Darshan Arrest Live Updates: ವಿಚಾರಣೆಗೆ ಹಾಜರಾಗುವಂತೆ ನಟ ಚಿಕ್ಕಣ್ಣನಿಗೆ ನೋಟಿಸ್

Darshan Arrest Live Updates: ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ A2 ಆಗಿರುವ ದರ್ಶನ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. 

Written by - Chetana Devarmani | Last Updated : Jun 17, 2024, 06:25 PM IST
Darshan Arrest Live Updates: ವಿಚಾರಣೆಗೆ ಹಾಜರಾಗುವಂತೆ ನಟ ಚಿಕ್ಕಣ್ಣನಿಗೆ ನೋಟಿಸ್
Live Blog

Darshan Arrest Live Updates: ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ A2 ಆಗಿರುವ ದರ್ಶನ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಪೊಲೀಸರು ಘಟನಾ ಸ್ಥಳ ಸೇರಿದಂತೆ ಪವಿತ್ರಾ ಗೌಡ ಮನೆಯಲ್ಲೂ ಪರಿಶೀಲನೆ ನಡೆಸಿದ್ದಾರೆ. ದರ್ಶನ್‌ ಬಂಧನದ ಬಗ್ಗೆ ಅನೇಕ ಸಿನಿ ಇಂಡಸ್ಟ್ರಿಯ ಸೆಲೆಬ್ರಿಟಿಗಳು ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿರಂಗದಿಂದ ದರ್ಶನ್​ ಬ್ಯಾನ್​ ಆಗಬೇಕು ಎಂಬ ಒತ್ತಾಯ ಕೂಡ ಹೆಚ್ಚಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

17 June, 2024

  • 18:20 PM

    ಚಿಕ್ಕಣ್ಣನನ್ನ ವಿಟ್ನೆಸ್ ಸ್ಟೇಟ್ ಮಾಡಿಕೊಂಡಿರುವ ಪೊಲೀಸರು..ಊಟ ಮಾಡು ಬಾ ಅಂತ ಚಿಕ್ಕಣ್ಣನನ್ನ ಕರೆಸಿದ್ದ ದರ್ಶನ್, ಸಂಜೆ 4:30 ರ ವರೆಗೆ ಸ್ಟೋನಿ ಬ್ರೂಕ್ ಕೆಫೆಯಲ್ಲಿದ್ದ ದರ್ಶನ್ ಟೀಂ..ನಂತರ ಕೆಫೆಯಿಂದ ತನ್ನ ಮನೆಗೆ ತೆರಳಿದ್ದ ದರ್ಶನ್.. ಹೀಗಾಗಿ ಚಿಕ್ಕಣ್ಣನನ್ನು ಸಾಕ್ಷಿ ಮಾಡಿರೊ ಪೊಲೀಸರು‌.

    ನಟ ದರ್ಶನ್‌ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿ ಕೇಸ್‌ನಲ್ಲಿ ಪೋಲಿಸರ ಅತಿಥಿಯಾಗಿದ್ದಾರೆ.. ತನಿಖೆ ವೇಳೆ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ.. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಚಿಕ್ಕಣ್ಣಗೆ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.. 

     

  • 15:01 PM

    Darshan Arrest Live:  ಹತ್ಯೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌

    ಕಳೆದೊಂದು ವಾರದಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌ ಆಗಿರುವುದು, ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪರಭಾಷಾ ಕಲಾವಿದರು ಕೂಡ ಮಾತನಾಡುತ್ತಿದ್ದಾರೆ.

  • 12:41 PM

    Vijayalakshmi Darshan: ಮತ್ತೇ ಇನ್ಸ್ಟಾಗ್ರಾಮ್ ಖಾತೆ ಓಪನ್ ಮಾಡಿದ ದರ್ಶನ್ ಪತ್ನಿ 

    ವಿಜಿ ದರ್ಶನ್ ಅನ್ನೋ ಅಕೌಂಟ್  ಡಿಆಕ್ಟಿವ್ ಮಾಡಿದ್ದರು. ಇದೀಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೆ ಆಕ್ಟೀವ್‌ ಆಗಿದ್ದಾರೆ

  • 10:52 AM

    Darshan Live Updates: ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ವಿಚಾರಣೆ ಲೈವ್ ಸ್ಟ್ರೀಮಿಂಗ್ ಆಗಬೇಕು 

    ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ವಿಚಾರಣೆ ಲೈವ್ ಸ್ಟ್ರೀಮಿಂಗ್ ಆಗಬೇಕು. ವಿಚಾರಣೆಯ ವಿಡಿಯೋ ದಾಖಲೆಗಳು ಹಾಗೂ ಸಾಕ್ಷಿಗಳ ಎಲ್ಲಾ ವಿವರಗಳನ್ನ ಸಂಬಂಧ ಪಟ್ಟ ವ್ಯಕ್ತಿಗಳ ಕುಟುಂಬಗಳ ಜೊತೆ ಹಂಚಿಕೊಳ್ಳಬೇಕು. ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರಕ್ಕೆ ತೆರೆ ಎಳೆದಂತಾಗುತ್ತದೆ. ಇದರಿಂದ ರೇಣುಕಾಸ್ವಾಮಿ ಕುಟುಂಬ, ಜನರಿಗೆ, ಮಾಧ್ಯಮಗಳಿಗೆ ಹಾಗೂ ದರ್ಶನ್ ಅಭಿಮಾನಿಗಳಿಗೆ ಗೊಂದಲ ಇರೋದಿಲ್ಲ. ಪೊಲೀಸ್ ಹಾಗೂ TV ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಲಿದೆ. ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಬರಲಿದೆ ಎಂದು ನಟ ಉಪೇಂದ್ರ ಪೋಸ್ಟ್‌ ಮಾಡಿದ್ದಾರೆ.

  • 08:58 AM

    Kiccha Sudeep On Darshan Ban: ಯಾರನ್ನೂ ಬ್ಯಾನ್​ ಮಾಡೋಕೆ ಆಗಲ್ಲ

    ನಾವ್ಯಾರೂ ಕಾನೂನು ಅಲ್ಲ. ಯಾರನ್ನೂ ಬ್ಯಾನ್​ ಮಾಡೋಕೆ ಆಗಲ್ಲ. ಈ ಕೇಸ್‌ನಿಂದ ಹೊರಗಡೆ ಬಂದರೆ ಬ್ಯಾನ್ ಮಾತೇ ಬರಲ್ಲ. ಇಲ್ಲಿ ಬ್ಯಾನ್​ ಎಂಬುದು ಮುಖ್ಯವಲ್ಲ. ನ್ಯಾಯ ಸಿಗಬೇಕು ಎಂಬುದು ಮುಖ್ಯ ಎಂದು ಕಿಚ್ಚ ಸುದೀಪ ಹೇಳಿದ್ದಾರೆ. 

Trending News