Britain ನ ಪ್ರತಿಷ್ಠಿತ 'ವರ್ಷದ ಗವರ್ನರ್ 2023' ಪ್ರಶಸ್ತಿಗೆ ಭಾಜನರಾದ ಶಕ್ತಿಕಾಂತ ದಾಸ್

RBI Governor: ಶಕ್ತಿಕಾಂತ ದಾಸ್ ಅವರಿಗೆ ಬ್ರಿಟನ್‌ನ ಪ್ರತಿಷ್ಠಿತ 'ವರ್ಷದ ಗವರ್ನರ್ 2023' ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳವಾರ ಲಂಡನ್‌ನಲ್ಲಿ 'ಸೆಂಟ್ರಲ್ ಬ್ಯಾಂಕಿಂಗ್' ಪರವಾಗಿ ದಾಸ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.  

Written by - Nitin Tabib | Last Updated : Jun 14, 2023, 11:35 PM IST
  • ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ತಕ್ಷಣವೇ ಹಣದುಬ್ಬರವನ್ನು ಎದುರಿಸುವ ಕಾರ್ಯವನ್ನು ಕೇಂದ್ರೀಯ ಬ್ಯಾಂಕುಗಳು ತೆಗೆದುಕೊಳ್ಳಬೇಕಾಗಿತ್ತು.
  • ಭಾರತದಲ್ಲಿ ವಿತ್ತೀಯ ನೀತಿಯ ಕುರಿತು, ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ಕ್ರಮಗಳ
  • ಸಂಚಿತ ಪರಿಣಾಮವು ಇನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
Britain ನ ಪ್ರತಿಷ್ಠಿತ 'ವರ್ಷದ ಗವರ್ನರ್ 2023' ಪ್ರಶಸ್ತಿಗೆ ಭಾಜನರಾದ ಶಕ್ತಿಕಾಂತ ದಾಸ್  title=

RBI Governor Shaktikanta Das: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಕ್ತಿಕಾಂತ ದಾಸ್ ಅವರಿಗೆ ಬ್ರಿಟನ್‌ನ ಪ್ರತಿಷ್ಠಿತ 'ವರ್ಷದ ಗವರ್ನರ್ 2023' ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳವಾರ ಲಂಡನ್‌ನಲ್ಲಿ 'ಸೆಂಟ್ರಲ್ ಬ್ಯಾಂಕಿಂಗ್' ಪರವಾಗಿ ದಾಸ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂಸ್ಥೆಯು ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಮತ್ತು ಹಣಕಾಸು ನಿಯಂತ್ರಕರಿಗೆ ಸಂಬಂಧಿಸಿದ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುತ್ತದೆ ಮತ್ತು ವಿಶ್ಲೇಷಿಸುತ್ತದೆ.

ಮಾರ್ಚ್‌ನಲ್ಲಿ ಘೋಷಣೆ ಮಾಡಲಾಗಿತ್ತು
ಆರ್‌ಬಿಐ ಗವರ್ನರ್‌ಗೆ ಈ ಪ್ರಶಸ್ತಿ ನೀಡುವ ಘೋಷಣೆಯನ್ನು ಮಾರ್ಚ್‌ನಲ್ಲಿಯೇ ಮಾಡಲಾಗಿತ್ತು. ಆರ್‌ಬಿಐ ಗವರ್ನರ್ ಆಗಿ ದಾಸ್ ಅವರು ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸುಧಾರಣೆಗಳನ್ನು ಬಲಪಡಿಸಿದ್ದಾರೆ, ಪ್ರವರ್ತಕ ಪಾವತಿಗಳ ಆವಿಷ್ಕಾರಗಳನ್ನು ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಭಾರತವನ್ನು ಕಷ್ಟಕಾಲದಿಂದ ಹೊರತಂದಿದ್ದಾರೆ ಎಂದು ಸಂಘಟಕರು ಆ ಸಮಯದಲ್ಲಿ ಹೇಳಿದ್ದಾರೆ.

ಸೆಂಟ್ರಲ್ ಬ್ಯಾಂಕ್ ಹೇಳಿದ್ದೇನು?
ಕೋವಿಡ್ -19 ಸಾಂಕ್ರಾಮಿಕವು ವಿಶ್ವಾದ್ಯಂತ ವಿನಾಶಕಾರಿ ಪರಿಣಾಮವನ್ನು ಬೀರಿದೆ ಮತ್ತು ಸಾಕಷ್ಟು ಜನಸಂಖ್ಯೆ ಹೊಂದಿದ ಭಾರತವು ವಿಶೇಷವಾಗಿ ದುರ್ಬಲ ಸ್ಥಿತಿಯಲ್ಲಿತ್ತು ಎಂದು ಕೇಂದ್ರ ಬ್ಯಾಂಕಿಂಗ್ ಹೇಳಿಕೆಯಲ್ಲಿ ತಿಳಿಸಿದೆ. ಈ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ದಾಸ್ ಬಹುಶಃ ಹೆಚ್ಚಿನ ಪ್ರಭಾವವನ್ನು ಹೊಂದಿದ್ದರು. ಇದಲ್ಲದೇ ದಾಸ್ ಆರ್ ಬಿಐ ಗವರ್ನರ್ ಆಗಿ ಹಲವು ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ-Hero ಧಮಾಕಾ! 160 ಸಿಸಿ ಸ್ಟೈಲಿಶ್ ಬೈಕ್ ಬಿಡುಗಡೆ ಮಾಡಿದ ಹೀರೋ

ಮೂರು ಪ್ರಮುಖ ಘಟನೆಗಳು
ಈ ಸಂದರ್ಭದಲ್ಲಿ ಮಾತನಾಡಿದ ದಾಸ್, ವಿತ್ತೀಯ ಮತ್ತು ಹಣಕಾಸು ವ್ಯವಸ್ಥೆಗಳ ಹೃದಯಭಾಗದಲ್ಲಿರುವ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಸಾಂಪ್ರದಾಯಿಕ ಜವಾಬ್ದಾರಿಗಳನ್ನು ಮೀರಿ “ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ” ಕೇಳಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಬ್ಯಾಂಕುಗಳು ಮೂರು ಪ್ರಮುಖ ಘಟನೆಗಳನ್ನು ಎದುರಿಸಿವೆ ಎಂದು ಅವರು ಹೇಳಿದ್ದಾರೆ - ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಜಾಗತಿಕ ವಿತ್ತೀಯ ನೀತಿಯ ಅಭೂತಪೂರ್ವ ಸಾಮಾನ್ಯೀಕರಣ.

ಇದನ್ನೂ ಓದಿ-Wholesale Price Index: ಹಣದುಬ್ಬರ ವಿಷಯದಲ್ಲಿ ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ!

ಹಣದುಬ್ಬರವನ್ನು ನಿರ್ವಹಣೆ
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ತಕ್ಷಣವೇ ಹಣದುಬ್ಬರವನ್ನು ಎದುರಿಸುವ ಕಾರ್ಯವನ್ನು ಕೇಂದ್ರೀಯ ಬ್ಯಾಂಕುಗಳು ತೆಗೆದುಕೊಳ್ಳಬೇಕಾಗಿತ್ತು. ಭಾರತದಲ್ಲಿ ವಿತ್ತೀಯ ನೀತಿಯ ಕುರಿತು, ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ಕ್ರಮಗಳ ಸಂಚಿತ ಪರಿಣಾಮವು ಇನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News