ಸಿನಿಮಾ ನಿರ್ಮಿಸಲು ಸಾಲ ಪಡೆದ ಸಹೋದರನಿಂದ ಕೊಲೆ ಬೆದರಿಕೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಕ ನಟ 

ನಾಯಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರೂಪೇಶ್ ಎಂಬುವವರು ತಮ್ಮ ಸಹೋದರ ಗಿರೀಶ್ ಎಂಬಾತನ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Jun 11, 2023, 11:33 AM IST
  • ಸಾಲ ಪಡೆದ ಸಹೋದರ ಹಣ ವಾಪಸ್ ನೀಡದೇ ಜೀವ ಬೆದರಿಕೆ ಹಾಕುತ್ತಿದ್ದಾನೆ
  • 'ನೀನು ಹಣ ನೀಡಿಯೇ ಇಲ್ಲ ಎಂದು ಬರೆದುಕೊಡಬೇಕು' ಎಂದು ಬೆದರಿಕೆ ಹಾಕಿಸುತ್ತಿದ್ದಾನೆ
  • ಸಹೋದರನ ವಿರುದ್ಧ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರೂಪೇಶ್ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ
ಸಿನಿಮಾ ನಿರ್ಮಿಸಲು ಸಾಲ ಪಡೆದ ಸಹೋದರನಿಂದ ಕೊಲೆ ಬೆದರಿಕೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಕ ನಟ  title=

ಬೆಂಗಳೂರು : ಚಲನಚಿತ್ರ ನಿರ್ಮಿಸಲು ಸಾಲ ಪಡೆದ ಸಹೋದರ ಹಣ ವಾಪಸ್ ನೀಡದೇ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ಉದಯೋನ್ಮುಖ ನಟನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾಯಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರೂಪೇಶ್ ಎಂಬುವವರು ತಮ್ಮ ಸಹೋದರ ಗಿರೀಶ್ ಎಂಬಾತನ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಗಿರೀಶ್, 2014 - 19ರ ಅವಧಿಯಲ್ಲಿ ʼಸಾರೀ ಕಣೇʼ ಹಾಗೂ ʼಧೂಳೀಪಟʼ ಎಂಬ ಹೆಸರಿನ ಎರಡು ಚಿತ್ರಗಳ ನಿರ್ಮಿಸಿದ್ದರು.‌ ಎರಡೂ ಚಿತ್ರಗಳಿಗೆ ಗಿರೀಶ್ ಸಹೋದರ ರೂಪೇಶ್ ನಾಯಕನಟನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದ. ಚಿತ್ರೀಕರಣದ ವೇಳೆ ಹಣವಿಲ್ಲ ಎಂದಿದ್ದ ಗಿರೀಶ್ ರೂಪೇಶ್ ನಿಂದ 33 ಲಕ್ಷ ಸಾಲ ಪಡೆದುಕೊಂಡಿದ್ದನಂತೆ.

ಇದನ್ನೂ ಓದಿ: ಕರೆಂಜಿತ್ ಕೌರ್ ʼಸನ್ನಿ ಲಿಯೋನ್‌ʼ ಆಗಿದ್ದೇಗೆ..! ಯುವಕರ ಹೃದಯದೊಡತಿಯ ಲೈಫ್‌ ಕಹಾನಿ

ಅಲ್ಲದೇ ರೂಪೇಶ್ ನನ್ನ ಸಾಕ್ಷಿಯಾಗಿರಿಸಿಕೊಂಡು ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟು 1 ಕೋಟಿ 10 ಲಕ್ಷ ರೂ ಸಾಲ ಪಡೆದಿದ್ದನಂತೆ. ಆದರೆ ಎರಡು ಸಿನಿಮಾನಗಳು ಮಕಾಡೆ ಮಲಗಿದ್ದವು. ಹೀಗಾಗಿ ಲಾಸ್ ಸಹ ಆಗಿತ್ತು.‌  ನಂತರ ಗಿರೀಶ್ ಬಳಿ ರೂಪೇಶ್ ಹಣ ವಾಪಾಸ್ ಕೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು  ಗಿರೀಶ್ ವಿರುದ್ಧ ದೂರಿನಲ್ಲಿ ಆರೋಪಿಸಲಾಗಿದೆ. 

ಇದಲ್ಲದೇ ಗಿರೀಶ್ ತನ್ನ ಸ್ನೇಹಿತರಾದ ಅಂಜುಂ, ವಿ.ಕೆ‌.ಮೂರ್ತಿ ಹಾಗೂ ಮೋಹನ್ ಎಂಬುವವರಿಂದ ಕರೆ ಮಾಡಿಸಿ 'ನೀನು ಹಣ ನೀಡಿಯೇ ಇಲ್ಲ ಎಂದು ಬರೆದುಕೊಡಬೇಕು' ಎಂದು ಬೆದರಿಕೆ ಹಾಕಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ರೂಪೇಶ್ ನೀಡಿದ ದೂರಿನ ಆಧಾರದ ಮೇಲೆ ಗಿರೀಶ್ ಹಾಗೂ ಆತನ ಸ್ನೇಹಿತರಾದ ಅಂಜುಂ, ವಿ.ಕೆ‌.ಮೂರ್ತಿ, ಮೋಹನ್ ವಿರುದ್ಧ  ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News