ಪ್ರೀತಿ-ಗೀತಿ ಬೇಡವೆಂದು ಬುದ್ದಿ ಹೇಳಿದ ತಾಯಿಯನ್ನೇ ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದ ಟೀನೇಜ್ ಪುತ್ರಿ!

ಜೂಲಿಯಾನ ಅವರು ತನ್ನ ದತ್ತು ಪುತ್ರಿಯೊಂದಿಗೆ ಕಂಬಳಪೇಟೆಯಲ್ಲಿ ವಾಸವಾಗಿದ್ದರು. ಪುತ್ರಿಯನ್ನು ಅವರು ತುಂಬಾ ಪ್ರೀತಿಯಿಂದ ಬೆಳೆಸಿದರು. ಕೋಟ್ಯಂತರ ಆಸ್ತಿ ಹೊಂದಿದ್ದ ಜೂಲಿಯಾನ ಮಗಳಿಗೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದರು.

Written by - Puttaraj K Alur | Last Updated : Oct 22, 2023, 02:08 PM IST
  • ಪ್ರೀತಿ-ಗೀತಿ ಬೇಡವೆಂದು ಬುದ್ಧಿಮಾತು ಹೇಳಿದ ಸಾಕುತಾಯಿಯನ್ನು ಕೊಂದ ಟೀನೇಜ್ ಪುತ್ರಿ
  • ಬಾಯ್‍ಫ್ರೆಂಡ್ ಮತ್ತು ಆತನ ಸ್ನೇಹಿತರ ಸಹಾಯದಿಂದ ಅಮ್ಮನನ್ನೇ ಕೊಲೆಗೈದ ಪುತ್ರಿ
  • ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಕಂಬಳಪೇಟೆಯಲ್ಲಿ ಆಘಾತಕಾರಿ ಘಟನೆ
ಪ್ರೀತಿ-ಗೀತಿ ಬೇಡವೆಂದು ಬುದ್ದಿ ಹೇಳಿದ ತಾಯಿಯನ್ನೇ ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದ ಟೀನೇಜ್ ಪುತ್ರಿ! title=
ಸಾಕುತಾಯಿಯನ್ನು ಕೊಂದ ಟೀನೇಜ್ ಪುತ್ರಿ!

ಹೈದರಾಬಾದ್​: ಓದುವ ವಯಸ್ಸಿನಲ್ಲಿ ಪ್ರೀತಿ-ಗೀತಿ ಬೇಡವೆಂದು ಬುದ್ದಿವಾದ ಹೇಳಿದ ಹೆತ್ತ ತಾಯಿಯನ್ನೇ ತನ್ನ ಬಾಯ್‍ಫ್ರೆಂಡ್ ಜೊತೆ ಸೇರಿ ಟೀನೇಜ್​ ಮಗಳೊಬ್ಬಳು ಕೊಲೆ ಮಾಡಿದ್ದಾಳೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಕಂಬಳಪೇಟೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ನಿವೃತ್ತ ಶಿಕ್ಷಕಿಯಾಗಿದ್ದ ಮಾರ್ಗರೇಟ್ ಜೂಲಿಯಾನ(63) ಟೀನೇಜ್ ಮಗಳಿಂದ ಹತ್ಯೆಯಾದವರು. ಮಕ್ಕಳಿಲ್ಲದ ಕಾರಣ 13 ವರ್ಷದ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಜೂಲಿಯಾನರ ಪತಿ ನಾಗೇಶ್ವರ ರಾವ್ FCIನಲ್ಲಿ ವ್ಯವಸ್ಥಾಪಕರಾಗಿದ್ದು, ನಿವೃತ್ತಿಯಾದ 2 ವರ್ಷದ ಬಳಿಕ ಅನಾರೋಗ್ಯದಿಂದ ಮೃತಪಟ್ಟಿದ್ದರು.  

ಇದನ್ನೂ ಓದಿ: VIRAL VIDEO: ಕುಡಿದ ಮತ್ತಿನಲ್ಲಿ ಗೂಳಿಯ ಕೊಂಬು ಹಿಡಿದ ವ್ಯಕ್ತಿಗೆ ಆಗಿದ್ದೇನು..?

ಜೂಲಿಯಾನ ಅವರು ತನ್ನ ದತ್ತು ಪುತ್ರಿಯೊಂದಿಗೆ ಕಂಬಳಪೇಟೆಯಲ್ಲಿ ವಾಸವಾಗಿದ್ದರು. ಪುತ್ರಿಯನ್ನು ಅವರು ತುಂಬಾ ಪ್ರೀತಿಯಿಂದ ಬೆಳೆಸಿದರು. ಕೋಟ್ಯಂತರ ಆಸ್ತಿ ಹೊಂದಿದ್ದ ಜೂಲಿಯಾನ ಮಗಳಿಗೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದರು. 13ನೇ ವಯಸ್ಸಿನ ಆ ಹುಡುಗಿ 19 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಇದು ಸಾಕುತಾಯಿ ಜೂಲಿಯಾನರಿಗೆ ಗೊತ್ತಾಗಿ ಆಕೆಗೆ ಬುದ್ದಿ ಹೇಳಿದ್ದರು. ಓದು ಬಿಟ್ಟು ಲವ್-ಗಿವ್ ಎಂದು ಭವಿಷ್ಯ ಹಾಳು ಮಾಡಿಕೊಳ್ಳಬೇಡ ಅಂತಾ ಹೇಳಿದ್ದರು.

ಆದರೆ ಮಗಳಿಗೆ ತಾಯಿ ಹೇಳಿದ ಸಲಹೆ ರುಚಿಸಿಲ್ಲ. ತನ್ನ ಗೆಳೆಯನೊಂದಿಗೆ ಸೇರಿ ಸಂಚು ರೂಪಿಸಿ ಇನ್ನಿಬ್ಬರು ಯುವಕರ ನೆರವಿನಿಂದ ಜೂಲಿಯಾನರನ್ನು ಕೊಲೆ ಮಾಡಿದ್ದಾಳೆ. ಈ ಹುಡುಗಿ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿದ್ದಳಂತೆ. ಇದೇ ವಿಚಾರವಾಗಿ ಆಗಾಗ ತಾಯಿ ಮತ್ತು ಮಗಳ ನಡುವೆ ಜಗಳ ನಡೆಯುತ್ತಿತ್ತು. ಅಮ್ಮನ ಬುದ್ದಿಮಾತುಗಳಿಗೆ ಸೊಪ್ಪು ಹಾಕದ ಟೀನೇಜ್ ಪುತ್ರಿ ಪ್ರಿಯಕರ ಹಾಗೂ ಸ್ನೇಹಿತರ ಜೊತೆಗೆ ಸೇರಿ ಆಕೆಯನ್ನೇ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 ಇದನ್ನೂ ಓದಿ: Israel-Hamas War : ಪ್ಯಾಲೆಸ್ಟೈನ್‌ಗೆ ವೈದ್ಯಕೀಯ ನೆರವು, ಉಪಯುಕ್ತ ಸಾಮಗ್ರಿ ಕಳುಹಿಸಿದ ಭಾರತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News