ಫ್ಯಾಂಟಸಿ‌ ʻಡಿಂಕುʼ ಸಿನಿಮಾ ಸದ್ಯದಲ್ಲೇ ಬಿಡುಗಡೆ

Dinku movie: ನೆಲ ನರೆಂದ್ರಬಾಬು ಅವರ ಸಹೋದರನೂ ಆದ ನೆಲ ಮಹೇಶ್ ಈಗಾಗಲೇ ಠಪೋರಿ, ಶಿವಾನಿ ಸೇರಿದಂತೆ  10-12 ಚಿತ್ರಗಳನ್ನು ನಿರ್ಮಿಸಿದ್ದು, ಸೀರಿಯಲ್ ಗಳನ್ನು ಸಹ  ಮಾಡಿದ್ದಾರೆ.

Written by - YASHODHA POOJARI | Last Updated : Sep 4, 2024, 10:09 AM IST
  • ಸಸ್ಪೆನ್ಸ್, ಫ್ಯಾಂಟಸಿ ಜಾನರ್ ಇರುವ ಚಿತ್ರ
  • ರಾಜೇಶ್ ಮೂರ್ತಿ ಅವರ ನಿರ್ದೇಶನದ ಸಿನಿಮಾ
  • ಶೀಘ್ರದಲ್ಲೇ ತೆರೆಗೆ ಬರಲಿದೆ ಡಿಂಕು ಸಿನಿಮಾ
ಫ್ಯಾಂಟಸಿ‌ ʻಡಿಂಕುʼ ಸಿನಿಮಾ ಸದ್ಯದಲ್ಲೇ ಬಿಡುಗಡೆ title=

Dinku movie: ನೆಲ ಮಹೇಶ್ ನೇವಿ ಮಂಜು ಫಿಲಂಸ್ ಬ್ಯಾನರ್ ಅಡಿ, ನೆಲ ಮಹೇಶ್ ಹಾಗೂ ನೇವಿ ಮಂಜು ಅವರು ನಿರ್ಮಿಸುತ್ತಿರುವ ಚಿತ್ರ ಡಿಂಕು. ನೆಲ ನರೆಂದ್ರಬಾಬು ಅವರ ಸಹೋದರನೂ ಆದ ನೆಲ ಮಹೇಶ್ ಈಗಾಗಲೇ ಠಪೋರಿ, ಶಿವಾನಿ ಸೇರಿದಂತೆ  10-12 ಚಿತ್ರಗಳನ್ನು ನಿರ್ಮಿಸಿದ್ದು, ಸೀರಿಯಲ್ ಗಳನ್ನು ಸಹ  ಮಾಡಿದ್ದಾರೆ. ನೇವಿ ಮಂಜು ಸಹ ಅರಳಿದ ಹೂಗಳು, ಜಿಗ್ರಿ ದೋಸ್ತ್ ಸೇರಿ 3  ಚಿತ್ರಗಳನ್ನು ನಿರ್ಮಿಸಿದ್ದು, ಇದು ಅವರ 4ನೇ ಚಿತ್ರ.

ವಿಭಿನ್ನ ಜಾನರ್  ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ರಾಜೇಶ್ ಮೂರ್ತಿ ಅವರ ನಿರ್ದೇಶನದ ಸಸ್ಪೆನ್ಸ್, ಫ್ಯಾಂಟಸಿ ಜಾನರ್  ಚಿತ್ರವಿದು.  ಡಿಂಕು ಅವರ ನಿರ್ದೇಶನದ ಹತ್ತನೇ ಚಿತ್ರ. ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವಾ ಈ ಚಿತ್ರದ ನಾಯಕನಾಗಿ ನಟಿಸಿದ್ದು,  ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡಾ ರಚಿಸಿದ್ದಾರೆ. 

ಪಪ್ಪೆಟ್ ಷೋ ನಡೆಸುವ ಯುವತಿ ಹಾಗೂ ಆಕೆಯ ಗೊಂಬೆ ಡಿಂಕು  ಸುತ್ತ ನಡೆಯುವ ಘಟನೆಗಳೇ ಈ ಚಿತ್ರದ  ಕಾನ್ಸೆಪ್ಟ್. ಅಗ್ನಿಲೋಕ್ ನಂತರ ಯಶಸ್ವಾ ನಟನೆಯ ಎರಡನೇ ಚಿತ್ರವಿದು. ಅಲ್ಲದೆ ಯುವನಟಿ ಸನ್ನಿಧಿ ಚಿತ್ರದ  ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತ ತಲುಪಿದ್ದು, ಫೈನಲ್ ಮಿಕ್ಸಿಂಗ್ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಸೆನ್ಸಾರ್ ಮನೆಗೆ ಹೋಗಲು ಚಿತ್ರ ಸಿದ್ದವಾಗಲಿದೆ.

ಇದನ್ನೂ ಓದಿ: ಸಮಂತಾ 10 ನೇ ತರಗತಿಯ ಅಂಕಪಟ್ಟಿ ವೈರಲ್‌! ನಟಿ SSLC ಅಲ್ಲಿ ಪಡೆದ ಅಂಕ ಎಷ್ಟು ಗೊತ್ತಾ?

ಚಿತ್ರದಲ್ಲಿ ಡಿಂಕು ಹೆಸರಿನ ಗೊಂಬೆ ಮಾತಾಡುತ್ತದೆ. ಸಸ್ಪೆನ್ಸ್  ಜೊತೆಗೆ ಕಾಮಿಡಿ ಅಂಶಗಳನ್ನು ಡಿಂಕು ಚಿತ್ರ  ಒಳಗೊಂಡಿದೆ. ಡಿಂಕು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು,  ಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್  ಕೊನೆಯ ಹಂತದಲ್ಲಿದೆ. 

ಕನ್ನಡದ ಹಿರಿಯ ನಿರ್ಮಾಪಕ ಹಾಗೂ  ಛಾಯಾಗ್ರಾಹಕರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗನೂ ಆದ ಯಶಸ್ವಾ ಅವರು ಈಗಾಗಲೇ ಅಗ್ನಿಲೋಕ ಎಂಬ ಚಿತ್ರದಲ್ಲಿ ನಟಿಸೋ  ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.  ಡಿಂಕು  ಅವರ ಅಭಿನಯದ ಎರಡನೇ ಚಿತ್ರ. ಇನ್ನು ಈ ಚಿತ್ರದಲ್ಲಿ 4 ಫೈಟ್ಸ್ ಇದ್ದು ಗಿರೀಶ್ ಎ.ಪಿ. ಅವರು  ಕಂಪೋಜ್ ಮಾಡುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ‌. 

ಸೆನ್ಸಾರ್ ಮುಗಿದ ಕೂಡಲೇ ಚಿತ್ರವನ್ನು ರಿಲೀಸ್ ಮಾಡೋ ಯೋಚನೆಯಿದೆ ಎಂದು ನಿರ್ಮಾಪಕರಾದ ನೆಲ ಮಹೇಶ್ ಹಾಗೂ ನೇವಿ ಮಂಜು ಅವರುಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಫಸ್ಟ್‌ ಟೈಮ್‌ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್‌... ಎಂದ ಫ್ಯಾನ್ಸ್‌... ಫೊಟೋಸ್‌ ಇಲ್ಲಿವೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News