ಅಂದು ಸಮಂತಾ-ನಾಗಚೈತನ್ಯ.. ಇಂದು ನಯನತಾರಾ-ವಿಘ್ನೇಶ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..! ಅಗಲಿಕೆ ಖಚಿತ?

Nayanthara-Vignesh Sivan: ಸಮಂತಾ - ನಾಗಚೈತನ್ಯ ಸಂಬಂಧ ಮುರಿದು ಬೀಳುತ್ತೆ ಎಂದು ಎಂದು ಹೇಳಿ ಸಂಚಲನ ಮೂಡಿಸಿದ್ದ ಖ್ಯಾತ ಜ್ಯೋತಿಷಿ ಇದೀಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಭವಿಷ್ಯದಲ್ಲಿ ಬ್ರೇಕ್ ಅಪ್ ಆಗುವುದು ಖಚಿತ ಎಂದಿದ್ದಾರೆ.. 

Written by - Savita M B | Last Updated : Jan 15, 2024, 08:43 AM IST
  • ವೇಣು ಸ್ವಾಮಿ ಎಂಬ ಖ್ಯಾತ ಜ್ಯೋತಿಷಿ
  • ನಟಿ ಸಮಂತಾ ಮತ್ತು ನಾಗ ಚೈತನ್ಯ ಮದುವೆಯಾದಾಗ, ಅವರು ಕೆಲವೇ ವರ್ಷಗಳಲ್ಲಿ ಬೇರೆಯಾಗುತ್ತಾರೆ ಎಂದಿದ್ದರು.
  • ಇದೀಗ ಜ್ಯೋತಿಷಿ ವೇಣು ಸ್ವಾಮಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸದ್ಯದಲ್ಲಿಯೇ ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ.
ಅಂದು ಸಮಂತಾ-ನಾಗಚೈತನ್ಯ.. ಇಂದು ನಯನತಾರಾ-ವಿಘ್ನೇಶ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..! ಅಗಲಿಕೆ ಖಚಿತ?  title=

Venu Swamy prediction: ವೇಣು ಸ್ವಾಮಿ ಎಂಬ ಖ್ಯಾತ ಜ್ಯೋತಿಷಿಯು ಯೂಟ್ಯೂಬ್‌ನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳನ್ನು ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರು ನಟಿ ಸಮಂತಾ ಮತ್ತು ನಾಗ ಚೈತನ್ಯ ಮದುವೆಯಾದಾಗ, ಅವರು ಕೆಲವೇ ವರ್ಷಗಳಲ್ಲಿ ಬೇರೆಯಾಗುತ್ತಾರೆ ಎಂದಿದ್ದರು.. ಅದೇ ರೀತಿ ಸ್ಯಾಮ್‌ ಚೈ ಇಬ್ಬರೂ ದೂರಾಗಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದರು.. 

ಆರಂಭದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ತುಂಬಾ ಕ್ಯೂಟ್‌ ಜೋಡಿಯಾಗಿ ಕಂಡುಬಂದರೂ, ಅವರ ಜೀವನದಲ್ಲಿನ ಪ್ರಕ್ಷುಬ್ಧತೆಯು ಅಂತಿಮವಾಗಿ ವಿಚ್ಛೇದನದಲ್ಲಿ ಕೊನೆಗೊಂಡಿತು. ಆಗಲೇ ವೇಣು ಸ್ವಾಮಿಯವರು ನುಡಿದ ಭವಿಷ್ಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ-ಫಿನಾಲೆ ಸಮೀಪದಲ್ಲೇ ‘ಬಿಗ್’ ಟ್ವಿಸ್ಟ್.. 8 ಸ್ಪರ್ಧಿಗಳು ಉಳಿದಿದ್ದರೂ ಈ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗೋದಕ್ಕೆ ಇದುವೇ ಕಾರಣ!

ಇದರ ಬೆನ್ನಲ್ಲೇ ಇದೀಗ ಜ್ಯೋತಿಷಿ ವೇಣು ಸ್ವಾಮಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸದ್ಯದಲ್ಲಿಯೇ ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಅವರ ಜೀವನದಲ್ಲಿನ ಸಣ್ಣಪುಟ್ಟ ಸಮಸ್ಯೆಗಳೂ... ಅವರ ಅಗಲಿಕೆಗೆ ಕಾರಣವಾಗುತ್ತವೆ, ನಾನು ಹೇಳಿದ್ದು ನಡೆಯದಿದ್ದರೆ ನಾನು ಜ್ಯೋತಿಷ್ಯವನ್ನು ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ..

ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂಬ ಹೆಸರು ಪಡೆದಿರುವ ನಯನತಾರಾ, ದಕ್ಷಿಣ ಭಾರತ ಚಿತ್ರರಂಗದಲ್ಲಿ 20 ವರ್ಷಗಳಿಂದ ನಾಯಕಿಯಾಗಿ ಯಶಸ್ವಿಯಾಗಿ ನಟಿಸುತ್ತಿದ್ದಾರೆ. ಇವರು ವಿಜಯ್, ಅಜಿತ್, ವಿಕ್ರಮ್, ಸೂರ್ಯ, ಧನುಷ್, ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಮುಂತಾದ ದಕ್ಷಿಣ ಭಾರತದ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ.

ನಯನತಾರಾ ಅವರ 75 ನೇ ಚಿತ್ರವಾಗಿ ಅವರು ನಟಿಸಿದ ಅನ್ನಪೂರ್ಣಿ ಚಿತ್ರ ಬಿಡುಗಡೆಯಾಗಿದೆ... ಅವರು ನಟಿಸಿದ ಎಲ್ಲ ಚಿತ್ರಗಳಿಗಿಂತ ಭಿನ್ನವಾಗಿ ಈ ಚಿತ್ರವು ವಿವಾದವನ್ನು ಎದುರಿಸಿದ್ದು.. ನಿರ್ದಿಷ್ಟ ಸಂಭಾಷಣೆಯನ್ನು ಉಲ್ಲೇಖಿಸಿ ಚಿತ್ರವನ್ನು ಒಟಿಡಿ ಸೈಟ್‌ನಿಂದ ತೆಗೆದುಹಾಕಲಾಗಿದೆ. 

ಇದನ್ನೂ ಓದಿ-“ಈತನ ಫ್ರೆಂಡ್ಶಿಪ್ ನನಗೆ ಬೇಡ, ಅದು ಮುಗಿದ ಅಧ್ಯಾಯ”- ಕಿಚ್ಚನ ಮುಂದೆಯೇ ಸಂಗೀತ ಹೀಗಂದಿದ್ದು ಯಾರಿಗೆ ಗೊತ್ತಾ?

ಇನ್ನು ನಟಿ ನಯನತಾರಾ 2022 ರಲ್ಲಿ ಮದುವೆಯಾದ ನಾಲ್ಕು ತಿಂಗಳೊಳಗೆ ಎರಡು ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯಿಯಾಗಿದ್ದಾರೆ.. ಅಲ್ಲದೆ, ನಟನೆಯ ಕಡೆಯಿದ್ದರೂ ತನ್ನ ಕುಟುಂಬ ಮತ್ತು ಮಕ್ಕಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುವ ನಯನತಾರಾ, ಒಂದರ ನಂತರ ಒಂದರಂತೆ ಕೆಲವು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.. ಕಳೆದ ವರ್ಷವಷ್ಟೇ ನಯನತಾರಾ ನ್ಯಾಪಿ ಕಂಪನಿ ಮತ್ತು 9ಸ್ಕಿನ್ ಎಂಬ ಕಾಸ್ಮೆಟಿಕ್ ಕಂಪನಿಯನ್ನು ಆರಂಭಿಸಿದ್ದರು. 

ಇತ್ತೀಚೆಗಷ್ಟೇ ಸೇಲಂನಲ್ಲಿ ನಡೆದ ಬೇಮಿ9 ಕಾರ್ಯಕ್ರಮದ ಯಶಸ್ವಿ ಸಮಾರಂಭದಲ್ಲಿ ನಯನತಾರಾ ತಮ್ಮ ಯಶಸ್ಸಿಗೆ ಪತಿಯೇ ಕಾರಣ ಎಂದು ಹೇಳಿದ್ದರು. ಎರಡು ದೇಹ ಒಂದೇ ಆಗಿರುವ ನಯನ-ವಿಕ್ಕಿ ಪ್ರೇಮ ಪ್ರಕರಣದಲ್ಲಿ ಇವರ ಭವಿಷ್ಯ ನಿಜವಾಗುತ್ತಾ ಕಾದು ನೋಡೋಣ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News