ್ಟ ಸಂದೇಶ ನೀಡಿದ್ದರು.

ಇದನ್ನೂ ಓದಿ: ಒಬ್ಬರಲ್ಲ, ಇಬ್ಬರಲ್ಲ… 8 ನಟಿಯರೊಂದಿಗೆ ಡೇಟ್! ಕಡೆಗೆ ಬ್ರಿಟಿಷ್ ಯುವತಿಯನ್ನು ಪ್ರೀತಿಸಿ 2 ಬಾರಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್!

ಇದೀಗ ಇತ್ತೀಚಿನ ವರದಿಯೊಂದು ಮುಂಬೈ ಇಂಡಿಯನ್ಸ್ ತಂಡದ ಆಂತರಿಕ ಚಲನವಲನದ ಬಗ್ಗೆ ಬೆಳಕು ಚೆಲ್ಲಿದೆ. ಅಂದರೆ, ಒಂದೇ ತಂಡದೊಳಗೆ ಎರಡು ಬಣಗಳು ರೂಪುಗೊಂಡಿವೆ. ರೋಹಿತ್ ಶರ್ಮಾ ನೇತೃತ್ವದ ಒಂದು ಬಣವಿದ್ದರೆ, ಅದಕ್ಕೆ ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತು ಇಂತಹ ಸ್ಟಾರ್ ಆಟಗಾರರ ಬೆಂಬಲವಿದೆ ಎನ್ನಲಾಗಿದೆ. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ಬಣವಿದ್ದು, ಇಶಾನ್ ಕಿಶನ್ ಸೇರಿ ಕೆಲ ಸದಸ್ಯರು ಬೆಂಬಲ ನೀಡುತ್ತಿದ್ದಾರಂತೆ.

ಪ್ರಸ್ತುತ, ಮುಂಬೈ ಇಂಡಿಯನ್ಸ್ ಪ್ರಸಕ್ತ ಋತುವಿನಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಈ ಎರಡೂ ಪಂದ್ಯಗಳಲ್ಲೂ ತಂಡದೊಳಗಿನ ಒಗ್ಗಟ್ಟು ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಹಾರ್ದಿಕ್ ಅವರ ನಾಯಕತ್ವವನ್ನು ಟೀಕಿಸಲಾಗುತ್ತಿದೆ. ವಿಶೇಷವಾಗಿ ಜಸ್ಪ್ರೀತ್ ಬುಮ್ರಾ ಅವರ ಉಪಸ್ಥಿತಿಯ ಹೊರತಾಗಿಯೂ ಮೊದಲ ಓವರ್ ಬೌಲ್ ಮಾಡುವ ಅವರ ನಿರ್ಧಾರ ಮತ್ತು ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಮುಗಿಸಲು ತೋರಿದ ಅಸಮರ್ಥತೆಗಾಗಿ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.

ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಕೂಡ ಹಾರ್ದಿಕ್ ಬ್ಯಾಟಿಂಗ್ ಮತ್ತು ನಾಯಕತ್ವವನ್ನು ಟೀಕಿಸಿದ್ದಾರೆ. ತಂಡ ಮತ್ತು ನಾಯಕನ ಬ್ಯಾಟಿಂಗ್ ಸ್ಟ್ರೈಕ್ ರೇಟ್ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ವೆಂಕಟೇಶ್ ಅಯ್ಯರ್ ಅಬ್ಬರಕ್ಕೆ 106 ಮೀ ದೂರ ಹಾರಿದ ಚೆಂಡು! ಇದು IPLನ ಅತಿ ಉದ್ದದ ಸಿಕ್ಸರ್

ಇನ್ನು ಅಭಿಮಾನಿಗಳು ಮತ್ತು ವಿಮರ್ಶಕರ ಪ್ರತಿಕ್ರಿಯೆಗೆ ಹಾರ್ದಿಕ್ ಪಾಂಡ್ಯ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಮುಂಬೈ ಫ್ಯಾನ್ಸ್ ಸದ್ಯದ ಪ್ರಕಾರ, ಹಾರ್ದಿಕ್ ನಾಯಕತ್ವದ ಬಗ್ಗೆ ಸಂಶಯ ಹೊಂದಿದ್ದಾರೆ. ಈ ಎಲ್ಲದರ ಮಧ್ಯೆ ಪಾಂಡ್ಯ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News