ಕಮಿಷನರ್ ಕಚೇರಿ ಬಳಿ ಬಸ್ ಸ್ಟಾಂಡ್ ಕಳ್ಳತನ: ಪ್ರಕರಣಕ್ಕೆ ಮೇಜರ್ ಟ್ವಿಸ್ಟ್

ಕಳೆದ ತಿಂಗಳ 30ನೇ ತಾರೀಖು ಕನ್ನಿಂಗ್ ಹ್ಯಾಮ್ ರಸ್ತೆಯ ನಿರ್ಮಾಣ ಹಂತದ ಬಸ್ ಸ್ಟಾಂಡ್ ಕಚ್ಚಾವಸ್ತುಗಳು ಕಳ್ಳತನವಾಗಿದೆ ಎಂದು ಗುತ್ತಿಗೆದಾರ ರವಿರೆಡ್ಡಿ ಎಂಬುವವರು ದೂರು ನೀಡಿದ್ದರು. 

Written by - VISHWANATH HARIHARA | Last Updated : Oct 10, 2023, 03:11 PM IST
  • ಖಾಸಗಿ ಕಂಪನಿಯೊಂದು ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಿತ್ತು.
  • ರವಿರೆಡ್ಡಿ ಸೆಪ್ಟೆಂಬರ್ 21 ಕ್ಕೆ ಬಸ್ ಸ್ಟಾಂಡ್ ಕೆಲಸ ಶುರು ಮಾಡಿಸಿ ಮೊದಲ ದಿನವೇ ಅರ್ಧಕ್ಕೆ‌ ನಿಲ್ಲಿಸಿ ಮೆಟಿರೀಯಲ್ ಅಲ್ಲೇ ಬಿಟ್ಟು ಹೋಗಲಾಗಿತ್ತು.
  • ಇದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಶಿವಾಜಿನಗರದ ಎಇಇಗೆ ಸಾರ್ವಜನಿಕರು ದೂರು ನೀಡಿದ್ದರು.
ಕಮಿಷನರ್ ಕಚೇರಿ ಬಳಿ ಬಸ್ ಸ್ಟಾಂಡ್ ಕಳ್ಳತನ: ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ title=

ಬೆಂಗಳೂರು: ಕಮಿಷನರ್ ಕಚೇರಿ ಹಿಂಭಾಗದ ರಸ್ತೆಯಲ್ಲಿ ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹೈಗ್ರೌಂಡ್ ಪೊಲೀಸರ ತನಿಖೆ ವೇಳೆ ಕಳ್ಳತನದ ಹಿಂದಿನ ಅಸಲಿ ಕಹಾನಿ ತೆರೆದುಕೊಂಡಿದೆ. 

ಕಳೆದ ತಿಂಗಳ 30ನೇ ತಾರೀಖು ಕನ್ನಿಂಗ್ ಹ್ಯಾಮ್ ರಸ್ತೆಯ ನಿರ್ಮಾಣ ಹಂತದ ಬಸ್ ಸ್ಟಾಂಡ್ ಕಚ್ಚಾವಸ್ತುಗಳು ಕಳ್ಳತನವಾಗಿದೆ ಎಂದು ಗುತ್ತಿಗೆದಾರ ರವಿರೆಡ್ಡಿ ಎಂಬುವವರು ದೂರು ನೀಡಿದ್ದರು. ಆದರೆ ಅಸಲಿಗೆ ಅಲ್ಲಿ ಕಳ್ಳತನವೇ ಆಗಿರಲಿಲ್ಲ ಎಂಬುದು ತನಿಖೆ ವೇಳೆ ಬಯಲಾಗಿದೆ. ಪ್ರಕರಣದ ಬಗ್ಗೆ ಸುಳ್ಳು ದೂರು ನೀಡಿರುವ ಖಾಸಗಿ ಕಂಪನಿಯ ಉದ್ಯೋಗಿ ರವಿರೆಡ್ಡಿ ವಿರುದ್ಧ ಸದ್ಯ ದೂರು ದಾಖಲಾಗುವ ಸಾಧ್ಯತೆಯಿದೆ. 

ಇದನ್ನೂ ಓದಿ- Bengaluru: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕಂಪನಿಗೆ ಬೆಂಕಿ ಇಟ್ಟ ಉದ್ಯೋಗಿಗಳು!

ಖಾಸಗಿ ಕಂಪನಿಯೊಂದು ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಿತ್ತು. ರವಿರೆಡ್ಡಿ ಸೆಪ್ಟೆಂಬರ್ 21 ಕ್ಕೆ ಬಸ್ ಸ್ಟಾಂಡ್ ಕೆಲಸ ಶುರು ಮಾಡಿಸಿ  ಮೊದಲ ದಿನವೇ ಅರ್ಧಕ್ಕೆ‌ ನಿಲ್ಲಿಸಿ ಮೆಟಿರೀಯಲ್ ಅಲ್ಲೇ ಬಿಟ್ಟು ಹೋಗಲಾಗಿತ್ತು. ಇದರಿಂದ ಪಾದಚಾರಿಗಳಿಗೆ  ತೊಂದರೆ ಉಂಟಾಗುತ್ತಿದೆ ಎಂದು ಶಿವಾಜಿನಗರದ ಎಇಇಗೆ ಸಾರ್ವಜನಿಕರು ದೂರು ನೀಡಿದ್ದರು.

ಈ ವೇಳೆ ಸ್ಥಳ ಪರಿಶೀಲನೆ ಮಾಡಿ ವಿಡಿಯೋ ತೆಗೆದುಕೊಂಡಿದ್ದ ಶಿವಾಜಿನಗರ ಎಇಇಗೆ ಬಸ್ ಸ್ಟಾಂಡ್ ಮಾಡಲು ಅನುಮತಿ ಇರಲಿಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಫುಟ್ ಪಾತ್ ಮೇಲೆ ಬಿದ್ದಿದ್ದ ಮೆಟಿರೀಯಲ್ ನ ಎಇಇ ಸೀಜ್ ಮಾಡಿ ಗೋಡೌನ್ ನಲ್ಲಿ ಸಂಗ್ರಹ ಮಾಡಿಸಿದ್ದರು. ಸೆಪ್ಟೆಂಬರ್ 28 ಕ್ಕೆ ಮೆಟಿರೀಯಲ್ ಇರದಿರುವುದನ್ನು ಗಮನಿಸಿದ್ದ ರವಿರೆಡ್ಡಿ ಸೆಪ್ಟೆಂಬರ್ 30 ರಂದು ಹೈಗ್ರೌಂಡ್ಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ದೂರು ಪಡೆದು ತನಿಖೆ ನಡೆಸಿದಾಗ ಅಸಲಿ ಸತ್ಯಾಂಶ ಬಯಲಾಗಿದೆ. 

ಇದನ್ನೂ ಓದಿ- ಅತ್ತಿಬೆಲೆಯಲ್ಲಿ ಪಟಾಕಿ ದಾಸ್ತಾನು ಮಳಿಗೆಗೆ ಬೆಂಕಿ: ಸಾವಿನ ಸಂಖ್ಯೆ 12ಕ್ಕೆ ಏರಿಕೆ..!

ಸದ್ಯ ರವಿರೆಡ್ಡಿ ವಿರುದ್ದವೇ ದೂರು ನೀಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News