ಫೇಸ್‌ಬುಕ್‌ ಸುಂದರಿ ಹಿಂದೆ ಬಿದ್ದ ಅರ್ಚಕನಿಗೆ ಪಂಗನಾಮ: ಸೈಬರ್ ಕ್ರೈಮ್ ಪೊಲೀಸರಿಗೆ ದೂರು

Cyber Crime:ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇಗುಲದ ಅರ್ಚಕ‌ ವಿಜಯ್ ಕುಮಾರ್ ಕುಟುಂಬದಿಂದ ದೂರಾಗಿ ಒಬ್ಬರೇ ವಾಸಿಸುತ್ತಿದ್ದಾರೆ.

Written by - Yashaswini V | Last Updated : Aug 21, 2024, 12:14 PM IST
  • ಫೇಸ್‌ಬುಕ್‌ ಸುಂದರಿ ಮಾತಿಗೆ ಮರುಳಾಗಿ ಲಕ್ಷ ಲಕ್ಷ ಕಳೆದುಕೊಂಡ ಅರ್ಚಕ
  • ಸುಂದರಿ ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದ ವಿಜಯ್ ಕುಮಾರ್
  • ವಿಜಯ ಕುಮಾರ್ ರಿಂದ ಲಕ್ಷಾಂತರ ಹಣ ಪೀಕಿದ್ದ ಫೇಸ್‌ಬುಕ್‌ ಹುಡುಗಿ
ಫೇಸ್‌ಬುಕ್‌ ಸುಂದರಿ ಹಿಂದೆ ಬಿದ್ದ ಅರ್ಚಕನಿಗೆ ಪಂಗನಾಮ: ಸೈಬರ್ ಕ್ರೈಮ್ ಪೊಲೀಸರಿಗೆ ದೂರು title=

Cyber Fraud: ಫೇಸ್‌ಬುಕ್‌ ಸುಂದರಿ ಹಿಂದೆ ಬಿದ್ದ ಅರ್ಚಕನೊಬ್ಬ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಂಡ್ಯದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇಗುಲದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡ ಅರ್ಚಕ.

ಘಟನೆ ಹಿನ್ನಲೆ: 
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇಗುಲದ ಅರ್ಚಕ‌ ವಿಜಯ್ ಕುಮಾರ್ ಕುಟುಂಬದಿಂದ ದೂರಾಗಿ ಒಬ್ಬರೇ ವಾಸಿಸುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಈತನಿಗೆ ಸಾಮಾಜಿಕ ಜಾಲತಾಣ  (Social Media) ಫೇಸ್‌ಬುಕ್‌ನಲ್ಲಿ  ಸಿರಿ ಶ್ರೇಷ ಸರಿತಾ ಎಂಬ ಸುಂದರಿಯ ಪರಿಚಯವಾಗಿತ್ತು. 

ಇದನ್ನೂ ಓದಿ- ವರದಕ್ಷಿಣೆಗಾಗಿ ಪತ್ನಿ ಕೊಲೆ: 'ಪಿಡಿಒ'ಗೆ ಜೀವಾವಧಿ ಶಿಕ್ಷೆ

ಅರ್ಚಕ‌ ವಿಜಯ್ ಕುಮಾರ್ ಫೇಸ್‌ಬುಕ್‌ನಲ್ಲಿ ಸುಂದರಿ (Facebook Beauty) ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದರು. ಈ ರೀತಿ ಚಾಟಿಂಗ್ ಮೂಲಕವೇ ವಿಜಯ್ ಕುಮಾರ್ ಪೂರ್ವಾಪರ ಅರಿತ  ಯುವತಿ ಮನೆಯ ಸಮಸ್ಯೆ, ಆರೋಗ್ಯ ಸಮಸ್ಯೆ ಎಂದು ಹೇಳುತ್ತಾ ಹಂತ-ಹಂತವಾಗಿ ಆಟನಿಂದ ಲಕ್ಷಾಂತರ ರೂ. ಹಣ ಪಡೆದಿದ್ದಾಳೆ. 

ಬಣ್ಣ ಬಣ್ಣದ ಮಾತುಗಳಿಂದ ಮರುಳಾಗಿ ಸುಂದರಿ ಮಾತು ನಂಬಿ ಫೋನ್ ಪೇ (Phone Pay) ಮೂಲಕ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣ ಟ್ರಾನ್ಸ್‌ಫರ್‌ ಮಾಡಿದ್ದ ಅರ್ಚಕ ವಿಜಯ್ ಕುಮಾರ್  ಬಳಿಕ ಭೇಟಿ ಆಗುವಂತೆ ಸುಂದರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಇಂದು ಭೇಟಿಯಾಗುತ್ತೇನೆ, ನಾಳೆ ಭೇಟಿಯಾಗುತ್ತೇನೆ ಎಂದು ಸತಾಯಿಸುತ್ತಿದ್ದ ಫೇಸ್‌ಬುಕ್‌ ಸುಂದರಿ ಬಳಿಕ ಫೇಸ್‌ಬುಕ್‌ನಲ್ಲಿ ವಿಜಯ್ ಕುಮಾರ್ ಅವರನ್ನೇ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ. 

ಇದನ್ನೂ ಓದಿ- ವ್ಹೀಲಿಂಗ್ ಪುಂಡರ ಬೈಕ್ ಪೀಸ್- ಪೀಸ್ ಮಾಡಿದ್ರು ಜನ..! ಹೊಡಿರಿ ಚಪ್ಪಾಳೆ.. ಇಂತ ಜನ ಎಲ್ಲಿ ಸಿಗ್ತಾರೆ

ಫೇಸ್‌ಬುಕ್‌ ಸುಂದರಿ ಮಾಯವಾದ ಬಳಿಕ ತಾವು ಬಣ್ಣದ ಮಾತುಗಳನ್ನು ನಂಬಿ ಯಾಮಾರಿರುವ ಬಗ್ಗೆ ವಿಜಯ್ ಕುಮಾರ್ ಗೆ ಮನವರಿಕೆ ಆಗಿದ್ದು, ಆಕೆಯಿಂದ ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರಿಗೆ ಮೊರೆ. ಈ ಸಂಬಂಧ ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ಅರ್ಚಕ ವಿಜಯ್ ಕುಮಾರ್ ದೂರು ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News