Keerthy Suresh: "ಅವರನ್ನು ಬಿಟ್ಟು ಯಾರಿಗೂ ಲಿಪ್ ಲಾಕ್ ಮಾಡಲ್ಲ" ಎಂದ ಕೀರ್ತಿ ಸುರೇಶ್!?

Keerthy Suresh: ಇತ್ತೀಚೆಗೆ ತಮಿಳು ಚಿತ್ರವೊಂದಕ್ಕೆ ನಿರ್ದೇಶಕರು ಕೀರ್ತಿ ಸುರೇಶ್‌ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದರೆ ಲಿಪ್‌ಲಾಕ್‌ ದೃಶ್ಯದ ಬೇಡಿಕೆಯಿತ್ತು. ದೀರ್ಘಕಾಲದ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿ ಪ್ರಾಜೆಕ್ಟ್‌ಗೆ ಕೀರ್ತಿ ನೋ ಹೇಳಿದರು ಎಂದು ಹೇಳಲಾಗ್ತಿದೆ.  

Written by - Chetana Devarmani | Last Updated : Jun 24, 2023, 03:01 PM IST
  • ಕೀರ್ತಿ ಸುರೇಶ್ ಕೈಯಲ್ಲಿ ಪ್ರಸ್ತುತ ಹಲವು ಕ್ರೇಜಿ ಪ್ರಾಜೆಕ್ಟ್‌ಗಳಿವೆ
  • ತಮಿಳು ಚಿತ್ರವೊಂದಕ್ಕೆ ಆಯ್ಕೆ ಆಗಿದ್ದ ನಟಿ ಕೀರ್ತಿ ಸುರೇಶ್‌
  • ಲಿಪ್‌ಲಾಕ್‌ ದೃಶ್ಯದ ಬೇಡಿಕೆಯಿದ್ದ ಕಾರಣ ನೋ ಎಂದ ಕೀರ್ತಿ
Keerthy Suresh: "ಅವರನ್ನು ಬಿಟ್ಟು ಯಾರಿಗೂ ಲಿಪ್ ಲಾಕ್ ಮಾಡಲ್ಲ" ಎಂದ ಕೀರ್ತಿ ಸುರೇಶ್!?  title=
Keerthy Suresh

Keerthy Suresh: ಇತ್ತೀಚೆಗೆ ನಾನಿ ಜೊತೆಗೆ ದಸರಾದಲ್ಲಿ ಕಾಣಿಸಿಕೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್, ಮೆಹರ್ ರಮೇಶ್ ನಿರ್ದೇಶನದ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ಮೆಗಾಸ್ಟಾರ್ ಅವರ ಸಹೋದರಿಯಾಗಿ ನಟಿಸಿದ್ದಾರೆ.

ಇತ್ತೀಚೆಗೆ ತಮಿಳು ನಿರ್ದೇಶಕರೊಬ್ಬರು ಕೀರ್ತಿ ಸುರೇಶ್‌ ಅವರಿಗೆ ಕಥೆಯನ್ನು ಹೇಳಿದ್ದರು. ಈ ಚಿತ್ರದಲ್ಲಿ ಲಿಪ್‌ಲಾಕ್‌ ದೃಶ್ಯದ ಬೇಡಿಕೆಯಿತ್ತು. ಕೀರ್ತಿ ಸುರೇಶ್‌ ಅವರು ದೀರ್ಘಕಾಲದ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿ ಪ್ರಾಜೆಕ್ಟ್‌ಗೆ ನೋ ಹೇಳಿದರು ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: Kiccha sudeep : ʼನನ್ನ ಸಿನಿಮಾದ ಟೀಸರ್‌ ರೆಡಿ ಇದೆ..ಆದರೆ ನನ್ನ ಅಳಿಯನ ಚೊಚ್ಚಲ ಸಿನಿಮಾ ಟೀಸರ್‌ಗಾಗಿ ಕಾಯುತ್ತಿದ್ದೇವೆʼ

ಕೀರ್ತಿ ಸುರೇಶ್ ಕೈಯಲ್ಲಿ ಪ್ರಸ್ತುತ ಹಲವು ಕ್ರೇಜಿ ಪ್ರಾಜೆಕ್ಟ್‌ಗಳಿವೆ. ಆದರೆ ಮೊದಲಿನಿಂದಲೂ ಕೀರ್ತಿ ಹೋಮ್ಲಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಬಗ್ಗೆ ಮತ್ತೊಮ್ಮೆ ಕೀರ್ತಿ ಪ್ರತಿಕ್ರಿಯಿಸಿದ್ದಾರೆ. ನನ್ನ ಪತಿಯನ್ನು ಬಿಟ್ಟು ಯಾರಿಗೂ ಲಿಪ್ ಲಾಕ್ ಕೊಡುವುದಿಲ್ಲ ಎಂದು ಕೀರ್ತಿ ಹೇಳಿದ್ದಾರೆ ಎನ್ನಲಾಗ್ತಿದೆ.

ಚಲನಚಿತ್ರ ನಿರ್ಮಾಪಕ ಜಿ. ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಜಿ. ಸುರೇಶ್ ಅವರ ಮಗಳಾಗಿ 17 ಅಕ್ಟೋಬರ್ 1992 ರಂದು ಕೀರ್ತಿ ಸುರೇಶ್‌ ಮದ್ರಾಸ್‌ನಲ್ಲಿ ಜನಿಸಿದರು. ಬಾಲನಟಿಯಾಗಿ ಚಿತ್ರರಂಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಫ್ಯಾಶನ್ ಡಿಸೈನ್ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಚಿತ್ರೋದ್ಯಮಕ್ಕೆ ಕಾಲಿಟ್ಟರು. 

ಇದನ್ನೂ ಓದಿ: Suhana Khan: ಕೃಷಿಯತ್ತ ಶಾರುಖ್‌ ಪುತ್ರಿ.. ಕೃಷಿ ಭೂಮಿ ಖರೀದಿಸಿದ ಸುಹಾನಾ ಖಾನ್

2013 ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿನ ಪಾತ್ರಕ್ಕಾಗಿ ಕೀರ್ತಿ ಸುರೇಶ್‌ ಅತ್ಯುತ್ತಮ ಮಹಿಳಾ SIIMA ಪ್ರಶಸ್ತಿಯನ್ನು ಮೊದಲ ಬಾರಿ ಗೆದ್ದರು. 2014 ರಲ್ಲಿ ಕೀರ್ತಿ ಸುರೇಶ್‌ "ರಿಂಗ್ ಮಾಸ್ಟರ್" ಚಿತ್ರದಲ್ಲಿ ದಿಲೀಪ್ ಜೊತೆ ನಟಿಸಿದರು. ಚಲನಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಆ ಬಳಿಕ ಅವರು ತಮಿಳು ಚಿತ್ರಗಳಿಗೆ ಸಹಿ ಹಾಕಲು ಪ್ರಾರಂಭಿಸಿದರು. ಉದ್ಯಮದಲ್ಲಿ ತಮಿಳು ಚಿತ್ರಗಳಲ್ಲಿ ಅವರ ಮೊದಲ ಬಿಡುಗಡೆ ಇದು ಎನ್ನ ಮಾಯಂ (2015). ಇದು ಎ.ಎಲ್.ವಿಜಯ್ ಅವರ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಅಲ್ಲಿ ಅವರು ವಿಕ್ರಮ್ ಪ್ರಭು ಅವರೊಂದಿಗೆ ನಟಿಸಿದ್ದಾರೆ. 2015 ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News