Shivraj KR Pete: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಮೂಲಕ ಎಂಟ್ರಿ ಕೊಟ್ಟ ಶಿವರಾಜ್ ಕೆ ಆರ್ ಪೇಟೆ ತಮ್ಮ ಆಕ್ಟಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಶೋ ನಿಂದ ಪ್ರಾಮುಖ್ಯತೆ ಪಡೆದ ಶಿವರಾಜ್ ಕೆಆರ್ ಪೇಟೆ ತಮ್ಮ ಆಕ್ಟಿಂಗ್ನ ಮೂಲಕ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡರು.
ಕಾಮಿಡಿ ಕಿಲಾಡಿಗಳ ಮೂಲಕ ಕಮಾಲ್ ಮಾಡಿದ್ದ ಶಿವರಾಜ್ ಕೆಆರ್ ಪೇಟೆ 2020ರಲ್ಲಿ
'ನಾನು ಮತ್ತು ಗುಂಡ' ಎಂಬ ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಯವರೆಗೂ ಹಾಸ್ಯ ನಟನಾಗಿ ನಟಿಸಿದ್ದ ಶಿವರಾಜ್ ಕೆಆರ್ ಪೆಟೆಗೆ ಈ ಸಿನಿಮಾ ಮೂಲಕ ಹೀರೋ ಆಗಿ ನಟಿಸುವ ಚಾನ್ಸ್ ಪಡೆದರು. ಇದೀಗ ಶಿವರಾಜ್ ಕೆ ಆರ್ ಪೇಟೆ ಎರಡನೇ ಬಾರಿಗೆ ಹೀರೋ ಆಗಲಿದ್ದಾರೆ.
ಇದನ್ನೂ ಓದಿ: ಅವನ ಪಾಪಕರ್ಮ ಅವನನ್ನೇ ಸುಡುತ್ತದೆ, ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಹಿರಿಯ ನಟ ಜಗ್ಗೇಶ್ ಮಾರ್ಮಿಕ ಟ್ವೀಟ್
ಹಲವು ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಶರತ್ ಚಕ್ರವರ್ತಿ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶರತ್ ಚಕ್ರವರ್ತಿ " ಶಿವರಾಜ್ ಕೆ ಆರ್ ಪೇಟೆ ಒಳ್ಳೆ ಪ್ರತಿಭೆಯುಳ್ಳ ನಟ, ನಾನು ಮತ್ತು ಗುಂಡ ಚಿತ್ರದಲ್ಲಿ ನಟಿಸಿದ್ದ ಶಿವರಾಜ್ ತಮ್ಮ ಆಕ್ಟಿಂಗ್ನ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಇದೊಂದು ಭಾವನಾತ್ಮಕ ಸಿನಿಮಾ ಆಗಿದ್ದು, ಚಿತ್ರ ವಿಭಿನ್ನವಾಗಿರಲಿದೆ ಎಂದು" ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.