ವಿರಾಟ್ ಕೊಹ್ಲಿ ಪ್ರಕಾರ ಈ ಶ್ರೇಷ್ಠ ಆಟಗಾರನೇ ವಿಶ್ವದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ

Virat Kohli Statement About Shakib Al Hasan: ಭಾರತ 2011, 2015 ಮತ್ತು 2019ರ ಏಕದಿನ ವಿಶ್ವಕಪ್‌’ನಲ್ಲಿ ಬಾಂಗ್ಲಾದೇಶವನ್ನು ಹೀನಾಯವಾಗಿ ಸೋಲಿಸಿತ್ತು. ಇನ್ನು, ಬಾಂಗ್ಲಾದೇಶವು 2007ರ ODI ವಿಶ್ವಕಪ್‌’ನಲ್ಲಿ ಭಾರತವನ್ನು ಸೋಲಿಸಿತ್ತು. ಇನ್ನು ಈ ತಂಡದ ಆಟಗಾರನ ಬಗ್ಗೆ ಭಾರತದ ಸ್ಟಾರ್ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

Written by - Bhavishya Shetty | Last Updated : Oct 18, 2023, 05:34 PM IST
    • ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ 2023 ಪಂದ್ಯ
    • ಭಾರತ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ 4 ಪಂದ್ಯಗಳು ನಡೆದಿವೆ
    • ಶಕೀಬ್ ಅಲ್ ಹಸನ್ ಬಗ್ಗೆ ಭಾರತ ತಂಡವು ಎಚ್ಚರಿಕೆಯಿಂದ ಇರಬೇಕು ಎಂದ ಕೊಹ್ಲಿ
ವಿರಾಟ್ ಕೊಹ್ಲಿ ಪ್ರಕಾರ ಈ ಶ್ರೇಷ್ಠ ಆಟಗಾರನೇ ವಿಶ್ವದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ title=
Virat Kohli

World Cup 2023: ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ 2023 ಪಂದ್ಯವು ಗುರುವಾರ ಅಂದರೆ ಅಕ್ಟೋಬರ್ 19 ರಂದು ಪುಣೆಯ MCA ಸ್ಟೇಡಿಯಂನಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್‌’ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ 4 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದಿದ್ದರೆ ಬಾಂಗ್ಲಾದೇಶ ಒಂದು ಪಂದ್ಯವನ್ನು ಗೆದ್ದಿದೆ.

ಭಾರತ 2011, 2015 ಮತ್ತು 2019ರ ಏಕದಿನ ವಿಶ್ವಕಪ್‌’ನಲ್ಲಿ ಬಾಂಗ್ಲಾದೇಶವನ್ನು ಹೀನಾಯವಾಗಿ ಸೋಲಿಸಿತ್ತು. ಇನ್ನು, ಬಾಂಗ್ಲಾದೇಶವು 2007ರ ODI ವಿಶ್ವಕಪ್‌’ನಲ್ಲಿ ಭಾರತವನ್ನು ಸೋಲಿಸಿತ್ತು. ಇನ್ನು ಈ ತಂಡದ ಆಟಗಾರನ ಬಗ್ಗೆ ಭಾರತದ ಸ್ಟಾರ್ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಬಳಕೆ ಮಾಡುವ ಕ್ರಿಕೆಟ್ ಹೆಲ್ಮೆಟ್ ಬೆಲೆಯೆಷ್ಟು ಗೊತ್ತಾ?

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಬಗ್ಗೆ ಭಾರತ ತಂಡವು ಎಚ್ಚರಿಕೆಯಿಂದ ಇರಬೇಕು ಎಂದು ವಿರಾಟ್ ಕೊಹ್ಲಿ 'ಸ್ಟಾರ್ ಸ್ಪೋರ್ಟ್ಸ್' ಜೊತೆ ಮಾತನಾಡುತ್ತಾ ಹೇಳಿದ್ದಾರೆ. “ಕಳೆದ ಕೆಲವು ವರ್ಷಗಳಲ್ಲಿ ನಾನು ಅವರ (ಶಕೀಬ್ ಅಲ್ ಹಸನ್) ವಿರುದ್ಧ ಸಾಕಷ್ಟು ಆಡಿದ್ದೇನೆ. ಶಕೀಬ್ ಅಲ್ ಹಸನ್ ಅದ್ಭುತ ನಿಯಂತ್ರಣ ಹೊಂದಿದ್ದಾರೆ. ಅವರು ಅತ್ಯಂತ ಅನುಭವಿ ಬೌಲರ್. ಹೊಸ ಚೆಂಡಿನಲ್ಲೂ ಅವರು ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ” ಎಂದು ಹೇಳಿದ್ದಾರೆ.

2023ರ ವಿಶ್ವಕಪ್‌’ನಲ್ಲಿ ಯಾವುದೂ ಕೂಡ ‘ಶ್ರೇಷ್ಠ ತಂಡಗಳು' ಇಲ್ಲ. ಈ ಪಂದ್ಯಾವಳಿಯಲ್ಲಿ ಜನರು ಹೆಚ್ಚು ಯಶಸ್ವಿ ತಂಡಗಳ ಬಗ್ಗೆ ಮಾತನಾಡುವಾಗ, ಅಸಮಾಧಾನದ ಸಾಧ್ಯತೆಗಳು ಹೆಚ್ಚು ಎಂದು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಶ್ರೇಷ್ಠ ತಂಡಗಳಿಲ್ಲ. ನೀವು ಹೆಚ್ಚು ಯಶಸ್ವಿ ತಂಡಗಳ ಮೇಲೆ ಮಾತ್ರ ಕೇಂದ್ರೀಕರಿಸಲು ಪ್ರಾರಂಭಿಸಿದಾಗಲೆಲ್ಲಾ ನಿರಾಶೆ ಉಂಟಾಗುತ್ತದೆ.2007 ರ ವಿಶ್ವಕಪ್‌’ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತವು ರಿವರ್ಸ್‌’ಗೆ ಬಲಿಯಾಗಿದೆ. ಆದರೆ, ಇದಾದ ಬಳಿಕ ತಂಡ ಸತತ ಮೂರು ಬಾರಿ ಈ ತಂಡದ ಮೇಲೆ ಪ್ರಭುತ್ವ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆರಳಿಗೆ ಬಾಲ್ ತಗುಲಿ ಗಾಯಕ್ಕೆ ತುತ್ತಾದ ಕ್ಯಾಪ್ಟನ್! ಆಲ್’ರೌಂಡರ್’ಗೆ ನಾಯಕತ್ವ ವಹಿಸಿದ ಸಮಿತಿ

ಇನ್ನು ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕೊಹ್ಲಿ ಮಾತಿಗೆ ಸಮ್ಮತಿಸಿದ್ದು, “ಈ ರೀತಿಯ ಬೌಲರ್‌ಗಳ ವಿರುದ್ಧ ನೀವು ನಿಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಬೇಕು. ವಿಫಲವಾದರೆ, ಈ ಬೌಲರ್‌’ಗಳು ನಿಮ್ಮ ಮೇಲೆ ಒತ್ತಡ ಹೇರುತ್ತಾರೆ ಮತ್ತು ಔಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News