ಹಿಂದುತ್ವ, ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ : ಚೇತನ್‌ ಅಹಿಂಸಾ

ಹಿಂದುತ್ವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಅಂಜನಾದ್ರಿ ಅಭಿವೃದ್ದಿಗಾಗಿ ಸಿಎಂ ಸಿದ್ದರಾಮಯ್ಯ 100 ಕೋಟಿ ರೂ. ಅನುದಾನ ನೀಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.

Written by - Krishna N K | Last Updated : May 25, 2024, 05:11 PM IST
    • ಸ್ಯಾಂಡಲ್‌ವುಡ್‌ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ
    • ಚೇತನ್‌ರಾಜಕೀಯ ಮತ್ತು ಧರ್ಮಾಧಾರಿತ ವಿಚಾರಗಳ ಕುರಿತು ಮಾತನಾಡುತ್ತಿರುತ್ತಾರೆ.
    • ಇದೀಗ ಹಿಂದುತ್ವದ ವಿಚಾರವಾಗಿ ಚೇತನ್‌ ಮಾಡಿರುವ ಕಾಮೆಂಟ್‌ ವೈರಲ್‌ ಆಗುತ್ತಿವೆ.
ಹಿಂದುತ್ವ, ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ : ಚೇತನ್‌ ಅಹಿಂಸಾ title=

Chetan Ahimsa : ಸ್ಯಾಂಡಲ್‌ವುಡ್‌ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಆಗಾಗ ರಾಜಕೀಯ ಮತ್ತು ಧರ್ಮಾಧಾರಿತ ವಿಚಾರಗಳ ಕುರಿತು ಮಾತನಾಡುತ್ತಿರುತ್ತಾರೆ. ಕೆಲವೊಮ್ಮೆ ಅವರ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತವೆ. ಇದೀಗ ಹಿಂದುತ್ವದ ವಿಚಾರವಾಗಿ ಚೇತನ್‌ ಮಾಡಿರುವ ಕಾಮೆಂಟ್‌ ವೈರಲ್‌ ಆಗುತ್ತಿವೆ.

ಹೌದು.. ಹಿಂದುತ್ವದ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಹಿಂದುತ್ವವು ಮುಸ್ಲಿಮರು ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ (ಧಾರ್ಮಿಕ ಅಲ್ಪಸಂಖ್ಯಾತರನ್ನ) ಅಂತೆ ಹೇಳಿಕೊಂಡಿದ್ದಾರೆ. ಅಲ್ಲದೆ, ದೋಷಪೂರಿತ ಕನ್ನಡ ಹೋರಾಟಗಾರರು ಮಾರ್ವಾಡಿಗಳು ಮತ್ತು ಸಿಂಧಿಗಳನ್ನು ಖಳನಾಯಕರನ್ನಾಗಿ ಮಾಡುತ್ತಾರೆ (ಶ್ರೀಮಂತ ವಲಸಿಗರನ್ನ) ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಈಕೆ ಅಂದಕ್ಕೆ ಸ್ಟಾರ್‌ ಡೈರೆಕ್ಟರ್‌ RGV ಬೋಲ್ಡ್‌ ಆಗಿದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ..! ಆಹಾ.. ಎಂಥಾ ಚಂದ ಅಲ್ವಾ

ಇನ್ನು ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತಾರ (ಜಾತಿ ಶ್ರೇಣಿವ್ಯವಸ್ಥೆಯ ಗಣ್ಯರನ್ನ) ಹಾಗೂ ನಾವು ಸಮಾನತಾವಾದಿಗಳು ಅಸಮಾನತೆಯ ಇಡೀ ವ್ಯವಸ್ಥೆಯನ್ನು ಖಳನಾಯಕನ್ನಾಗಿ ಮಾಡಬೇಕು, ಯಾವುದೇ ಸಮುದಾಯವಲ್ಲ ಅಂತ ಬರೆದುಕೊಂಡಿದ್ದಾರೆ.

 

ಅಲ್ಲದೆ, ಕಳೆದ ಕೆಲವು ದಿನಗಳ ಹಿಂದೆ, ಅಂಜನಾದ್ರಿ ಅಭಿವೃದ್ದಿಗಾಗಿ ಸಿಎಂ ಸಿದ್ದರಾಮಯ್ಯ 100 ಕೋಟಿ ರೂ. ಅನುದಾನ ನೀಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದರು. ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ‘ಸೋಮಾರಿ’ ಸಿದ್ದು ಅಹಿಂದ ನಾಯಕರಲ್ಲ; ಅಂಜನಾದ್ರಿ ಬೆಟ್ಟದ ‘ಹನುಮಾನ್ ಜನ್ಮಭೂಮಿ’ಗೆ 100 ಕೋಟಿ ರೂಪಾಯಿ ಕೊಟ್ಟಿದ್ದೇಕೆ? ಎಂದು ಚೇತನ್ ಅಹಿಂಸೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News