‘ಅಪ್ಪು’ ನೆನೆದು ಅಲ್ಲು ಅರ್ಜುನ್ ಭಾವುಕ; ಪವರ್‌ ಸ್ಟಾರ್‌ ಬಗ್ಗೆ ಹೇಳಿದ್ದೇನು ಗೊತ್ತಾ..?

ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌ಗೆ  ಬಂದಿಳಿದಿದ್ದ ಅಲ್ಲು ಅರ್ಜುನ್‌, ಅಲ್ಲಿಂದ ನೇರವಾಗಿ ನಟ ಹಾಗೂ ‘ಅಪ್ಪು’ ಅವರ ಸಹೋದರ ಶಿವಣ್ಣನ ಮನೆಗೆ ತೆರಳಿದರು.

Written by - Malathesha M | Last Updated : Feb 23, 2022, 06:21 PM IST
  • ‘ಅಪ್ಪು’ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮಿಸಿದ ಸ್ಟ್ರೈಲಿಶ್ ಸ್ಟಾರ್ ಅಲ್ಲು ಅರ್ಜುನ್
  • ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಗಿನ ಸ್ನೆಹ ನೆನೆದು ಟಾಲಿವುಡ್ ನಟ ಭಾವುಕ
  • ಶಿವಣ್ಣ ಮತ್ತು ‘ಅಪ್ಪು’ ಮನೆಗೆ ಭೇಟಿ ನೀಡಿದ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಅಲ್ಲು ಅರ್ಜುನ್
‘ಅಪ್ಪು’ ನೆನೆದು ಅಲ್ಲು ಅರ್ಜುನ್ ಭಾವುಕ; ಪವರ್‌ ಸ್ಟಾರ್‌ ಬಗ್ಗೆ ಹೇಳಿದ್ದೇನು ಗೊತ್ತಾ..? title=
‘ಅಪ್ಪು’ ನೆನೆದು ಭಾವುಕರಾದ ಅಲ್ಲು ಅರ್ಜುನ್

ಬೆಂಗಳೂರು: ಟಾಲಿವುಡ್‌ನ ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌(Allu Arjun) ಹಾಗೂ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) ನಡುವೆ ಅತ್ಮೀಯ ಸ್ನೇಹವಿತ್ತು. ಆದರೆ ‘ಅಪ್ಪು’ ನಮ್ಮನ್ನೆಲ್ಲಾ ಅಗಲಿದ ಸಂದರ್ಭದಲ್ಲಿ ಅಲ್ಲು ಆಗಮಿಸಿರಲಿಲ್ಲ. ಇತ್ತೀಚೆಗೆ ‘ಪುಷ್ಪ’ ಚಿತ್ರದ ಪ್ರಮೋಷನ್‌ ವೇಳೆ ಬೆಂಗಳೂರಿಗೆ ಬಂದಿದ್ದರೂ ಅಲ್ಲು, ಅಪ್ಪು ಮನೆಗೆ ತೆರಳಿರಲಿಲ್ಲ. ಇದಕ್ಕೆ ಅಂದೇ ಸ್ಪಷ್ಟನೆ ನೀಡಿದ್ದ ಸ್ಟೈಲಿಸ್ಟ್‌ ಸ್ಟಾರ್‌ ಇದೀಗ ಅಪ್ಪು ಸಮಾಧಿಗೆ ಭೇಟಿ ನೀಡಿ ನಮಿಸಿದ್ದಾರೆ. ಅಲ್ಲದೆ ಪವರ್‌ ಸ್ಟಾರ್‌ ಜೊತೆಗಿನ ಸ್ನೇಹ ನೆನೆದು ಭಾವುಕರಾಗಿದ್ದಾರೆ.

ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌(HAL Airport)ಗೆ  ಬಂದಿಳಿದಿದ್ದ ಅಲ್ಲು ಅರ್ಜುನ್‌, ಅಲ್ಲಿಂದ ನೇರವಾಗಿ ನಟ ಹಾಗೂ ‘ಅಪ್ಪು’ ಅವರ ಸಹೋದರ ಶಿವಣ್ಣನ ಮನೆಗೆ ತೆರಳಿದರು. ನಾಗಾವರದ ಮನೆಗೆ ತೆರಳಿದ ಅಲ್ಲು ಅರ್ಜುನ್, ಶಿವಣ್ಣ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ಇದನ್ನೂ ಓದಿ: #LoveMocktail2: 'ಲವ್‌ ಮಾಕ್ಟೇಲ್‌ 2' ರಿಲೀಸ್‌ಗೆ ರೆಡಿ: ಬಿಡುಗಡೆ ಯಾವಾಗ ಗೊತ್ತಾ..?

ಭಾವುಕರಾದ ಅಲ್ಲು ಅರ್ಜುನ್

ಇನ್ನು ನಟ ಶಿವಣ್ಣ(Shiva Raj Kumar) ಅವರ ಮನೆಗೆ ಭೇಟಿ ನೀಡಿದ ಬಳಿಕ ಅಲ್ಲು ಅರ್ಜುನ್‌ ನೇರವಾಗಿ ಪುನೀತ್ ರಾಜ್‍ಕುಮಾರ್ ಅವರ ಸದಾಶಿವ ನಗರದ ಮನೆಗೆ ಭೇಟಿ ನೀಡಿದರು. ಅಪ್ಪು ಫೋಟೋಗೆ ನಮಿಸಿದರು. ನಂತರ ನೇರವಾಗಿ ಅಪ್ಪು ಸಮಾಧಿ ಇರುವ ಕಂಠೀರವ ಸ್ಟೂಡಿಯೋಗೆ ತೆರಳಿದ ಅಲ್ಲು ಅರ್ಜುನ್‌ ಅಪ್ಪು ಸಮಾಧಿಗೆ ನಮಿಸಿದ್ರು. ಈ ವೇಳೆ ಅಪ್ಪು ಹಾಗೂ ತಮ್ಮ ನಡುವಿನ ಸ್ನೇಹ ಸಂಬಂಧದ ಬಗ್ಗೆ ಮಾತನಾಡುತ್ತಾ ಭಾವುಕರಾದರು.

‘ನನ್ನ ಹಾಗೂ ಪುನೀತ್​ ಮಧ್ಯೆ  ಉತ್ತಮ ಬಾಂಧವ್ಯವಿತ್ತು. ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಹಾಗೇ ಪುನೀತ್‌(Puneeth Rajkumar) ಅವರು ಹೈದರಾಬಾದ್​ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು. ‘ಅಲಾ ವೈಕುಂಟಪುರಮುಲೋ’ ಚಿತ್ರದ ಸಂದರ್ಭದಲ್ಲಿ ನನಗೆ ಕಾಲ್ ಮಾಡಿದ್ದರು. ಹಾಡು ತುಂಬಾ​ ಚೆನ್ನಾಗಿದೆ ಎಂದು ಅಂದು ಪುನೀತ್‌ ಅವರು ಹೇಳಿದ್ದರು. ಇಬ್ಬರೂ ಭೇಟಿ ಆಗೋ ಆಲೋಚನೆ ಕೂಡ ಇತ್ತು. ಆದರೆ ಲಾಕ್​ಡೌನ್​ ಪರಿಣಾಮ ಸಾಧ್ಯವಾಗಲೇ ಇಲ್ಲ. ಪುನೀತ್ ಅವರ ನಿಧನ ತುಂಬಾ ನೋವು ತಂದಿದೆ’‌ ಎಂದಿದ್ದಾರೆ ಅಲ್ಲು ಅರ್ಜುನ್.

ಇದನ್ನೂ ಓದಿ: ಫೆಬ್ರವರಿ 21 ರಂದು ಗೆಳತಿ ಶಿಬಾನಿ ದಾಂಡೇಕರ್ ಮದುವೆಯಾಗಲಿರುವ ಫರ್ಹಾನ್ ಅಖ್ತರ್

ಒಟ್ನಲ್ಲಿ ಅಲ್ಲು ಅರ್ಜುನ್‌(Allu Arjun) ಕೊಟ್ಟ ಮಾತಿನಂತೆ ಅಪ್ಪು ನಿವಾಸ ಹಾಗೂ ಸಮಾಧಿಗೆ ಭೇಟಿ ನೀಡಿ ನಮಿಸಿದ್ದಾರೆ. ಹಾಗೇ ಅಪ್ಪು ಹಾಗೂ ತಮ್ಮ ಸ್ನೇಹ ನೆನೆದು ಅಲ್ಲು ಭಾವುಕರಾಗಿದ್ದು, ಇಬ್ಬರ ಸ್ನೇಹ ಸಂಬಂಧದ ಪ್ರತೀಕವಾಗಿದೆ. ಕನ್ನಡಿಗರ ಪಾಲಿನ ಪ್ರೀತಿಯ ನಟ ‘ಅಪ್ಪುʼ ಅವರ ಅಕಾಲಿಕ ಮರಣ ಕೋಟ್ಯಂತರ ಅಭಿಮಾನಿಗಳ ಜೊತೆಗೆ ಸ್ಟಾರ್‌ ನಟರನ್ನೂ ಕಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News