ಹಣದ‌ ಮೇಲೆ ದುರಾಸೆ : ಸ್ನೇಹಿತನನ್ನು ಅಪಹರಿಸಿದ್ದ ಗ್ಯಾಂಗ್ ಅಂದರ್‌ 

ಒಂದು ಕೋಟಿ ಲೋನ್ ಮಾಡಿಸಿ ಅಸಲು ಬಡ್ಡಿ ಸೇರಿ 23 ಲಕ್ಷ ಹಣವನ್ನ ಸಂತೋಷನಿಗೆ ನೀಡಿದ್ದ. ಇತ್ತ ಹಣ ಒಟ್ಟಿಗೆ ಕೊಡುತ್ತಿದ್ದಂತೆ ದುರಾಸೆಗೆ ಬಿದ್ದ ಸಂತೋಷ ನಾನು ನಿನ್ನ ಕಷ್ಟಕ್ಕೆ ಸಹಾಯ ಮಾಡಿದ್ದೆ. ನೀನು ನನ್ನ ಕಷ್ಟಕ್ಕೆ ಸಹಾಯ ಮಾಡು ಎಂದು ಬೇರೆಯವರ ಹೆಸರಲ್ಲಿ ರಂಜಿತ್‌ ಬಳಿ 20 ಲಕ್ಷ ಹಣ ಸಾಲ ಪಡೆದಿದ್ದ. 

Written by - VISHWANATH HARIHARA | Edited by - Krishna N K | Last Updated : Oct 2, 2023, 04:53 PM IST
  • ಹಣದದ ದುರಾಸೆಗೆ ಬಿದ್ದು ವ್ಯಕ್ತಿಯೊಬ್ಬ ಸ್ನೇಹಿತನನ್ನು ಅಪಹರಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
  • ಬಡ್ಡಿ ಲೆಕ್ಕದಲ್ಲಿ 14 ಲಕ್ಷ ಸಾಲ‌ ಪಡೆದಿದ್ದ.‌ 14 ಲಕ್ಷಕ್ಕೆ ಸಂತೋಷ್ 9 ಲಕ್ಷ ಬಡ್ಡಿ ಸಹ ಆಗಿತ್ತು.
  • ರಂಜಿತ್‌ ಬಳಿ ಇರುವ ಉಳಿದ ಹಣ ನುಂಗಲು ಪ್ಲಾನ್ ಮಾಡಿದ ಸಂತೋಷ ಸುಪಾರಿ ಕಥೆ ಕಟ್ಟಿದ್ದ.
ಹಣದ‌ ಮೇಲೆ ದುರಾಸೆ : ಸ್ನೇಹಿತನನ್ನು ಅಪಹರಿಸಿದ್ದ ಗ್ಯಾಂಗ್ ಅಂದರ್‌  title=

ಬೆಂಗಳೂರು : ಹಣದದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ಸ್ನೇಹಿತನನ್ನು ಅಪಹರಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಂತೋಷ್, ರವಿತೇಜ, ಹಜಿವಾಲ ಹಾಗೂ ರಾಜಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಬ್ಯಾಟರಾಯನಪುರದ ಪ್ಲೇವುಡ್ ಬ್ಯುಸಿನೆಸ್ ನಡೆಸುತ್ತಿದ್ದ ರಂಜಿತ್ ಎಂಬಾತ ತನ್ನ ಗೆಳೆಯ ಸಂತೋಷ್ ಬಳಿ ವಾರದ‌ ಬಡ್ಡಿ ಲೆಕ್ಕದಲ್ಲಿ 14 ಲಕ್ಷ ಸಾಲ‌  ಪಡೆದಿದ್ದ.‌ 14 ಲಕ್ಷಕ್ಕೆ ಸಂತೋಷ್ 9 ಲಕ್ಷ ಬಡ್ಡಿ ಸಹ ಆಗಿತ್ತು.

ಬಡ್ಡಿ ಹಣ ಹೆಚ್ಚಾದ ಕಾರಣ ಸಾಲ ತೀರಿಸಲು ರಂಜಿತ್ ತನ್ನ ಮನೆ ಮೇಲೆ ಒಂದು ಕೋಟಿ ಲೋನ್ ಮಾಡಿಸಿ ಅಸಲು ಬಡ್ಡಿ ಸೇರಿ 23 ಲಕ್ಷ ಹಣವನ್ನ ಸಂತೋಷನಿಗೆ ನೀಡಿದ್ದ. ಇತ್ತ ಹಣ ಒಟ್ಟಿಗೆ ಕೊಡುತ್ತಿದ್ದಂತೆ ದುರಾಸೆಗೆ ಬಿದ್ದ ಸಂತೋಷ ನಾನು ನಿನ್ನ ಕಷ್ಟಕ್ಕೆ ಸಹಾಯ ಮಾಡಿದ್ದೆ. ನೀನು ನನ್ನ ಕಷ್ಟಕ್ಕೆ ಸಹಾಯ ಮಾಡು ಎಂದು ಬೇರೆಯವರ ಹೆಸರಲ್ಲಿ ರಂಜಿತ್‌ ಬಳಿ 20 ಲಕ್ಷ ಹಣ ಸಾಲ ಪಡೆದಿದ್ದ. 

ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಟ್ಟು, ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲಿ : ಡಿಸಿಎಂ

ಇದಾದ ನಂತರ ರಂಜಿತ್‌ ಬಳಿ ಇರುವ ಉಳಿದ ಹಣ ನುಂಗಲು ಪ್ಲಾನ್ ಮಾಡಿದ ಸಂತೋಷ ಸುಪಾರಿ ಕಥೆ ಕಟ್ಟಿದ್ದ. ನಿನ್ನ ಕೊಲೆಗೆ 50 ಲಕ್ಷ ಸುಪಾರಿ ಕೊಟ್ಟಿದ್ದಾರೆ. ನೀನು 30 ಲಕ್ಷ ನೀಡಿದರೆ ಸುಮ್ಮನೆ ಬಿಡುತ್ತೇನೆ ಎಂದಿದ್ದ. ಇದಕ್ಕೆ ರಂಜಿತ್‌ ಒಪ್ಪದಿದ್ದಾಗ ಮಾತುಕತೆಗೆ ಎಂದು ಕಳೆದ ತಿಂಗಳು 23ರಂದು ಟಿಂಬರ್ ಬಳಿ ಕರೆಸಿಕೊಂಡು ರಂಜಿತ್‌ನನ್ನು ಬೇರೆಯವರಿಂದ ಕಿಡ್ನಾಪ್‌ ಮಾಡಿಸಿದ್ದ. 

ನಂತರ ರಂಜೀತ್ ಬಳಿ 30 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ 10 ಲಕ್ಷ ಹಣ ಪಡೆದು ಉಳಿದ ಹಣ ಒಂದು ವಾರ ಬಿಟ್ಟು ಕೊಡು ಅಂತ ಹೇಳಿ ವಾಪಸ್ ಕಳುಹಿಸಿದ್ದರು. ಇಷ್ಟೇ ಅಲ್ಲದೇ ಮನೆ ಬಳಿ ಹೋದ ಅಪಹರಣಕಾರರ ಗುಂಪು ಹೆಚ್ಚು ನಾಟಕ ಆಡಬೇಡ. ಈ ವಿಷಯವನ್ನು ಯಾರಿಗಾದ್ರೂ ಹೇಳಿದರೆ ಬೀದಿ ಹೆಣ ಆಗುತ್ತೀಯಾ ಎಂದು ಧಮ್ಕಿ ಹಾಕಿದ್ದಾರೆ. 

ಇದನ್ನೂ ಓದಿ: ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರ ಪದೇ ಪದೆ ಪಕ್ಷ ವಿಸರ್ಜನೆ ಘೋಷಿಸಿದರೆ ಕಾರ್ಯಕರತರು ಎಲ್ಲಿ ಹೋಗಬೇಕು?: ಡಿ.ಕೆ.ಶಿವಕುಮಾರ್

ಸಂತೋಷ್ ಸಹ ಕರೆ ಮಾಡಿ ಹಣ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದಾನೆ.  ಇದರಿಂದ ಬೇಸತ್ತ ರಂಜಿತ್‌ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ‌ ಸಹ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ಸದ್ಯ ಜೈಲಿಗಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News