BBK 10: ಭಾವದ ಮಳೆಯಲ್ಲಿ ಭರಪೂರ ನೆನೆದ ದೊಡ್ಮನೆ ಮಂದಿ.. ಸ್ಪರ್ಧಿಗಳ ಮನದಾಳದ ಮಾತಿಗೆ ಕಿವಿಯಾದ ಬಿಗ್‌ಬಾಸ್!

Bigg Boss Kannada: ಕಳೆದ ವಾರದ ಕೋಲಾಹಲಗಳು, ಜಗಳಗಳು, ಟಾಸ್ಕ್‌ ಎಂಬುದು ವಿಕೋಪಕ್ಕೆ ತಿರುಗಿಕೊಂಡ ವಿಪರ್ಯಾಸಗಳು, ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ತೆಗೆದುಕೊಂಡ ಕ್ಲಾಸ್‌… ಎಲ್ಲವೂ ಮುಗಿದು ಬಿಗ್‌ಬಾಸ್‌ ಮನೆಯೀಗ ಹೊಸ ವಾರದ ಹೊಸ ದಿನಕ್ಕೆ ಕಾಲಿರಿಸಿದೆ. ಈ ವಾರದ ಮೊದಲ ದಿನ ಹೇಗಿತ್ತು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌..   

Written by - Savita M B | Last Updated : Dec 11, 2023, 10:12 AM IST
  • ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು
  • ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ.
  • ಇಂಥದ್ದೊಂದು ಎಮೋಷನಲ್‌ ಓಪನ್‌ಅಪ್‌ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್‌ಬಾಸ್‌.
BBK 10: ಭಾವದ ಮಳೆಯಲ್ಲಿ ಭರಪೂರ ನೆನೆದ ದೊಡ್ಮನೆ ಮಂದಿ.. ಸ್ಪರ್ಧಿಗಳ ಮನದಾಳದ ಮಾತಿಗೆ ಕಿವಿಯಾದ ಬಿಗ್‌ಬಾಸ್!  title=

BBK 10: ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ. ಇಂಥದ್ದೊಂದು ಎಮೋಷನಲ್‌ ಓಪನ್‌ಅಪ್‌ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್‌ಬಾಸ್‌. ಬಿಗ್‌ಬಾಸ್‌, ಮನೆಯ ಪ್ರತಿ ಸದಸ್ಯರನ್ನು ಕನ್ಫೆಷನ್‌ ರೂಮಿಗೆ ಕರೆದು ಅವರ ಮನದಾಳದ ಮಾತುಗಳಿಗೆ ಕಿವಿಯಾಗಿದ್ದಾರೆ. 

ಒಂಟಿಯಾಗಿ ಕನ್‌ಪೆಷನ್‌ ರೂಮಿನಲ್ಲಿ ಕೂತ ಸ್ಪರ್ಧಿಗಳು ತಮ್ಮ ಮನಸಲ್ಲಿ ಮುಚ್ಚಿಕೊಂಡಿದ್ದ ಹಲವು ಸಂಗತಿಗಳನ್ನು, ಕಾಡುವ ವಿಷಯಗಳನ್ನು, ಗಾಯದ ನೋವುಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಹೊರಜಗತ್ತಿಗೆ ಇದುವರೆಗೆ ಒರಟು, ಸಂಚುಕೋರರು, ಅವಕಾಶವಾದಿ, ಚೇಲಾ, ಡಾಮಿನೆಂಟ್, ಉದ್ಧಟ, ನೆಗೆಟೀವ್, ಕುತಂತ್ರಿ, ಮಾತುಗಾರರು ಹೀಗೆ ಹತ್ತು ಹಲವು ಲೇಬಲ್‌ಗಳನ್ನು ಮನೆಯ ಉಳಿದ ಸದಸ್ಯರಿಂದಲೇ ಪಡೆದುಕೊಂಡು ಓಡಾಡುತ್ತಿದ್ದ ಸ್ಪರ್ಧಿಗಳು, ತಮ್ಮ ಎಲ್ಲ ಲೇಬಲ್‌ಗಳನ್ನೂ ಮರೆತು ಬಿಗ್‌ಬಾಸ್ ಜೊತೆಗೆ ಭಾವುಕವಾಗಿ ಮಾತಾಡಿದ್ದಾರೆ. ಇದರಿಂದ ಅವರ ವ್ಯಕ್ತಿತ್ವದ ಭಿನ್ನ ಮಗ್ಗಲುಗಳು ತೆರೆದುಕೊಂಡಿವೆ. ಅವು ಹೃದಯಸ್ಪರ್ಶಿಯೂ, ಮನಕರಗುವಂತೆಯೂ ಇದೆ.

ಇದನ್ನೂ ಓದಿ-Sunny Deol : ಕುಡಿದ ಮತ್ತಿನಲ್ಲಿ ನಡುರಾತ್ರಿ ರಸ್ತೆ ಮೇಲೆ ತೂರಾಡಿದ ಬಾಲಿವುಡ್‌ ನಟ..! ಸನ್ನಿ ಡಿಯೋಲ್‌ ವಿಡಿಯೋ ವೈರಲ್‌

‘ತಂಗಿ ಡೆಲಿವರಿ ಡೇಟ್‌ ಇತ್ತು. ಏನಾಯ್ತು ಗೊತ್ತಾಗ್ತಿಲ್ಲ’ ಎಂದು ಕಾರ್ತಿಕ್‌ ಕಳವಳಗೊಂಡಿದ್ದರೆ, ತನಿಷಾ, ‘ತುಂಬ ಲೋನ್ಲಿ ಫೀಲ್ ಆಗ್ತಿದೆ. ನಾನು ಮಾತಾಡಿದ್ದು ಇಲ್ಲಿ ಯಾರಿಗೂ ಇಷ್ಟ ಆಗ್ತಿಲ್ಲ ಎಂದು ಕಣ್ಣೀರಾಗಿದ್ದಾರೆ. ‘ಸ್ಕೂಲಲ್ಲಿ ಇರ್ಬೇಕಿದ್ರೆ, ಕಾಲೇಜಲ್ಲಿ ಇರ್ಬೇಕಿದ್ರೆ ನನ್ನ ಕಾರ್ನರ್ ಮಾಡಿದ್ದೇ ಜಾಸ್ತಿ. ಇಲ್ಲೂ ಸೇಮ್ ಸಿಚುವೇಷನ್ ಕ್ರಿಯೇಟ್ ಆಗ್ತಿದೆ’ ಎಂದು ತಮ್ಮ ಮನದೊಳಗಿನ ನೋವನ್ನು ಸಂಗೀತಾ ಹಂಚಿಕೊಂಡಿದ್ದರೆ, ‘ಪ್ರತಾಪ್‌ ಕಪ್ಪು ಕನ್ನಡಕ ತೊಟ್ಟು ಓಡಾಡುತ್ತಿರುವುದನ್ನು ನೋಡಲು ಕಷ್ಟವಾಗುತ್ತಿದೆ. ಎಲ್ಲೋ, ನಾನೇ ಅದಕ್ಕೆ ಕಾರಣವಾಗಿಬಿಟ್ನಾ ಅನಿಸುತ್ತಿದೆ’ ಎಂದು ವರ್ತೂರ್ ಸಂತೋಷ್ ತಳಮಳಿಸಿದ್ದಾರೆ.

ಒಟ್ಟಾರೆ ಈ ವಾರದ ಆರಂಭ ಭಾವಪೂರ್ಣವಾಗಿದೆ. ಮನದೊಳಗೆ ಬಚ್ಚಿಟ್ಟುಕೊಂಡಿದ್ದ ಹಲವು ನೋವುಗಳನ್ನು, ಅವಮಾನ, ಹಿಂಜರಿಕೆಗಳನ್ನು ಹಂಚಿಕೊಂಡಿರುವ ಸದಸ್ಯರು ಹಗುರಾಗಿದ್ದಾರೆ. ನೋವನ್ನು ಹಂಚಿಕೊಂಡ ಮನುಷ್ಯ ಹೊಸತಾಗುತ್ತಾನಂತೆ. ಹಾಗಾದರೆ ಈ ವಾರದ ಬಿಗ್‌ಬಾಸ್‌ನಲ್ಲಿ ಹೊಸದೊಂದು ಪ್ರಭೆ ಕಾಣಿಸಿಕೊಳ್ಳಲಿದೆಯಾ? ಹೊಸ ಉತ್ಸಾಹದೊಂದಿಗೆ, ಹೊಸ ಹೊಸ ಕ್ರಿಯೇಟಿವ್‌ ಯೋಚನೆಗಳೊಂದಿಗೆ ಸದಸ್ಯರು ಆಡಲಿದ್ದಾರಾ? ಈ ನಿರೀಕ್ಷೆಯಂತೂ ಎಲ್ಲರಲ್ಲೂ ಇದ್ದೇ ಇದೆ. ಅದು ನಿಜವಾಗುತ್ತದಾ ಎಂಬುದನ್ನು ಬಿಗ್‌ಬಾಸ್ ಮನೆಯ ಸದಸ್ಯರ ನಡವಳಿಕೆಯೇ ನಿರ್ಧರಿಸುತ್ತದೆ.

ಇದನ್ನೂ ಓದಿ-ಬೆಂಗಳೂರಿಗೆ ಕಾಲಿಟ್ಟ ಜಪಾನೀಸ್ ಫಿಲ್ಮ್ ಫೆಸ್ಟಿವಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News