Cyclone Remal: ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಸಿದ ರೆಮಲ್ ಚಂಡಮಾರುತ, 10 ಸಾವು, ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿ

Cyclone Remal Effect: ಭಾರತದಲ್ಲಿ ಸಾಕಷ್ಟು ಹಾನಿಯುಂಟು ಮಾಡಿರುವ ರೆಮಲ್ ಚಂಡಮಾರುತ ನೆರೆಯ ಬಾಂಗ್ಲಾದೇಶದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ರೆಮಲ್ ಚಂಡಮಾರುತದಿಂದಾಗಿ ಬಾಂಗ್ಲಾದೇಶದಲ್ಲಿ ಹತ್ತು ಜನರು ಮೃತಪಟ್ಟಿದ್ದರೆ, ಲಕ್ಷಾಂತರ ಜನ ಸೂರು ಕಳೆದುಕೊಂಡಿದ್ದಾರೆ. 

Written by - Yashaswini V | Last Updated : May 28, 2024, 11:18 AM IST
  • ರೆಮಲ್ ಚಂಡಮಾರುತದ ಪ್ರಭಾವ ಮತ್ತು ಪ್ರತಿಕೂಲ ಹವಾಮಾನದ ಕಾರಣ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
  • ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ, ಹವಾಮಾನ ವೈಪರೀತ್ಯದಿಂದಾಗಿ 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ
  • ಇದಲ್ಲದೆ ಕೆಲವು ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ.
Cyclone Remal: ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಸಿದ ರೆಮಲ್ ಚಂಡಮಾರುತ, 10 ಸಾವು, ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿ title=

Remal Cyclone: ಪೂರ್ವ ಮಾನ್ಸೂನ್ ಋತುವಿನಲ್ಲಿ ಮೇ 26ರಂದು ಬಂಗಾಳ ಕೊಲ್ಲಿಯಲ್ಲಿ  ನಿರ್ಮಾಣವಾದ ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವೆ ಭೂಕುಸಿತವನ್ನು ಉಂಟು ಮಾಡಿತ್ತು. ಇದರಿಂದಾಗಿ ಬಂಗಾಳದಲ್ಲಿ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೆ, ಕರಾವಳಿ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಆಸ್ತಿಗೆ ವ್ಯಾಪಕ ಹಾನಿಯಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಹತ್ತು ಜನರು ಪ್ರಾಣಕಳೆದುಕೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. 

ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕೆ 10 ಬಲಿ (Cyclone Storm In Bangladesh) : 
ಭಾನುವಾರ (ಮೇ 26) ರಾತ್ರಿ ಬಾಂಗ್ಲಾದೇಶದ ಕರಾವಳಿ ಪ್ರದೇಶದಲ್ಲಿ ರೆಮಾಲ್ ಚಂಡಮಾರುತದಿಂದ (Cyclone Storm In Bangladesh) ಉಂಟಾದ ಭೂಕುಸಿತದಿಂದಾಗಿ 10 ಜನರು ಪ್ರಾಣಕಳೆದುಕೊಂಡಿದ್ದಾರೆ. ಮೃತರಲ್ಲಿ ಭೋಲಾ ಮತ್ತು ಬಾರಿಸಾಲ್ ಜಿಲ್ಲೆಗಳಲ್ಲಿ ತಲಾ ಮೂವರು ಮತ್ತು ಸತ್ಖಿರಾ, ಖುಲ್ನಾ, ಚಿತ್ತಗಾಂಗ್ ಮತ್ತು ಪಟುಖಾಲಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸೇರಿದ್ದಾರೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ರಾಜ್ಯ ಸಚಿವ ಎಂಡಿ ಮೊಹಿಬ್ಬುರ್ ರೆಹಮಾನ್ ಅವರನ್ನು ಉಲ್ಲೇಖಿಸಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. 

ಇದನ್ನೂ ಓದಿ- World War-3: ಈ ದಿನಾಂಕದಂದೇ ನಡೆಯುತ್ತೆ World War-3...! ಭಯಾನಕ ಭವಿಷ್ಯ ನುಡಿದ ಭಾರತೀಯ ಜೋತಿಷ್ಯಿ

ಲಭ್ಯವಿರುವ ಮಾಹಿತಿಯ ಪ್ರಕಾರ, ರೆಮಾಲ್ ಚಂಡಮಾರುತದಿಂದಾಗಿ ಬಾಂಗ್ಲಾದೇಶದಲ್ಲಿ (Bangladesh)  19 ಜಿಲ್ಲೆಗಳಿಗೆ ಹಾನಿಯಾಗಿದೆ. ಇವುಗಳಲ್ಲಿ ಜಲಕಾತಿ, ಬಾರಿಶಾಲ್, ಪಟುಖಾಲಿ, ಪಿರೋಜ್‌ಪುರ, ಬರ್ಗುನಾ, ಖುಲ್ನಾ, ಸತ್ಖಿರಾ, ಬಗರ್‌ಹಾಟ್, ಬರ್ಗುನಾ, ಭೋಲಾ, ಫೆನಿ, ಕಾಕ್ಸ್ ಬಜಾರ್, ಚಿತ್ತಗಾಂಗ್, ನೊವಾಖಾಲಿ, ಲಕ್ಷ್ಮಿಪುರ್ , ಗೋಪಾಲ್ಗಂಜ್, ಶರಿಯತ್ಪುರ್ ಮತ್ತು ಜೆಸ್ಸೋರ್ ಜಿಲ್ಲೆಗಳು ಸೇರಿವೆ ಎಂದು  ಸಚಿವ ಎಂಡಿ ಮೊಹಿಬ್ಬುರ್ ರೆಹಮಾನ್ ಮಾಹಿತಿ ನೀಡಿದ್ದಾರೆ. 

ಒಂದೂವರೆ ಲಕ್ಷ ಮನೆಗಳಿಗೆ ಹಾನಿ, 9 ಸಾವಿರ ಶೆಲ್ಟರ್‌ಗಳ ನಿರ್ಮಾಣ: 
ಈ ಕುರಿತಂತೆ ನಿನ್ನೆ (ಮೇ 27) ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ರೆಮಾಲ್ ಚಂಡಮಾರುತದಿಂದಾಗಿ (Remal Cyclone) ಬಾಂಗ್ಲಾದೇಶದಲ್ಲಿ 150,457 ಮನೆಗಳಿಗೆ ಹಾನಿಯಾಗಿದ್ದು, ಬಾಂಗ್ಲಾದೇಶದ 107 ಒಕ್ಕೂಟಗಳು ಮತ್ತು 914 ಪುರಸಭೆಗಳಲ್ಲಿ 35,483 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.  ಬಾಂಗ್ಲಾದೇಶದ ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 9424 ಆಶ್ರಯಗಳನ್ನು ತೆರೆಯಲಾಗಿದ್ದು, ಇಲ್ಲಿ 800,000 ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ, 52 ಸಾವಿರಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಸಹ ಈ ಪ್ರದೇಶಗಳಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. 

ಇದಲ್ಲದೆ, ಸಂತ್ರಸ್ತರಿಗಾಗಿ  6.85 ಕೋಟಿ ಅನುದಾನ ನೀಡಲಾಗಿದ್ದು  15 ಜಿಲ್ಲೆಗಳಲ್ಲಿ 3.85 ಕೋಟಿ, 5,500 ಟನ್ ಅಕ್ಕಿ, 5,000 ಒಣ ಆಹಾರ, ಶಿಶು ಆಹಾರಕ್ಕಾಗಿ 1.50 ಕೋಟಿ ಮತ್ತು ಮೇವಿಗೆ 1.50 ಕೋಟಿ ಒದಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- 16 ವರ್ಷ ಬಾಲಕಿ ಕಾಮ್ಯಾ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ, ಅತಿ ಕಿರಿಯ ಭಾರತೀಯ ಎಂಬ ದಾಖಲೆ

ಜನರ ಚಿಕಿತ್ಸೆಗಾಗಿ 1,471 ವೈದ್ಯಕೀಯ ತಂಡಗಳ ರಚನೆ: 
ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದ್ದು ಚಿಕಿತ್ಸೆಗಾಗಿ ಒಟ್ಟು 1,471 ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ. ಈ ವೈದ್ಯಕೀಯ ತಂಡದಲ್ಲಿ  1,400 ತಂಡಗಳು ಸಕ್ರಿಯವಾಗಿವೆ ಎಂದು  ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News