ಜಗದೀಶ್‌, ರಂಜಿತ್‌ ಹೊರಬಿದ್ದ ಬೆನ್ನಲ್ಲೇ ಮತ್ತೋರ್ವ ಸ್ಪರ್ಧಿ ಎಲಿಮಿನೇಟ್:‌ "ಬಿಗ್‌ಬಾಸ್‌ಗಿಂತ ನನ್ಗೆ ಅದೇ ಮುಖ್ಯ..." ಎನ್ನುತ್ತಾ ಅರ್ಧಕ್ಕೆ ಹೊರಬಂದ ಟಾಪ್‌ 4ರ ಪಟ್ಟಿಯಲ್ಲಿದ್ದ ಕಂಟೆಸ್ಟೆಂಟ್! ‌

Bigg Boss Elimination: ಮತ್ತೋರ್ವ ಸ್ಪರ್ಧಿ, ಅದರಲ್ಲೂ ಆತ ಟಾಪ್‌ 4ರಲ್ಲಿ ಸ್ಥಾನ ಪಡೆದಿದ್ದಾತ... ತಮ್ಮ ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ದೊಡ್ಮನೆಗೆ ಗುಡ್‌ ಬೈ ಹೇಳಿದ್ದಾರೆ.

Written by - Bhavishya Shetty | Last Updated : Oct 21, 2024, 02:40 PM IST
    • ಕಳೆದ ವಾರ ಕನ್ನಡ ಬಿಗ್‌ ಬಾಸ್‌ನಲ್ಲಿ ಗಲಿಬಿಲಿ ವಾತಾವರಣ ಕಂಡುಬಂದಿತ್ತು
    • ಜಗದೀಶ್‌ ಮತ್ತು ರಂಜಿತ್‌ ಅವರನ್ನು ದೊಡ್ಮನೆಯಿಂದ ಬಿಗ್‌ಬಾಸ್‌ ಹೊರ ಕಳುಹಿಸಿದ್ದರು.
    • ಇದೀಗ ಮತ್ತೋರ್ವ ಸ್ಪರ್ಧಿ, ಅದರಲ್ಲೂ ಆತ ಟಾಪ್‌ 4ರಲ್ಲಿ ಸ್ಥಾನ ಪಡೆದಿದ್ದಾತ
ಜಗದೀಶ್‌, ರಂಜಿತ್‌ ಹೊರಬಿದ್ದ ಬೆನ್ನಲ್ಲೇ ಮತ್ತೋರ್ವ ಸ್ಪರ್ಧಿ ಎಲಿಮಿನೇಟ್:‌ "ಬಿಗ್‌ಬಾಸ್‌ಗಿಂತ ನನ್ಗೆ ಅದೇ ಮುಖ್ಯ..." ಎನ್ನುತ್ತಾ ಅರ್ಧಕ್ಕೆ ಹೊರಬಂದ ಟಾಪ್‌ 4ರ ಪಟ್ಟಿಯಲ್ಲಿದ್ದ ಕಂಟೆಸ್ಟೆಂಟ್! ‌ title=
Bigg Boss Elimination

Bigg Boss Elimination: ಕಳೆದ ವಾರ ಕನ್ನಡ ಬಿಗ್‌ ಬಾಸ್‌ನಲ್ಲಿ ಗಲಿಬಿಲಿ ವಾತಾವರಣ ಕಂಡುಬಂದಿತ್ತು. ಇಡೀ ಮನೆಗೆ ಮನೆಯೇ ಸ್ಪರ್ಧಿ ಲಾಯರ್‌ ಜಗದೀಶ್‌ ವಿರುದ್ಧ ತಿರುಗಿಬಿದ್ದಿದ್ದಲ್ಲದೆ, ಕೈಕೈ ಮಿಲಾಯಿಸುವವರೆಗೆ ಪರಿಸ್ಥಿತಿ ಮುಂದುವರೆದಿತ್ತು. ಬಿಗ್‌ ಬಾಸ್‌ ಮಧ್ಯ ಪ್ರವೇಶ ಮಾಡಿದ್ದರೂ ಸಹ ಸ್ಪರ್ಧಿಗಳ ನಡುವಿನ ಕೋಪ, ಪ್ರಲಾಪ ಕಡಿಮೆ ಆಗಿರಲಿಲ್ಲ. ಕಡೆಗೆ ಗಲಾಟೆಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ಜಗದೀಶ್‌ ಮತ್ತು ರಂಜಿತ್‌ ಅವರನ್ನು ದೊಡ್ಮನೆಯಿಂದ ಬಿಗ್‌ಬಾಸ್‌ ಹೊರ ಕಳುಹಿಸಿದ್ದರು.

ಇದನ್ನೂ ಓದಿ: ಕ್ರಿಕೆಟ್‌ ಲೋಕವೇ ಮೆಚ್ಚಿದ ಆಟಗಾರ ವಿರಾಟ್ ಕೊಹ್ಲಿ...‌ ಆದ್ರೆ ವಿರಾಟ್‌ʼಗೆ ಈ ಕ್ರಿಕೆಟರ್ ಅಂದ್ರೆ ಪಂಚ್ರಪ್ರಾಣ! ʼಆʼ ಕ್ರಿಕೆಟರ್ ಯಾರು ಗೊತ್ತಾ?

ಇದೀಗ ಮತ್ತೋರ್ವ ಸ್ಪರ್ಧಿ, ಅದರಲ್ಲೂ ಆತ ಟಾಪ್‌ 4ರಲ್ಲಿ ಸ್ಥಾನ ಪಡೆದಿದ್ದಾತ... ತಮ್ಮ ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ದೊಡ್ಮನೆಗೆ ಗುಡ್‌ ಬೈ ಹೇಳಿದ್ದಾರೆ. ಅಷ್ಟಕ್ಕೂ ಆತ ಕನ್ನಡ ಬಿಗ್‌ ಬಾಸ್‌ ಮನೆ ಸ್ಪರ್ಧಿ ಅಲ್ಲ. ಬದಲಾಗಿ ತೆಲುಗು ಸೀಸನ್‌ನಲ್ಲಿ ಪಾಲ್ಗೊಂಡಿದ್ದ ಪ್ರಮುಖ ಸ್ಪರ್ಧಿ ನಾಗ ಮಣಿಕಂಠ.

7ನೇ ವಾರದ ನಾಮಿನೇಷನ್‌ ಸಂದರ್ಭದಲ್ಲಿ ನಾಗ ಮಣಿಕಂಠ ಅವರಿಗೆ ಭರ್ಜರಿ ಮತಗಳು ಬಂದಿದ್ದವು. ಇನ್ನು ಪ್ರೇಕ್ಷಕರ ನಿರ್ಧಾರವನ್ನು ಗಣನೆಗೆ ತೆಗೆದುಕೊಂಡರೆ ಗೌತಮ್ ಎಂಬವರು ಎಲಿಮಿನೇಟ್ ಆಗಬೇಕಿತ್ತು. ಆದರೆ ಕಳೆದ ಎರಡು ದಿನಗಳಿಂದ ನಾಗ ಮಣಿಕಂಠ ಅವರ ಆರೋಗ್ಯ ಸರಿಯಿಲ್ಲ. "ನನ್ನಿಂದಾಗಲ್ಲ. ನಾನು ಮನೆ ಬಿಟ್ಟು ಹೋಗುತ್ತೇನೆ" ಎಂದು ಹೇಳಿದ್ದರು. ಹೀಗಾಗಿ ಹೋಸ್ಟ್‌ ನಾಗಾರ್ಜುನ, ಮಣಿಕಂಠ ಅವರನ್ನು ಮನೆಯಿಂದ ಹೊರಕಳುಹಿಸಿದ್ದಾರೆ.

ಭಾನುವಾರ ಅಂದರೆ ಅಕ್ಟೋಬರ್ 20ರಂದು ನಡೆದ ಸಂಚಿಕೆಯಲ್ಲಿ ನಾಗ ಮಣಿಕಂಠ ಮತ್ತು ಗೌತಮ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯಲ್ಲಿದ್ದರು. ಈ ಬಳಿಕ ಹೊರಬಂದ ನಾಗ ಮಣಿಕಂಠ ಜೊತೆ ನಾಗಾರ್ಜುನ ಮಾತನಾಡಿ, "ಗೌತಮನಿಗೆ ಕಡಿಮೆ ಮತಗಳು ಬಂದಿವೆ. ಆದರೆ ನೀವು ಹೊರಗೆ ಹೆಜ್ಜೆ ಹಾಕಿದ್ದೀರಿ. ಹಾಗಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ: ಕಬ್ಬು ಮತ್ತು ಜೋಳದ ರಸದಿಂದ ಚಲಿಸುವ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ Honda!ಇನ್ನು ಪೆಟ್ರೋಲ್ ಮೇಲೆ ನಿರ್ಬರ ಬೇಕಿಲ್ಲ 

ನಾಗಮಣಿಕಂಠ ವೇದಿಕೆಗೆ ಬಂದಾಗ ನಾಗಾರ್ಜುನ ಅವರು, ನಿಮಗೆ ಮತ ಹಾಕಿದವರಿಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, 'ನನಗೆ ಮತ ಹಾಕಿದ ಎಲ್ಲರಿಗೂ ಕ್ಷಮೆ ಇರಲಿ. ನಾನು ಹೇಗಾದರೂ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ. ನನ್ನ ಆರೋಗ್ಯ ನನಗೆ ಮುಖ್ಯ. ಆರೋಗ್ಯವೇ ವರದಾನ. ಲಕ್ಷ್ಮಿ ದೇವಿಗಿಂತ ಆರೋಗ್ಯ ಮುಖ್ಯ. ನನಗೆ ಅದೇ ಬೇಕಿರೋದು. ಅದಕ್ಕೇ ನಾನು ಹೊರಗೆ ಬಂದೆ" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News