ವಯಸ್ಸು ಬಚ್ಚಿಟ್ಟು ಮದುವೆಯಾದ ಪತ್ನಿ ಕೊಂದು ಶಿರಾಡಿ ಘಾಟ್‌ನಲ್ಲಿ ಎಸೆದ ಪತಿರಾಯ

Bangalore Murder : ಪರಪುರುಷನೊಂದಿಗೆ ಹೆಂಡತಿಗೆ  ಸಂಬಂಧವಿದೆ ಎಂದು ಶಂಕಿಸಿ ಥೇಟ್ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಶೈಲಿಯಲ್ಲಿ ಹೆಂಡತಿಯನ್ನು ಕೊಂದು ಬಿಸಾಡಿದ್ದ ಪತಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ‌. 

Written by - VISHWANATH HARIHARA | Edited by - Chetana Devarmani | Last Updated : Aug 17, 2022, 05:39 PM IST
  • ಬಾ ನಲ್ಲೆ ಮಧುಚಂದ್ರಕೆ ಅಂತಾ ಹೆಂಡತಿಗೆ ಮಹೂರ್ತ ಇಟ್ಟ
  • ಸಿನಿಮಾ ಸ್ಟೈಲ್‌ನಲ್ಲೇ ಪತ್ನಿ ಕೊಂದು ಪೊಲೀಸರ ಅತಿಥಿಯಾದ
  • ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
ವಯಸ್ಸು ಬಚ್ಚಿಟ್ಟು ಮದುವೆಯಾದ ಪತ್ನಿ ಕೊಂದು ಶಿರಾಡಿ ಘಾಟ್‌ನಲ್ಲಿ ಎಸೆದ ಪತಿರಾಯ  title=
ಆರೋಪಿ ಬಂಧನ

ಬೆಂಗಳೂರು: ಪರಪುರುಷನೊಂದಿಗೆ ಹೆಂಡತಿಗೆ  ಸಂಬಂಧವಿದೆ ಎಂದು ಶಂಕಿಸಿ ಥೇಟ್ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಶೈಲಿಯಲ್ಲಿ ಹೆಂಡತಿಯನ್ನು ಕೊಂದು ಬಿಸಾಡಿದ್ದ ಪತಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ‌. ಹೆಂಡತಿಗೆ ಚಟ್ಟ ಕಟ್ಟಿ ಪೃಥ್ವಿರಾಜ್ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೊದಲಿಂದಲೂ ಹೆಂಡತಿ ಮೇಲೆ ಅನುಮಾನ ಇಟ್ಟುಕೊಂಡಿದ್ದ ಪೃಥ್ವಿರಾಜ್ ಪದೇ ಪದೇ ಈ ಬಗ್ಗೆ ಪತ್ನಿಗೆ ಪ್ರಶ್ನೆ ಮಾಡುತ್ತಿದ್ದ. ಆದರೆ ಉಲ್ಟಾ ಹೊಡೆಯುತ್ತಿದ್ದ ಹೆಂಡತಿ ಆತನಿಗೆ ಟಾರ್ಚರ್ ಕೊಡುತ್ತಿದ್ದಳಂತೆ. ಕಳೆದ 13 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಪೃಥ್ವಿರಾಜ್ ಕಳೆದ ನವೆಂಬರ್ ನಲ್ಲಿ‌ ಬಿಕಾಂ ಪಧವೀದರೆಯಾಗಿದ್ದ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದ.‌ ಇಬ್ಬರಿಗೂ ವಯಸ್ಸಿನ ಅಂತರವಿತ್ತು. ಪತ್ನಿಯು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಈ ವೇಳೆ ಯುವಕ ಪರಿಚಯವಾಗಿ ಇಬ್ಬರು ಚಾಟ್ ಮಾಡುತ್ತಿದ್ದರು ಎನ್ನಲಾಗಿದೆ.‌ ಇದರಿಂದ ರೋಸಿ ಹೋಗಿದ್ದ ಪತಿ, ಪತ್ನಿಯನ್ನ ಹತ್ಯೆ ಮಾಡಲು ಸ್ನೇಹಿತ ಸಮೀರ್ ನೊಂದಿಗೆ ಪ್ಲ್ಯಾನ್ ಮಾಡಿಕೊಂಡಿದ್ದ.

ಇದನ್ನೂ ಓದಿ: ಕ್ಲಬ್ ಹೌಸ್ ಗ್ರೂಪ್‌ನಲ್ಲಿ ಡಿಪಿಗೆ ಪಾಕಿಸ್ತಾನ‌‌ದ ಧ್ವಜ ಹಾಕಿ ಅಗೌರವ: ಕಿಡಿಗೇಡಿಗಳ ವಿರುದ್ಧ FIR

ಆಗಸ್ಟ್ 2 ರಂದು ಪತ್ನಿಗೆ ಟ್ರಿಪ್ ಕರೆದೊಯ್ಯಲು ಜೂಮ್ ಕಾರ್ ಬುಕ್‌ ಮಾಡಿದ್ದ. ಬೆಂಗಳೂರಿನಿಂದ ಗಂಡ - ಹೆಂಡತಿ ಹಾಗೂ ಸಮೀರ್ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದರು. ಮೊದಲು ಮಲ್ಪೆಗೆ ಕರೆದೊಯ್ದು ಹೆಂಡತಿಯನ್ನ ಮುಳುಗಿಸಿ ನ್ಯಾಚುರಲ್ ಡೆತ್ ಎಂದು ಬಿಂಬಿಸಲು ಮುಂದಾಗಿದ್ದ‌. ಅಲ್ಲಿ ನೀರಿಗೆ ಇಳಿಯುವಂತಿಲ್ಲ ಎಂಬ ಬೋರ್ಡ್ ನೋಡಿ ಪ್ಲಾನ್ ಫ್ಲಾಪ್ ಆಯ್ತು ಅಂತಾ ಮನಸ್ಸಲ್ಲಿ‌ ಮಂಡಿಗೆ ಮುರಿದಿದ್ದ. ನಂತರ ನೇರವಾಗಿ ಶಿರಾಡಿ ಘಾಟ್ ರಸ್ತೆಯ ಮೂಲಕ ಗುಂಡ್ಯಾಗೆ ಬಂದು ಹೆಂಡತಿಯ ಕುತ್ತಿಗೆಗೆ ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ‌ ಕೊಂದು ಹಾಕಿದ್ದ. ನಂತರ ಪತ್ನಿಯ ಶವವನ್ನ ಅಲ್ಲಿಯೇ ಬಿಸಾಕಿ ನಗರಕ್ಕೆ ಬಂದು ಮಿಸ್ಸಿಂಗ್ ಕಂಪ್ಲೈಟ್ ಕೊಟ್ಟು ನಾಟಕವಾಡಿದ್ದ. 

ಇಷ್ಟೆಲ್ಲಾ ಕೃತ್ಯಕ್ಕೂ ಪೃಥ್ವಿರಾಜ್ ಹೊಸ ಮೊಬೈಲ್ ಹಾಗೂ ಸಿಮ್ ಬಳಕೆ ಮಾಡಿದ್ದ. ಪೊಲೀಸರಿಗೆ ಸಿಗಬಾರದೆಂದು ಬೇಸಿಕ್ ಸೆಟ್ ಉಪಯೋಗಿಸಿದ್ದ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇದೆ ಎಂಬ ಸತ್ಯ ಬಾಯ್ಬಿಟ್ಟಿದ್ದ. ಸಂಶಯಗೊಂಡ ಪೊಲೀಸರು ಮೊಬೈಲ್ ಗಳ ಸಿಡಿ ಆರ್ ಹಾಗೂ ಸಿಸಿಟಿವಿ ಪರಿಶೀಲಿಸಿದಾಗ ಪೃಥ್ವಿರಾಜ್ ಪತ್ನಿ ಜೊತೆ ಹೊರ ಹೋಗಿರುವ ವಿಚಾರ ಗೊತ್ತಾಗುತ್ತಿದೆ. ನಂತರ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ : ಈ ಬಾರಿಯ ಗಣೇಶೋತ್ಸವಕ್ಕೆ ವಿಶ್ವ ದಾಖಲೆ ಬರೆಯಲು ಸಜ್ಜಾದ ಬೆಂಗಳೂರು

ಇನ್ನು ಕೊಲೆಗೆ ಕಾರಣ ಕೇಳಿದಾಗ ಹಲವು ಸಂಗತಿ ಹೊರ ಬಿದ್ದಿದೆ. ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದಿದ್ದ ಪತ್ನಿ ತ‌ನಗೆ ಸಾಕಷ್ಟು ಟಾರ್ಚರ್ ಕೊಡುತ್ತಿದ್ದಳು. ಅಷ್ಟೆ ಅಲ್ಲ ಆಕೆಗೆ ಪರ ಪುರುಷನ ಜೊತೆ ಸಂಪರ್ಕ ಇತ್ತು. ಕೇಳೊದಕ್ಕೆ ಹೋದ್ರೆ ತನ್ನ ಜೊತೆ ಗಯ್ಯಾಳಿಯಂತೆ ವರ್ತನೆ ಮಾಡಿದ್ದಳು. ಹೀಗಾಗಿ ಕೊಲೆ ಮಾಡ್ದೆ ಎಂದು ಒಪ್ಪಿಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News