ಹುಬ್ಬಳ್ಳಿಯಲ್ಲಿ ಮಗದೊಮ್ಮೆ ರಂಗೇರಲಿದೆ ಡಿ ಬಾಸ್ ಫ್ಯಾನ್ಸ್ ಪಾರ್ಟಿ.. ಈ ಬಾರಿ #Kaatera ಟ್ರೈಲರ್ ಲಾಂಚ್ ಫಂಕ್ಷನ್ ನೆಕ್ಸ್ಟ್ ಲೆವೆಲ್!

Katerra Trailer: ಚಾಲೆಂಜಿಂಗ್‌ ಸ್ಟಾರ್‌ ಅಭಿಮಾನಿಗಳು ಸದ್ಯ ಕಾಯುತ್ತಿರುವ ಬಹುನಿರೀಕ್ಷಿತ ಚಿತ್ರ ಕಾಟೇರ.. ಇದೀಗ ಈ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು.. ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದೆ..   

Written by - Savita M B | Last Updated : Dec 15, 2023, 02:01 PM IST
  • ಡಿ ಬಾಸ್‌ ಅಭಿಮಾನಿಗಳು ಸದ್ಯ 'ಕಾಟೇರ'ನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ
  • ಇದೇ ಸಮಯದಲ್ಲಿ ಚಿತ್ರತಂಡ ದಾಸನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ
  • ಇದೀಗ ಈ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ
ಹುಬ್ಬಳ್ಳಿಯಲ್ಲಿ ಮಗದೊಮ್ಮೆ ರಂಗೇರಲಿದೆ ಡಿ ಬಾಸ್ ಫ್ಯಾನ್ಸ್ ಪಾರ್ಟಿ.. ಈ ಬಾರಿ #Kaatera ಟ್ರೈಲರ್ ಲಾಂಚ್ ಫಂಕ್ಷನ್ ನೆಕ್ಸ್ಟ್ ಲೆವೆಲ್! title=

Katerra Updates: ಡಿ ಬಾಸ್‌ ಅಭಿಮಾನಿಗಳು ಸದ್ಯ 'ಕಾಟೇರ'ನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.. ಇದೇ ಸಮಯದಲ್ಲಿ ಚಿತ್ರತಂಡ ದಾಸನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದು.. ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಡಿಸೆಂಬರ್ 13 ರಂದು ಕಾಟೇರ್‌ ಮುಂದಿನ ಅಪ್‌ಡೇಟ್‌ ನೀಡುತ್ತೇವೆ ಎಂದು ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದರು.. ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತ್ತು..

ಇದೀಗ ಡಿಸೆಂಬರ್ 16 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಕಾಟೇರ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.. ಈ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್‌ ಆಗಿ ಭಾರೀ ಸದ್ದು ಮಾಡುತ್ತಿವೆ.. ಬಿಡುಗಡೆಯಾದ ಎರಡೂ ಸಾಂಗ್‌ನಲ್ಲಿಯೂ ದರ್ಶನ್‌ ಹಾಗೂ ಆರಾಧನಾ ಪ್ರೀತಿ ಬಗೆಗಿನ ಚಿತ್ರಣವಿದೆ.. 

ಇದನ್ನೂ ಓದಿ-'ಭಾಗ್ಯಲಕ್ಷ್ಮೀ' ಧಾರಾವಾಹಿಯ ಸುಷ್ಮಾ ರಾವ್‌ ಅವರ ಪತಿ ಇವರೇ.. ಕನ್ನಡದ ಖ್ಯಾತ ನಿರ್ದೇಶಕ ಇವರು!

ಇನ್ನು ಭರವಸೆಯ ನಿರ್ದೇಶಕ ತರುಣ್‌ ಸುಧೀರ್‌ ಈ ವಾರ ಕಾಟೇರ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.. ಅದೇ ರೀತಿ ಡಿಸೆಂಬರ್ 16 ರಂದು ಬಹುನಿರೀಕ್ಷಿತ ಚಿತ್ರದ ಟ್ರೈಲರ್‌ ರಿಲೀಸ್‌ ಆಗಲಿದ್ದು.. ಈ ಬಗ್ಗೆ ನಟ ದರ್ಶನ್ ತಮ್ಮ ಸೋಶಿಯಲ್ ಮೀಡಿಯಾಗಳ ಮೂಲಕ ಮಾಹಿತಿ ನೀಡಿದ್ದಾರೆ.. 

ಇದನ್ನೂ ಓದಿ-ಶೂಟಿಂಗ್ ಸೆಟ್’ಗೆ ಬಂದು ಮದುವೆ ಆಗುವಂತೆ ಹಠ ಮಾಡಿದ ಖ್ಯಾತ ಸೀರಿಯಲ್ ನಟಿ: ದಿಕ್ಕುತೋಚದೆ 46ನೇ ವಯಸ್ಸಲ್ಲಿ ತಾಳಿ ಕಟ್ಟಿದ ಹಾಸ್ಯನಟ!

ಸದ್ಯ ಡಿಸೆಂಬರ್ 29 ರಂದು ಬಿಡುಗಡೆಗೆ ಡೇಟ್‌ ಫಿಕ್ಸ್‌ ಆಗಿದ್ದು.. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಭರವಸೆಯ ನಿರ್ದೇಶಕ ತರುಣ್‌ ಸುಧೀರ್‌, ರಾಬರ್ಟ್‌ ಸಿನಿಮಾದ ನಂತರ ಮತ್ತೇ ಕಾಟೇರಾ ಸಿನಿಮಾಗಾಗಿ ಜೊತೆ ಸೇರಿದ್ದಾರೆ.. ಹೀಗಾಗಿ ಈ ಚಿತ್ರ ಇನ್ನು ಹೆಚ್ಚು ಕ್ರೇಜ್‌ ಪಡೆದುಕೊಂಡಿದೆ..  

ಈ ಬಹುನಿರೀಕ್ಷಿತ ಕಾಟೇರ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು.. ತರುಣ್ ಸುಧೀರ್ ಡೈರೆಕ್ಟ್‌ ಮಾಡಿದ್ದಾರೆ.. ಚಿತ್ರದಲ್ಲಿ ಉತ್ತಮ ಪಾತ್ರಗಳನ್ನು ಕ್ರಿಯೆಟ್‌ ಮಾಡಲಾಗಿದೆ ಎನ್ನಲಾಗುತ್ತಿದ್ದು..  ಕುಮಾರ್ ಗೋವಿಂದ್, ಶೃತಿ, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News