ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕಚ್ಚಾ ತೈಲದ ಆಮದುಗಳ ಬಗ್ಗೆ ಭಾರತವನ್ನು ಟೀಕಿಸುವ ಮೂಲಕ ತಮ್ಮ "ಸ್ವಂತ ಕಾನೂನುಬಾಹಿರ ನಿರ್ಬಂಧಗಳಿಂದ" ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುವುದು ಅವರ ತತ್ವರಹಿತ ಸ್ಥಾನ ಮತ್ತು ದ್ವಿಗುಣವನ್ನು ಪ್ರತಿಬಿಂಬಿಸುತ್ತದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಭಾನುವಾರ ಹೇಳಿದ್ದಾರೆ.
ತೈಲ ಮತ್ತು ಅನಿಲ ಖರೀದಿಗಳ ಮೂಲಕ ರಷ್ಯಾಕ್ಕೆ ನೆರವಾಗಲು ಚೀನಾ ಮುಂದಾಗಿರುವುದು ಈಗ ಅಮೇರಿಕಾವನ್ನು ಕೆರಳಿಸಿದೆ ಎನ್ನಲಾಗಿದೆ. ಈ ಹಿಂದೆ ಉಕ್ರೇನ್ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಮತ ಹಾಕುವ ಬದಲು ತಟಸ್ಥ ಧೋರಣೆಯನ್ನು ಅನುಸರಿಸಿದ್ದ ಚೀನಾ ದೇಶವು, ಈಗ ಪಾಶ್ಚಾತ್ಯ ದೇಶಗಳು ರಷ್ಯಾಗೆ ದಿಗ್ಬಂಧನ ವಿಧಿಸಿರುವ ಬೆನ್ನಲ್ಲೇ ರಷ್ಯಾಗೆ ನೆರವಾಗಲು ಮುಂದೆ ಬಂದಿರುವುದು ಅಮೇರಿಕಾದ ಕೆಂಗಣ್ಣಿಗೆ ಗುರಿಯಾಗಿದೆ.
ಪುಟಿನ್ ಮಗಳು ಕ್ಯಾಥರಿನಾ ಟಿಕೊನೊವಾ ಈ ಹಿಂದೆ ನರ್ತಕಿಯಾಗಿ ಕೆಲಸ ಮಾಡುತ್ತಿದ್ದರು. ಕ್ಯಾತೆರಿನಾ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡಿದವು.
ಪೂರ್ವ ಉಕ್ರೇನ್ನ ಬಿಲೋಹೊರಿವ್ಕಾ ಗ್ರಾಮದ ಶಾಲೆಯೊಂದರ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದು ತಿಳಿದುಬಂದಿದ್ದು ಮತ್ತು ಅವಶೇಷಗಳಲ್ಲಿ 60 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಲುಹಾನ್ಸ್ಕ್ ಪ್ರದೇಶದ ಗವರ್ನರ್ ಭಾನುವಾರ ಹೇಳಿದ್ದಾರೆ.
Russia-Ukraine Conflict - ಉಕ್ರೇನ್ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿದೆ ಮತ್ತು ಮಾಸ್ಕೋದ (Mascow) ಈ ಆಕ್ರಮಣ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಪರಮಾಣು ಪಡೆಗಳನ್ನು (Nuclear Forces) ವಿಶೇಷ ಎಚ್ಚರಿಕೆಯಲ್ಲಿ ಇರಿಸಿರುವ ಹಲವು ಗಂಟೆಗಳ ನಂತರ ರಷ್ಯಾ ತನ್ನ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು (Nuclear Submarine) ಸಮುದ್ರಕ್ಕೆ ಇಳಿಸಿದೆ. ಇದರಿಂದಾಗಿ ಪರಮಾಣು ಯುದ್ಧದ ಅಪಾಯ ಎದುರಾಗಿದೆ.
'ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ಕರುಣಿಸಲಿ. ಪುತ್ರನ ಪಾರ್ಥೀವ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿ ಅವರ ಫೋಷಕರು ಸಾರ್ಥಕತೆ ಮೆರೆದಿದ್ದಾರೆ'
ರಷ್ಯಾ ಜೊತೆಗಿನ ಉತ್ತಮ ಸಂಬಂಧದಿಂದಾಗಿ ಯುದ್ಧಕ್ಕೆ (Russia-Ukraine War) ಯುಎನ್ನಲ್ಲಿ ರಷ್ಯಾ ವಿರುದ್ಧ ಮತದಾನದಲ್ಲಿ ಭಾರತ ಭಾಗವಹಿಸಲಿಲ್ಲ. ಅದರ ನಂತರ ಭಾರತವು ರಷ್ಯಾದಿಂದ ಅಗ್ಗದ ತೈಲದ ಪ್ರಸ್ತಾಪವನ್ನು ಪಡೆದುಕೊಂಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia-Ukraine War) 21ನೇ ದಿನವಾದ ಬುಧವಾರವೂ ಮುಂದುವರೆದಿದೆ. ರಷ್ಯಾದ ಸೈನಿಕರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಉಕ್ರೇನ್ ಜೊತೆಗಿನ ಯುದ್ಧದ ನಡುವಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಪುಟೀನ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಷ್ಯಾ ಮೇಲೆ ಅನೇಕ ನಿಷೇಧಗಳನ್ನು ಹೇರಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಭದ್ರತಾ ಸಿದ್ಧತೆ, ಸ್ಥಳಾಂತರಿಸುವ ಸ್ಥಿತಿ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶಗಳ ವಿಚಾರವಾಗಿ ಪ್ರಧಾನಿ ಮೋದಿ (PM Narendra Modi) ಅವರು ಭಾನುವಾರದಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
Saudi Arabia: ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದ ನಡುವೆಯೇ ಒಂದು ದೇಶದಲ್ಲಿ 81 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಜಗತ್ತಿನಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಣದಂಡನೆ ಶಿಕ್ಷೆ (Mass Death Penalty) ವಿಧಿಸಲಾಗಿದ್ದು ಇದೆ ಮೊದಲಬಾರಿಗೆ ಎನ್ನಲಾಗಿದೆ.
ಪಶ್ಚಿಮದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಶೀಘ್ರವಾಗಿ ಅದು ವಿಧಿಸಿರುವ ನಿರ್ಬಂಧಗಳಿಗೆ ವಿಸ್ತೃತವಾಗಿ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ರಷ್ಯಾ ಕಾರ್ಯ ನಿರ್ವಹಿಸುತ್ತಿದೆ ಎಂದು ಪಶ್ಚಿಮದ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕಷ್ಟದ ಸಮಯದಲ್ಲಿ ಸಹಾಯ ಮಾಡಿರುವ ಕಾರಣಕ್ಕೆ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಹುಡುಗಿ ಬೆಂಬಲ ಸೂಚಿಸಿದ್ದಾರೆ. ಯುದ್ಧ ಪೀಡಿತ ಪ್ರದೇಶದಲ್ಲಿ ಸಿಕ್ಕಿಬಿದ್ದ ಬಾಲಕಿಯನ್ನು ಸುರಕ್ಷಿತವಾಗಿ ಹೊರತರಲು ಭಾರತೀಯ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಹೇಳಿ ಪಾಕಿಸ್ತಾನದ ಯುವತಿ ವಿಡಿಯೋ ಮಾಡಿದ್ದಾರೆ.
Russia-Ukraine Tension - ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭಾರತಕ್ಕೆ ದೊಡ್ಡ ಪಾಠವೆಂದರೆ ಭವಿಷ್ಯದ ಯುದ್ಧಗಳನ್ನು ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಲು ನಾವು ಸಿದ್ಧರಾಗಿರಬೇಕು ಎಂದು ಸೇನಾ ಮುಖ್ಯಸ್ಥ (Army Chief) ಜನರಲ್ ಮನೋಜ್ ಮುಕುಂದ್ ನರವಣೆ (MM Naravane) ಮಂಗಳವಾರ ಹೇಳಿದ್ದಾರೆ.
ಉಕ್ರೇನ್ನಲ್ಲಿ ವಿನಾಶವನ್ನುಂಟುಮಾಡುತ್ತಿರುವ ರಷ್ಯಾದ ಸೇನೆಯ ವಾಹನಗಳ ಮೇಲಿನ 'Z' ಗುರುತಿನ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಎಲ್ಲಾ ಮಿಲಿಟರಿ ವಾಹನಗಳಲ್ಲಿ ಒಂದೇ ರೀತಿಯಲ್ಲಿ Z ಚಿಹ್ನೆಯನ್ನು ಬರೆಯಲಾಗಿಲ್ಲ. ಕೆಲವು ಟ್ಯಾಂಕ್ ಗಳ ಮೇಲೆ Z ಎಂದು ನೇರವಾಗಿ ಬರೆಯಲಾಗಿದೆ .
ಉಕ್ರೇನ್ನಲ್ಲಿದ್ದ ರಾಜ್ಯದ ಹಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಉಕ್ರೇನ್ನ ಸದ್ಯದ ಪರಿಸ್ಥಿತಿ ಹಾಗೂ ಅಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.