ODI World Cup 2023: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್..!

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023, ಭಾರತ ಸರ್ಕಾರದೊಂದಿಗಿನ ತೆರಿಗೆ ಸಮಸ್ಯೆಗಳಿಂದಾಗಿ ದೇಶದಿಂದ ಹೊರಗೆ ಹೋಗಬಹುದು ಎನ್ನಲಾಗುತ್ತಿದೆ.

Written by - Zee Kannada News Desk | Last Updated : Dec 17, 2022, 09:17 PM IST
  • ಆತಿಥೇಯ ರಾಷ್ಟ್ರವು ತನ್ನ ಸರ್ಕಾರದಿಂದ ಅಗತ್ಯ ತೆರಿಗೆ ವಿನಾಯಿತಿಗಳನ್ನು ಪಡೆಯಬೇಕು.
  • ಆದಾಗ್ಯೂ, ಈ ನಿಟ್ಟಿನಲ್ಲಿ ಏನನ್ನೂ ಮಾಡಲಾಗುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ತಿಳಿಸಿದೆ
  • ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ODI World Cup 2023: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್..! title=
file photo

ನವದೆಹಲಿ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023, ಭಾರತ ಸರ್ಕಾರದೊಂದಿಗಿನ ತೆರಿಗೆ ಸಮಸ್ಯೆಗಳಿಂದಾಗಿ ದೇಶದಿಂದ ಹೊರಗೆ ಹೋಗಬಹುದು ಎನ್ನಲಾಗುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಸಿಸಿಐಗೆ ಭಾರತ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವಂತೆ ಮನವಿ ಮಾಡಿದೆ.ಐಸಿಸಿ ನೀತಿಯ ಪ್ರಕಾರ, ಆತಿಥೇಯ ರಾಷ್ಟ್ರವು ತನ್ನ ಸರ್ಕಾರದಿಂದ ಅಗತ್ಯ ತೆರಿಗೆ ವಿನಾಯಿತಿಗಳನ್ನು ಪಡೆಯಬೇಕು. ಆದಾಗ್ಯೂ, ಈ ನಿಟ್ಟಿನಲ್ಲಿ ಏನನ್ನೂ ಮಾಡಲಾಗುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ತಿಳಿಸಿದೆ ಮತ್ತು ಆಡಳಿತ ಮಂಡಳಿಯು ಬಯಸಿದಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹತ್ತು ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿ ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

2016 ರಲ್ಲಿ ಐಸಿಸಿ ಟಿ20 ವಿಶ್ವಕಪ್ ಸಮಯದಲ್ಲಿ, ಭಾರತದ ಆದಾಯದ ಪಾಲಿನಿಂದ ಶೇ 10.3 ರಷ್ಟು ಹೆಚ್ಚುವರಿ ಶುಲ್ಕವನ್ನು ಹೊಂದಲು ಭಾರತೀಯ ತೆರಿಗೆ ಅಧಿಕಾರಿಗಳಿಂದ ಮಧ್ಯಂತರ ತೆರಿಗೆ ಪ್ರಯೋಜನವನ್ನು ಪಡೆದ ನಂತರ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು,ಆದರೆ ಈಗ ಬಿಸಿಸಿಐ ಈ ವಿಚಾರದಲ್ಲಿ ಈಗ ಪ್ರತಿರೋಧ ವ್ಯಕ್ತಪಡಿಸಿದೆ.

2023 ರ ವಿಶ್ವಕಪ್‌ಗಾಗಿಯೂ, ಐಸಿಸಿ ಅಂತಹ ಮತ್ತೊಂದು ಮಧ್ಯಂತರ ತೆರಿಗೆ ಆದೇಶವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಆದರೆ, ಈ ಬಾರಿಯೂ ಈ ಬೆಳವಣಿಗೆಯಿಂದ ಬಿಸಿಸಿಐ ಅಸಮಾಧಾನಗೊಂಡಿದೆ.

ಇದನ್ನೂ ಓದಿ: "ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ"

ಭಾರತ ಸರ್ಕಾರದಿಂದ ಅಗತ್ಯವಿರುವ ತೆರಿಗೆ ಪರಿಹಾರಗಳನ್ನು ಪಡೆಯಲು ಐಸಿಸಿ ಬಿಸಿಸಿಐಗೆ ಕೇಳಿದೆ.ಆದರೆ 2016ರಲ್ಲಿ ಭಾರತ ಸರ್ಕಾರ ಯಾವುದೇ ವಿನಾಯಿತಿ ನೀಡಲು ಒಪ್ಪಿರಲಿಲ್ಲ. ಮತ್ತು ಇಲ್ಲಿಯವರೆಗೆ, ಸರ್ಕಾರವು ಈ ಬಾರಿ ವಿನಾಯಿತಿಗಳನ್ನು ನೀಡಲು ಒಪ್ಪಿಕೊಳ್ಳಬಹುದು ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ.

2016 ರಲ್ಲಿ, ಸರ್ಕಾರವು ವಿನಾಯಿತಿಗಳನ್ನು ನಿರಾಕರಿಸಿತು ಮತ್ತು ಬಿಸಿಸಿಐ ಸುಮಾರು 190 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿತು. ಈ ಮೊತ್ತವನ್ನು ಐಸಿಸಿಯು ಭಾರತದ ಆದಾಯದ ಪಾಲಿನಿಂದ ತೆರಿಗೆ ಸರ್ಚಾರ್ಜ್ ಆಗಿ ಕಡಿತಗೊಳಿಸಿದೆ, ಈ ಪ್ರಕರಣವನ್ನು ಬಿಸಿಸಿಐ ಈಗ ಐಸಿಸಿ ಟ್ರಿಬ್ಯೂನಲ್‌ನಲ್ಲಿ ಪ್ರಶ್ನಿಸಿದೆ.

2023 ರ ವಿಶ್ವಕಪ್‌ಗಾಗಿ, ಸರ್ಕಾರವು ಮತ್ತೊಮ್ಮೆ ತೆರಿಗೆ ವಿನಾಯಿತಿಯನ್ನು ನಿರಾಕರಿಸಬಹುದು.ಏತನ್ಮಧ್ಯೆ, ಐಸಿಸಿ ಮತ್ತು ಬಿಸಿಸಿಐ ಮತ್ತೊಮ್ಮೆ ಈ ವಿಚಾರವಾಗಿ ಮತ್ತೊಮ್ಮೆ ಸಂಘರ್ಷಕ್ಕೆ ಒಳಗಾಗಬಹುದು ಎನ್ನಲಾಗಿದೆ. ಏಕೆಂದರೆ ಈಗ ಐಸಿಸಿಯು ಈಗಾಗಲೇ ಈವೆಂಟ್‌ನ ಪ್ರಸಾರ ಆದಾಯದಿಂದ ಶೇ 21.84 ರಷ್ಟು (900 ಕೋಟಿ ರೂಪಾಯಿಗಳ ತೆರಿಗೆ ಹೊಣೆಗಾರಿಕೆ) ತೆರಿಗೆಯನ್ನು ಹೆಚ್ಚಿಸಿದೆ.

ಕಳೆದ ಬಾರಿ, 2011 ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದಿತ್ತು, ಆಗ ಭಾರತವು ಪಂದ್ಯಾವಳಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ಆ ಸಮಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸಹ-ಆತಿಥ್ಯ ವಹಿಸಿದ್ದವು. ಆದರೆ 2023ರಲ್ಲಿ ಭಾರತ ಏಕದಿನ ವಿಶ್ವಕಪ್ 2023ಕ್ಕೆ ಆತಿಥ್ಯ ವಹಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News