ಸಚಿವ ವಿ.ಸೋಮಣ್ಣ ಮುನಿಸಿಗೆ ಹೈಕಮಾಂಡ್ ಮುಲಾಮು. ಅಮಿತ್ ಶಾ ಭೇಟಿ ಬಳಿಕ ಸಮಾಧಾನಗೊಂಡಿರುವ ಸೋಮಣ್ಣ. ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ ಉಭಯ ನಾಯಕರು. BJP ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆಗೂ ಚರ್ಚೆ. ಸಂಧಾನ ಸಕ್ಸಸ್, ಬೆಂಗಳೂರಿನತ್ತ ಆಗಮಿಸುತ್ತಿರುವ ಸಚಿವ.
ನಮ್ಮ ಬಿಜೆಪಿಯಲ್ಲಿ ಸ್ವಲ್ಪ ಮೆಂಟಲ್ ಗಿರಾಕಿಗಳು ಇದ್ದಾರೆ. ಇಂತಹ ಗಿರಾಕಿಗಳ ವಿರುದ್ಧ ಜಿಲ್ಲಾಧ್ಯಕ್ಷರು ಕ್ರಮ ವಹಿಸಬೇಕು ಎಂದು ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಗುಡುಗಿದ್ರು.
ದಿಢೀರ್ ದೆಹಲಿ ಪ್ರವಾಸಕ್ಕೆ ತೆರಳಲು ಸೋಮಣ್ಣ ನಿರ್ಧಾರ. ಕುತೂಹಲ ಕೆರಳಿಸಿದ ಸಚಿವ ವಿ.ಸೋಮಣ್ಣ ದೆಹಲಿ ಭೇಟಿ. ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ. ಇತ್ತೀಚೆಗೆ ಪಕ್ಷದ ನಾಯಕರ ಬಗ್ಗೆ ಸೋಮಣ್ಣ ಅಸಮಾಧಾನ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂಬ ಚರ್ಚೆ. ರಾಜಕೀಯ ಪಡಸಾಲೆಯಲ್ಲಿ ಭಾರೀ ಜೋರಾಗಿ ನಡೀತಿದೆ ಚರ್ಚೆ. BYS ಪುತ್ರನ ಬಗ್ಗೆ ಸೋಮಣ್ಣ ಪುತ್ರ ಅರುಣ್ ಅಸಮಾಧಾನ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಡಲು ಸೋಮಣ್ಣ ನಿರ್ಧಾರ..?
ಮುಧೋಳದಲ್ಲಿ ಕಾರಜೋಳರನ್ನ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಬಿಜೆಪಿಯಲ್ಲಿ ಮೋದಿ , ಅಮಿತ್ ಶಾ ಅವರಂತಹ ನಾಯಕರಿದ್ದಾರೆ ಎಂದು BJP ಯಾತ್ರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು. ಮುಧೋಳದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಷಣ. ಕರ್ನಾಟಕವನ್ನ ಮಾದರಿ ರಾಜ್ಯವನ್ನಾಗಿಸೋ ಗುರಿ ಪ್ರಧಾನಿಗೆ ಇದೆ. ಹಣಬಲ, ತೋಳ್ಬಲದಿಂದ ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುತ್ತಿದೆ ಎಂದು ವಾಗ್ದಾಳಿ.
ನಮಗೆ ಟೋಪಿ ಹಾಕಿದವರು ಬಿಜೆಪಿಗೂ ಟೋಪಿ ಹಾಕ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಎನ್.ಮಹೇಶ್ ಕಿಡಿಕಾರಿದ್ದಾರೆ. ಜೆಡಿಎಸ್ನ್ನು ಯಾಕೆ ಬಿಟ್ಟು ಹೋದ್ರು ಅಂತಾ ಹೇಳಬೇಕು. ಹಗುರವಾಗಿ ಚುನಾವಣೆ ವೇಳೆ HDK ಮಾತಾಡಬಾರದು ಎಂದು ಕೆಆರ್ಪೇಟೆಯಲ್ಲಿ ಶಾಸಕ ಎನ್.ಮಹೇಶ್ ಹೇಳಿದ್ರು.
ಬೊಮ್ಮಾಯಿ ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ ಎಂದು ದಾವಣಗೆರೆಯಲ್ಲಿ ಬೊಮ್ಮಾಯಿ ಬಗ್ಗೆ ಸುರ್ಜೇವಾಲಾ ಕಿಡಿಕಾರಿದ್ದಾರೆ.. ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಹೆಸರುವಾಸಿಯಾಗಿದೆ. ರಾಜ್ಯಕ್ಕೆ ಬಂದಾಗ ಮೋದಿ ಇದರ ಬಗ್ಗೆ ಒಂದು ಮಾತಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕ ದಡೇಸೂಗೂರು ಐಶಾರಾಮಿ ಕಾರ್ ಬಿಟ್ಟು ಗ್ರಾಮದಲ್ಲಿ ಬೈಕ್ ಏರಿ ಬಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಬೈಕ್ನಲ್ಲೇ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ಸಂಚಾರ ಮಾಡಿದ್ದಾರೆ. ಶಾಸಕ ದಡೇಸೂಗೂರು ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.