Russia - Ukraine War : ಕ್ರಿಮಿಯನ್ ಪೆನಿನ್ಸುಲಾದಲ್ಲಿರುವ ರಷ್ಯಾದ ನೌಕಾ ಪ್ರಧಾನ ಕಛೇರಿಯನ್ನು ನಾಶಪಡಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಇದರೊಂದಿಗೆ ಕಪ್ಪು ಸಮುದ್ರದ ಫ್ಲೀಟ್ ಕಮಾಂಡರ್ ವಿಕ್ಟರ್ ಸೊಕೊಲೊವ್ ಕೂಡ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
'ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ಕರುಣಿಸಲಿ. ಪುತ್ರನ ಪಾರ್ಥೀವ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿ ಅವರ ಫೋಷಕರು ಸಾರ್ಥಕತೆ ಮೆರೆದಿದ್ದಾರೆ'
ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ರಫ್ತು ಮಾಡದಂತೆ ಭಾರತ ಸೇರಿದಂತೆ ಇತರ ದೇಶಗಳಿಗೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ. ಇದು ಉಕ್ರೇನ್ನೊಂದಿಗಿನ ಯುದ್ಧಕ್ಕೆ ರಷ್ಯಾ ಹಣವನ್ನು ನೀಡುತ್ತದೆ ಎಂಬುವುದು ಆ ದೇಶಗಳ ನಂಬಿಕೆಯಾಗಿದೆ.
ರಷ್ಯಾದ ಸೇನಾ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವನ್ನಪ್ಪಿದ್ದಾರೆ. ಕೈವ್ನಲ್ಲಿರುವ ವಸತಿ ಕಟ್ಟಡದ ಮೇಲೆ ನಡೆಸಿದ ರಷ್ಯಾದ ರಾಕೆಟ್ ದಾಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಶತ್ರುದೇಶಕ್ಕೆ ಸವಾಲು ಹಾಕಿದ್ದಾರೆ. ಉಕ್ರೇನ್ ನ ರಾಷ್ಟ್ರಪತಿ ಭವನದಿಂದ ಶತ್ರು ಸೇನೆಗೆ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ನಲ್ಲಿದ್ದ ರಾಜ್ಯದ ಹಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಉಕ್ರೇನ್ನ ಸದ್ಯದ ಪರಿಸ್ಥಿತಿ ಹಾಗೂ ಅಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Russia Ukrain War Update: 'ರಷ್ಯಾದ ಸೈನಿಕರು ದೊಡ್ಡ ಪ್ರಮಾಣದಲ್ಲಿ ಕೈವ್ನಲ್ಲಿ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೈವ್ಗಾಗಿ ನಡೆಯುವ ಪ್ರಮುಖ ಹೋರಾಟ ಇದಾಗಲಿದೆ ಎಂದು ಉಕ್ರೇನ್ ಅಧಿಕಾರಿಗಳು ರಷ್ಯಾದ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ, ಹೇಳಿದ್ದಾರೆ.
ಉಕ್ರೇನ್ನಿಂದ ಸುರಕ್ಷಿತವಾಗಿ ವಾಪಸಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಚೈತ್ರಾ ಗಂಗಾಧರ ಸಂಶಿಯವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಆತ್ಮಿಯ ಸ್ವಾಗತ ಕೋರಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 100 ಡಾಲರ್ ಗಡಿ ದಾಟಿದೆ.
Russia Child Army: ರಷ್ಯಾ (Russia) ಸೇನೆ ಉಕ್ರೇನ್ (Ukraine) ಮೇಲೆ ಬಾಂಬ್ ದಾಳಿ (Russia-Ukraine War) ನಡೆಸಿದ್ದರಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಆದರೆ ಯಾರಿಗೂ ಕೂಡ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ರಷ್ಯಾ ಬಳಿ 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಒಂದು 'ಮಕ್ಕಳ ಸೈನ್ಯ'ವಿದೆ (Russian Child Army). ಇದರಲ್ಲಿ 8 ವರ್ಷದೊಳಗಿನ ಮಕ್ಕಳು ಎಕೆ 47 ನಿಂದ ಯಾರನ್ನಾದರೂ ಕೂಡ ಹೊಡೆಯಬಲ್ಲ ಅಪಾಯಕಾರಿ ತರಬೇತಿಯನ್ನು ಹೊಂದಿದ್ದಾರೆ.
Russia-Ukrain War - ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಗೋಧಿಯ ಜಾಗತಿಕ ಪೂರೈಕೆ ಅಪಾಯಕ್ಕೆ ಸಿಲುಕಿದೆ. ಏಕೆಂದರೆ ಚೀನಾ, ಭಾರತ ಮತ್ತು ರಷ್ಯಾ ವಿಶ್ವದ ಅತಿ ಹೆಚ್ಚು ಗೋಧಿಯನ್ನು ಉತ್ಪಾದಿಸುವ ರಾಷ್ಟ್ರಗಳಾಗಿವೆ. ಇದರೊಂದಿಗೆ, ಗೋಧಿ ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್ ಐದನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಗೋಧಿ ಬೆಲೆ ಹೆಚ್ಚಾಗತೊಡಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.