Viral News: ಜಮೀನಿಗೆ ಎಂಟ್ರಿ ಕೊಟ್ಟ 13 ಅಡಿ ಉದ್ದದ ಕಿಂಗ್ ಕೋಬ್ರಾ! ಆಮೇಲೇನಾಯ್ತು?

ಆಂಧ್ರಪ್ರದೇಶದಲ್ಲಿ ತಾಳೆ ಎಣ್ಣೆ ತೋಟಕ್ಕೆ ನುಗ್ಗಿದ್ದ 13 ಅಡಿ ಉದ್ದದ ಕಿಂಗ್ ಕೋಬ್ರಾವನ್ನು ಉರಗ ತಜ್ಞರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Written by - Puttaraj K Alur | Last Updated : May 10, 2022, 07:41 PM IST
  • ತಾಳೆ ಎಣ್ಣೆಯ ತೋಟಕ್ಕೆ ನುಗ್ಗಿದ 13 ಅಡಿ ಉದ್ದದ ಕಾಳಿಂಗ ಸರ್ಪ
  • ಕಿಂಗ್ ಕೋಬ್ರಾವನ್ನು ಕಂಡು ಬೆಚ್ಚಿಬಿದ್ದ ಜಮೀನಿನ ಮಾಲೀಕ
  • ಘಟಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ ವೆಂಕಟೇಶ್
Viral News: ಜಮೀನಿಗೆ ಎಂಟ್ರಿ ಕೊಟ್ಟ 13 ಅಡಿ ಉದ್ದದ ಕಿಂಗ್ ಕೋಬ್ರಾ! ಆಮೇಲೇನಾಯ್ತು? title=
13 ಅಡಿ ಉದ್ದದ ಕಾಳಿಂಗ ಸರ್ಪ

ನವದೆಹಲಿ: ಹಾವು ಎಂದಾಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಬರುವ ಮೊದಲ ಪದವೇ ಭಯ. ಹಾವು ಎಂಬ ಹೆಸರು ಕೇಳಿದ್ರೆ ಸಾಕು ಹಲವರು ಬೆಚ್ಚಿಬೀಳ್ತಾರೆ. ಹಾವು ಕಂಡರೆ ಸಾಕು ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಆವರಿಸುತ್ತದೆ. ಆದರೆ, ಹಾವು ಹಿಡಿಯುವವರಿಗೆ ಅದರ ಬಗ್ಗೆ ಯಾವುದೇ ಭಯವಿರಲ್ಲ. ಅವರು ತಮ್ಮ ಕೈಗಳಿಂದ ಹಾವುಗಳನ್ನು ಸುಲಭವಾಗಿ ಹಿಡಿಯುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ 13 ಅಡಿ ಉದ್ದದ ಕಿಂಗ್ ಕೋಬ್ರಾ ಅಂದರೆ ಕಾಳಿಂಗ ಸರ್ಪವನ್ನು ಹಿಡಿದಿರುವ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.

ತಾಳೆ ಎಣ್ಣೆ ತೋಟಕ್ಕೆ ಘಟಸರ್ಪ ಎಂಟ್ರಿ..!

ಇತ್ತೀಚೆಗೆ ಆಂಧ್ರಪ್ರದೇಶದ ರೈತರೊಬ್ಬರ ತಾಳೆ ಎಣ್ಣೆ ತೋಟಕ್ಕೆ 13 ಅಡಿ ಉದ್ದದ ಕಿಂಗ್ ಕೋಬ್ರಾ ಎಂಟ್ರಿಕೊಟ್ಟಿತ್ತು. ತಮ್ಮ ಜಮೀನಿನಲ್ಲಿ ಹಾವು ಕಂಡ ಸೈದಾರಾವ್ ಎಂಬ ರೈತನಿಗೆ ಭಾರೀ ಭಯವಾಗಿದೆ. ಕೂಡಲೇ ಅವರು ಈಸ್ಟರ್ನ್ ಘಟ್ಸ್ ವೈಲ್ಡ್ ಲೈಫ್ ಸೊಸೈಟಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹಾವು ಹಿಡಿಯುವ ವೆಂಕಟೇಶ್ ಜೊತೆ ಮಾತನಾಡಿದ ಅವರು ಕೂಡಲೇ ತಮ್ಮ ಜಮೀನಿಗೆ ಬಂದು ಕಿಂಗ್ ಕೋಬ್ರಾವನ್ನು ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.   

ಇದನ್ನೂ ಓದಿ: ದೇಶದ್ರೋಹದಡಿ ದಾಖಲಾದ ಪ್ರಕರಣಗಳ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ 24 ಗಂಟೆಗಳ ಗಡುವು

13 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿದ ಉರಗ ತಜ್ಞ

ರೈತನ ಕರೆಯ ಮೇರೆಗೆ ಜಮೀನಿಗೆ ಆಗಮಿಸಿದ ಉರಗ ತಜ್ಞ ವೆಂಕಟೇಶ್ ತಮ್ಮ ಹಾವು ಹಿಡಿಯುವ ಕೌಶಲ್ಯ ಪ್ರದರ್ಶಿಸಿ ಕೆಲವೇ ನಿಮಿಷಗಳಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದರು. ಅದನ್ನು ಗೋಣಿಚೀಲದಲ್ಲಿ ಹಾಕಿ ಬಳಿಕ ವಂಟಲಮಿಡಿ ಅರಣ್ಯ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ. ನೋಡಲು ಭಯಾನಕವಾಗಿದ್ದ ಕಿಂಗ್ ಕೋಬ್ರಾವನ್ನು ಉರಗ ತಜ್ಞ ಕೆಲವೇ ನಿಮಿಷಗಳಲ್ಲಿ ಹಿಡಿದಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸುದ್ದಿಮಾಧ‍್ಯಮಗಳು ವರದಿ ಮಾಡಿದ ಬಳಿಕ ಕಾಳಿಂಗ ಸರ್ಪವನ್ನು ಹಿಡಿದುಕೊಂಡಿರುವ ಉರಗ ತಜ್ಞ ವೆಂಕಟೇಶ್ ಅವರ ಫೋಟೋ ಸಖತ್ ವೈರಲ್ ಆಗಿದೆ.

ನೂರಾರು ಹಾವುಗಳ ರಕ್ಷಣೆ

ಉರಗ ತಜ್ಞ ವೆಂಕಟೇಶ್ ಅವರು ಈ ಹಿಂದೆಯೂ ನೂರಾರು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪವನ್ನು ಹಿಡಿಯುವುದು ಸುಲಭದ ಕೆಲಸವಲ್ಲ. ತುಂಬಾ ಅಪಯಕಾರಿ ಮತ್ತು ವಿಷಕಾರಿ ಕಾಳಿಂಗ ಸರ್ಪ ಹಿಡಿಯಲು ಭಾರೀ ಮುಂಜಾಗೃತೆ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ವಿಶೇಷ ಪರಿಣಿತಿ ಪಡೆದವರು ಮಾತ್ರ ಅವುಗಳನ್ನು ಸುಲಭವಾಗಿ ಹಿಡಿಯುತ್ತಾರೆ. ಕಿಂಗ್ ಕೋಬ್ರಾ ಕರ್ನಾಟಕ ಸೇರಿದಂತೆ ಹೆಚ್ಚಾಗಿ ಪಶ್ಚಿಮ ಘಟ್ಟಗಳು, ಪಶ್ಚಿಮ ಬಂಗಾಳ ಮತ್ತು ತೇರಾಯ್ ಪ್ರದೇಶದಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: Shocking News: ಹೆತ್ತ ಮಗನ ಮುಂದೆಯೇ ತಾಯಿಯ ಮೇಲೆ 79 ದಿನ ನಿರಂತರ ಅತ್ಯಾಚಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News