"ಆಸ್ಕರ್ ಪ್ರಶಸ್ತಿಗಿಂತ ಜನರ ರೆಸ್ಪಾನ್ಸ್ ನನಗೆ ಹೆಚ್ಚು": ಕಾಟೇರ ಸೆಲೆಬ್ರೆಷನ್‌ನಲ್ಲಿ ದರ್ಶನ್‌ ಮನದಾಳದ ಮಾತು!

Kaatera Success Meet: ಸ್ಯಾಂಡಲ್‌ವುಡ್‌ ನಟ ದರ್ಶನ್‌ ನಟಿಸಿರುವ ಕಾಟೇರ ಚಿತ್ರದ ಸೂಪರ್ ಹಿಟ್ ಆಗಿರುವ ಹಿನ್ನೆಲೆ ಹೊಸ ವರ್ಷದ ದಿನ ಚಿತ್ರತಂಡ ಸಕ್ಸಸ್​ ಮೀಟ್ ಮಾಡಿದ್ದು, ಅಲ್ಲಿ ಚಾಲೆಮಜಿಂಗ್‌ ಸ್ಟಾರ್‌ ಕಾಟೇರ ಸಿನಿಮಾ ಮಾಡಿದ್ದು ಜನರಿಗಾಗಿ, ಯಾವ ಆಸ್ಕರ್ ಅವಾರ್ಡ್‌ಗಿಂತಲೂ ನನಗೆ ಜನರ ಪ್ರತಿಕ್ರಿಯೆ ಹೆಚ್ಚು ಎಂದಿದ್ದಾರೆ.  

Written by - Zee Kannada News Desk | Last Updated : Jan 2, 2024, 10:26 AM IST
  • ಎಲ್ಲೆಡೆ ಕಾಟೇರ ಹೌಸ್​ ಫುಲ್ ಪ್ರದರ್ಶನ ಕಾಣ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ಕಾಟೇರ ಬಾರೀ ಕಲೆಕ್ಷನ್ ಮಾಡುತ್ತಿದ್ದು, ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ದರ್ಶನ್​ ಕೂಡ ಖುಷ್ ಆಗಿದ್ದಾರೆ.
  • ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತರು, ಕಾಟೇರ ಸಿನಿಮಾ ಕಥೆ ತುಂಬಾ ಚೆನ್ನಾಗಿದೆ. ನ್ಯಾಷನಲ್ ಅವಾರ್ಡ್‌ಗೆ ಹೋಗುವಂತಹ ಚಿತ್ರ ಕಾಟೇರ ಎಂಬ ಪ್ರಶ್ನೆಗೆ ದರ್ಶನ್‌ ನನಗೆ ಅವಾರ್ಡ್‌ಗಳ ಮೇಲೆ ಯಾವ ಆಸೆಯೂ ಇಲ್ಲ ಎಂದಿದ್ದಾರೆ.
  • ದರ್ಶನ್‌ ಕಥೆ ಬಗ್ಗೆ ಮಾತನಾಡುತ್ತಿರುವಾಗ, ನಿರ್ದೇಶಕರು ನನಗೆ ಕಥೆ ಹೇಳಿವಾಗ ನಾನು ಚಂದಾಮಾಮನ ರೀತಿ ಕಥೆ ಕೇಳುತ್ತೇನೆ ಎಂದು ಹೇಳಿದ್ದಾರೆ.
"ಆಸ್ಕರ್ ಪ್ರಶಸ್ತಿಗಿಂತ ಜನರ ರೆಸ್ಪಾನ್ಸ್ ನನಗೆ ಹೆಚ್ಚು": ಕಾಟೇರ ಸೆಲೆಬ್ರೆಷನ್‌ನಲ್ಲಿ ದರ್ಶನ್‌ ಮನದಾಳದ ಮಾತು! title=

Darshan In Kaatera Success Meet: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು, ಚಿತ್ರವನ್ನು ಡಿಬಾಸ್‌ ಫ್ಯಾನ್ಸ್ ಮುಗಿಬಿದ್ದು ನೋಡ್ತಿದ್ದಾರೆ. ಎಲ್ಲೆಡೆ ಕಾಟೇರ ಹೌಸ್​ ಫುಲ್ ಪ್ರದರ್ಶನ ಕಾಣ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ಕಾಟೇರ ಬಾರೀ ಕಲೆಕ್ಷನ್ ಮಾಡುತ್ತಿದ್ದು, ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ದರ್ಶನ್​ ಕೂಡ ಖುಷ್ ಆಗಿದ್ದಾರೆ. ಕಾಟೇರ ಸೂಪರ್ ಹಿಟ್ ಆಗಿರುವ ಹಿನ್ನೆಲೆ ಹೊಸ ವರ್ಷದ ದಿನ ಕಾಟೇರ ಚಿತ್ರತಂಡ ಸಕ್ಸಸ್​ ಮೀಟ್ ಮಾಡಿದ್ದು, ಖುಷಿಯನ್ನು ಹಂಚಿಕೊಂಡಿದ್ದಾರೆ.

ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತರು, ಕಾಟೇರ ಸಿನಿಮಾ ಕಥೆ ತುಂಬಾ ಚೆನ್ನಾಗಿದೆ. ನ್ಯಾಷನಲ್ ಅವಾರ್ಡ್‌ಗೆ  ಹೋಗುವಂತಹ ಚಿತ್ರ ಕಾಟೇರ ಎಂಬ ಪ್ರಶ್ನೆಗೆ ದರ್ಶನ್‌ ನನಗೆ ಅವಾರ್ಡ್‌ಗಳ ಮೇಲೆ ಯಾವ ಆಸೆಯೂ ಇಲ್ಲ. ಮನೆ ತುಂಬಾ ಅವಾರ್ಡ್​ ಇಡಬೇಕು ಅಂತಿಲ್ಲ, ನಾನು ಯಾವ ಅವಾರ್ಡ್​ಗಾಗಿ ಸಿನಿಮಾ ಮಾಡೋದಿಲ್ಲ. ಕಾಟೇರ ಸಿನಿಮಾ ಮಾಡಿದ್ದು ಜನರಿಗಾಗಿ. ಕಾಟೇರ ಸಿನಿಮಾ ನೋಡಿದ ಜನರ ರೆಸ್ಪಾನ್ಸ್ ತಿಳಿದುಕೊಳ್ಳಲು ಕಾಯ್ತಿದೆ. ಯಾವ ಆಸ್ಕರ್ ಅವಾರ್ಡ್‌ಗಿಂತಲೂ ನನಗೆ ಜನರ ಪ್ರತಿಕ್ರಿಯೆ ಹೆಚ್ಚು. ನನ್ನ ಸೆಲೆಬ್ರೆಟಿಗಳಿಗಾಗಿ ನಾನು ಸಿನಿಮಾ ಮಾಡ್ತೀನಿ. ನನ್ನ ಸೆಲೆಬ್ರೆಟಿಗಳು ನೋಡಿ ಖುಷಿ ಪಟ್ಟರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ. 

ಇದನ್ನೂ ಓದಿ: "ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಅವಮಾನವಾಗಬಾರದು": ದರ್ಶನ್ ಪಾಲಿಸಿ!

ಇನ್ನೂ ದರ್ಶನ್‌ ಕಥೆ ಬಗ್ಗೆ ಮಾತನಾಡುತ್ತಿರುವಾಗ, ನಿರ್ದೇಶಕರು ನನಗೆ ಕಥೆ ಹೇಳಿವಾಗ ನಾನು ಚಂದಾಮಾಮನ ರೀತಿ ಕಥೆ ಕೇಳುತ್ತೇನೆ. ಒಂದೂರಿನಲ್ಲಿ ಒಬ್ಬ ರಾಜ ಇದ್ದ ಎನ್ನುವಂತೆ. ಕಥೆ ಇಷ್ಟವಾದ್ರೆ ಓಕೆ ಹೇಳ್ತೀನಿ ಎಂದು. ತರುಣ್ ಸುದೀರ್ ಈ ಕಥೆಗೆ ಜೀವ ತುಂಬಿದ್ದಾರೆ. ನಮ್ಮ ಸಮಾಜದಲ್ಲಿ ನಡೆಯೋ ಕಥೆನೆ ಇದು. ಅವಾರ್ಡ್​ ಗಿವಾಡು ನಮಗೆ ಗೊತ್ತಿಲ್ಲ. ನಿರ್ದೇಶಕರು ನನಗೆ ಸೀನ್ ಹೇಳ್ತಾರೆ ನಾನು ಆ್ಯಕ್ಟನ್ ಮಾಡ್ತೀನಿ ಎಂದ್ರು. ಯಾವಾಗಲೂ ದರ್ಶನ್ ಸಿನಿಮಾ ಎನ್ನುವ ಹೆಸರು ಇರ್ತಿತ್ತು. ಈಗ ಕಥೆಯೇ ಇಲ್ಲಿ ಸೂಪರ್ ಸ್ಟಾರ್ ಆಗಿದೆ. ಇದಕ್ಕೆ ನೀವು ಏನ್ ಹೇಳ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ದರ್ಶನ್​, ಇಲ್ಲಿ ಯಾರು ದೊಡ್ಡವರಲ್ಲ ಸಿನಿಮಾನೇ ದೊಡ್ಡದು ಎಂದಿದ್ದಾರೆ.

ಹಾಗೆ ದರ್ಶನ್‌ ಇನ್ನಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಾ ಹೆಣ್ಣನ್ನು ಕಡೆಯಾಗುವ ಕಾಣುವ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳೋದಿಲ್ಲ. ಕನ್ನಡವನ್ನು ಕೇವಲವಾಗಿ ಕಾಣಬಾರದು, ನಿರ್ಮಾಪಕರಿಗೆ ಒಳ್ಳೆಯದಾಗ್ಬೇಕು ಅಂತ ಸಿನಿಮಾಗಳನ್ನು ಮಾತ್ರ ನಾನು ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ನಿನ್ನೆ ನಡೆದ ಕಾಟೇರ ಸಕ್ಸಸ್​ ಮೀಟ್‌ನಲ್ಲಿ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​​, ದರ್ಶನ್‌ಗೆ  ಮಾತನಾಡಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗ್ಬೇಕು ಅನ್ನೋ ಆಸೆಯೆಲ್ಲಾ ಇಲ್ಲ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News