"ಸೂರಪ್ಪ ಬಾಬು ಒಬ್ಬ ಶಿಖಂಡಿ" ಹೊಸ ಬಾಂಬ್‌ ಸಿಡಿಸಿದ ಚಕ್ರವರ್ತಿ ಚಂದ್ರಚೂಡ್‌

Chakravarthy Chandrachud slams Surappa Babu: ಸೂರಪ್ಪ ಬಾಬು ಅವರೇ ಸುದೀಪ್‌ ಅವರಿಗೆ ಬಾಕಿ ಹಣ ಕೊಡಬೇಕಿದೆ ಎಂಬ ವಿಚಾರ ಬಹಿರಂಗವಾಗಿದೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಇದೀಗ ಈ ಬಾಂಬ್‌ ಸಿಡಿಸಿದ್ದಾರೆ. 

Written by - Chetana Devarmani | Last Updated : Jul 19, 2023, 12:01 PM IST
  • ಸುದೀಪ್‌ - ಕುಮಾರ್‌ ಅಡ್ವಾನ್ಸ್‌ ಜಟಾಪಟಿ
  • ನಟ ಸುದೀಪ್‌ ವಿರುದ್ಧ ಪಿತೂರಿ ಮಾಡಿದ್ದು ಸೂರಪ್ಪ ಬಾಬು
  • ಹೊಸ ಬಾಂಬ್‌ ಸಿಡಿಸಿದ ಚಕ್ರವರ್ತಿ ಚಂದ್ರಚೂಡ್‌
"ಸೂರಪ್ಪ ಬಾಬು ಒಬ್ಬ ಶಿಖಂಡಿ" ಹೊಸ ಬಾಂಬ್‌ ಸಿಡಿಸಿದ ಚಕ್ರವರ್ತಿ ಚಂದ್ರಚೂಡ್‌   title=

ಸುದೀಪ್‌ - ಕುಮಾರ್‌ ಅಡ್ವಾನ್ಸ್‌ ಜಟಾಪಟಿ: ನಟ ಸುದೀಪ್‌ ಮತ್ತು ನಿರ್ಮಾಪಕ ಎಂ.ಎನ್‌ ಕುಮಾರ್‌ ಅವರ ನಡುವಿನ ಈ ಅಡ್ವಾನ್ಸ್‌ ವಿವಾದ ದಿನೆ ದಿನೇ ಹೊಸರಂಗು ಪಡೆಯುತ್ತಿದೆ. ದಿನಕ್ಕೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಅತ್ತ ಸುದೀಪ್‌ ತಮ್ಮ ವಿರುದ್ಧದ ಆರೋಪಗಳಿಂದ ಕೆಂಡಾಮಂಡಲರಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇತ್ತ ಈ ವಿವಾದ ಫಿಲ್ಮ್‌ ಚೇಂಬರ್‌ನಲ್ಲೇ ಬಗೆಹರೆಯಬೇಕು ಎಂದು ಪಟ್ಟು ಹಿಡದು, ನಿರ್ಮಾಪಕ ಕುಮಾರ್‌ ಧರಣಿ ಕುಳಿತಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಸೂರಪ್ಪ ಬಾಬು ಅವರೇ ಸುದೀಪ್‌ ಅವರಿಗೆ ಬಾಕಿ ಹಣ ಕೊಡಬೇಕಿದೆ ಎಂಬ ವಿಚಾರ ಬಹಿರಂಗವಾಗಿದೆ.  

ಸುದೀಪ್‌ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಇದೀಗ ಈ ಬಾಂಬ್‌ ಸಿಡಿಸಿದ್ದಾರೆ. ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್‌ ಆರೋಪ ಹೊರಿಸಿದ ಬಳಿಕ  ನಿರ್ಮಾಪಕ ಜಾಕ್ ಮಂಜು ಅವರ ಜೊತೆ ಪ್ರೆಸ್‌ಮೀಟ್‌ನಲ್ಲಿ ಚಂದ್ರಚೂಡ್‌ ಭಾಗಿಯಾಗಿದ್ದರು. ಇದೀಗ ಈ ವಿಚಾರವಾಗಿ ವಿಡಿಯೋವೊಂದನ್ನು ಮಾಡಿ ಯೂಟೂಬ್‌ನಲ್ಲಿ ಹಾಕಿದ್ದಾರೆ. ಸೂರಪ್ಪ ಬಾಬು ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಇದನ್ನೂ ಓದಿ: "ಗಂಡ ಹೆಂಡತಿ ಜಗಳ ಬೀದಿಗೆ ಬಂದಿದೆ" ಸುದೀಪ್‌ ಬಗ್ಗೆ ರವಿಚಂದ್ರನ್‌ ಹೇಳಿದ್ದೇನು?

ಸುದೀಪ್ ವಿರುದ್ಧ ಕುಮಾರ್ ಮಾಡಿರುವ ಆರೋಪದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡವಿದೆ. ಸೂರಪ್ಪ ಬಾಬು ಒಬ್ಬ ಶಿಖಂಡಿ. ಕೋಟಿಗೊಬ್ಬ 2 ಸಿನಿಮಾದ ಸಂಭಾವನೆ 2.50 ಕೋಟಿ ರೂಪಾಯಿ, ಜಾಕ್ ಮಂಜು ಅವರಿಗೆ ಒಂದೂವರೆ ಕೋಟಿ ರೂಪಾಯಿ, ಕೋಟಿಗೊಬ್ಬ 3 ಸಿನಿಮಾದ 3.5 ಕೋಟಿ ಸೇರಿ ಒಟ್ಟು ಏಳು ಕೋಟಿ ಬಾಕಿ ಹಣವನ್ನು ಸೂರಪ್ಪ ಬಾಬು ಕೊಡಬೇಕಿದೆ ಎಂದು ಚಕ್ರವರ್ತಿ ಚಂದ್ರಚೂಡ್‌ ಹೇಳಿದ್ದಾರೆ. 

ಕೋಟಿಗೊಬ್ಬ 3 ಸಿನಿಮಾ ಒಂದು ದಿನ ತಡವಾಗಿ ಬಿಡುಗಡೆ ಆಗಲು ಕಾರಣ ಇದೇ ಸೂರಪ್ಪ ಬಾಬು. ಅಂದು ನಾನು ಸುದೀಪ್ ಅವರ ಜೊತೆಯಲ್ಲೇ ಇದ್ದೆ. ಸೂರಪ್ಪ ಬಾಬು ತನ್ನ ಮಗಳ ಕೈಯಲ್ಲಿ ಸುದೀಪ್‌ ಅವರಿಗೆ ಮನವಿ ಮಾಡಿಸಿದರು. ಸ್ವತಃ ಸೂರಪ್ಪ ಬಾಬು ಅವರೇ ಸುದೀಪ್ ಮಾಡಿದ ಸಹಾಯವನ್ನು ಹೇಳಿಕೊಂಡಿದ್ದಾರೆ. ಸೂರಪ್ಪ ಬಾಬು ಕಷ್ಟದಲ್ಲಿದ್ದಾಗೆಲ್ಲ ಕೈಹಿಡಿದವರು ಸುದೀಪ್‌. ಆದರೆ ಈಗ ಸುದೀಪ್‌ ಬೆನ್ನ ಹಿಂದೆ ಇಷ್ಟೆಲ್ಲ ಪಿತೂರಿ ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಇದನ್ನೂ ಓದಿ: "ನನಗೆ ನ್ಯಾಯ ಬೇಕು".. ಸುದೀಪ್‌ ವಿರುದ್ಧ ಪ್ರೊಡ್ಯೂಸರ್‌ ಕುಮಾರ್ ಪ್ರೊಟೆಸ್ಟ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News