Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!

 Happy Birthday Rohit Sharma: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಜೀವನದ ಕೆಲವು ಕುತೂಹಲಕಾರಿಯಾದ ವಿಚಾರಗಳು ಸದ್ದುಮಾಡುತ್ತಿವೆ.. 

Written by - Savita M B | Last Updated : Apr 30, 2024, 12:24 PM IST
  • ‌ಐಪಿಎಲ್‌ನ ಪ್ರಮುಖ ಪಂದ್ಯ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ನಡೆಯಲಿದೆ
  • . ಅಲ್ಲದೇ ಐಪಿಎಲ್‌ನಲ್ಲಿ ಉಳಿಯಲು ಮುಂಬೈ ಇಂಡಿಯನ್ಸ್‌ಗೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯ.
Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!! title=

‌Team India Captain Rohit Sharma: ಐಪಿಎಲ್‌ನ ಪ್ರಮುಖ ಪಂದ್ಯ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು (ಏಪ್ರಿಲ್ 30) ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ತಮ್ಮ ಹುಟ್ಟುಹಬ್ಬದಂದು ಮುಂಬೈ ಇಂಡಿಯನ್ಸ್ ಗೆ ಗೆಲುವನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ಉಳಿಯಲು ಮುಂಬೈ ಇಂಡಿಯನ್ಸ್‌ಗೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯ.

ರೋಹಿತ್ ಶರ್ಮಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಫೇಮಸ್ ಬ್ಯಾಟ್ಸ್‌ಮನ್‌ಗಳಲ್ಲಿ‌ ಒಬ್ಬರಾಗಿದ್ದಾರೆ.. ಇಂದು ಕೋಟಿಗಟ್ಟಲೆ ಆಸ್ತಿ ಹೊಂದಿರುವ ರೋಹಿತ್‌ ಶರ್ಮಾ ಒಂದು ಕಾಲದಲ್ಲಿ ಸ್ಕೂಲ್‌ ಫೀಸ್‌ ಕಟ್ಟಲು ಒದ್ದಾಡಿದ್ದರಂತೆ.. ವರದಿಗಳ ಪ್ರಕಾರ, ಪ್ರಸ್ತುತ 214 ಕೋಟಿ ಒಡೆಯನಾಗಿರುವ ರೋಹಿತ್ ತಮ್ಮ ಬಾಲ್ಯದಲ್ಲಿ 275 ರೂ.ಗಳನ್ನು ಪಾವತಿಸಲು ಸಾಧ್ಯವಾಗದ ಸಮಯವಿತ್ತು.. ಆಗ ಇವರ ಅದೃಷ್ಟ ಬದಲಿಸಿದ್ದು ಕೋಚ್ ದಿನೇಶ್ ಲಾಡ್..

ಇದನ್ನೂ ಓದಿ-IPL 2024ರ RCB ತಂಡದಲ್ಲಿ ಘರ್ಜಿಸುತ್ತಿರುವ ವಿಲ್‌ಜ್ಯಾಕ್ಸ್‌ ಗರ್ಲ್‌ಫ್ರೆಂಡ್‌ ಯಾರು ಗೊತ್ತಾ? ಈಕೆ ಮಾಡುತ್ತಿರುವ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ!!

ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ದಿನೇಶ್ ಲಾಲ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ವಾಸ್ತವವಾಗಿ, ಸಮರ್‌ ಕ್ಯಾಂಪ್‌ನಲ್ಲಿ ರೋಹಿತ್ ಶರ್ಮಾ ಅವರ ಆಟವನ್ನು ನೋಡಿದ ನಂತರ ಕೋಚ್ ದಿನೇಶ್ ಲಾಲ್ ಸಾಕಷ್ಟು ಪ್ರಭಾವಿತರಾಗಿ ಅವರನ್ನು ತಮ್ಮ ಶಾಲೆಗೆ ಸೇರಿಸುವಂತೆ ರೋಹಿತ್ ಚಿಕ್ಕಪ್ಪನ ಹತ್ತಿರ ಕೇಳಿಕೊಂಡಿದ್ದರಂತೆ.. ರೋಹಿತ್ ತನ್ನ ಚಿಕ್ಕಪ್ಪನೊಂದಿಗೆ ಓದಲು ಹೋಗುತ್ತಿದ್ದ ಶಾಲೆಯ ಶುಲ್ಕ ಕೇವಲ 30 ರೂ. ಆದರೆ ದಿನೇಶ್ ಲಾಲ್ ಅವರನ್ನು ಕರೆತರಲು ಬಯಸಿದ್ದ ಶಾಲೆಯಲ್ಲಿ ಶುಲ್ಕ 275 ರೂ. ಹೀಗಾಗಿ ಚಿಕ್ಕಪ್ಪ ಅವರನ್ನು ಆ ಶಾಲೆಗೆ ಸೇರಿಸಲು ನಿರಾಕರಿಸಿದ್ದರಂತೆ..  

 ಇದಾದ ನಂತರ ದಿನೇಶ್ ಲಾಡ್ ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿ ರೋಹಿತ್ ಶರ್ಮಾ ಅವರ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಕೋರಿ, ರೋಹಿತ್ ಗೆ ಉಚಿತ ಶಿಕ್ಷಣ ಕೊಡಿಸಿ.. ರೋಹಿತ್‌ ಹಿಟ್‌ಮ್ಯಾನ್‌ ಆಗಲು ಕಾರಣರಾಗಿದ್ದಾರೆ..  

ಇದನ್ನೂ ಓದಿ-ಭಾರತದ ಶ್ರೇಷ್ಠ ಬೌಲರ್ ಶಾರ್ದೂಲ್ ಠಾಕೂರ್ ಪತ್ನಿ ಎಷ್ಟೊಂದು ಕ್ಯೂಟ್! ಈಕೆಯ ಅಂದದ ಮುಂದೆ ಅನುಷ್ಕಾ ಬ್ಯೂಟಿ ಕೂಡ ಯಾವ ಲೆಕ್ಕಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News