Mamata Mohandas: ನಯನತಾರಾ ಬೆದರಿಕೆ ಹಾಕಿ ಆ ಅವಕಾಶ ಕಿತ್ತುಕೊಂಡ್ರು - ‘ಗೂಳಿ’ ನಟಿ ಮಮತಾ ಮೋಹನ್‌ದಾಸ್‌

Mamata Mohandas on Nayantara : ಕನ್ನಡದ ಗೂಳಿ ಸಿನಿಮಾದಲ್ಲಿ ನಟಿಸಿರುವ ನಾಯಕಿ ಮಮತಾ ಮೋಹನ್‌ದಾಸ್‌, ನಯನತಾರಾ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಸಿನಿಮಾದಲ್ಲಿ ಸಿಕ್ಕ ಅವಕಾಶವನ್ನು, ನಯನತಾರಾ ಬೆದರಿಕೆ ಹಾಕಿ ಕಸಿದುಕೊಂಡರು ಎಂದು ಹೇಳಿದ್ದಾರೆ.

Written by - Chetana Devarmani | Last Updated : Apr 21, 2023, 07:41 AM IST
  • ನಯನತಾರಾ ಬೆದರಿಕೆ ಹಾಕಿ ಆ ಅವಕಾಶ ಕಿತ್ತುಕೊಂಡ್ರು
  • ನಟಿ ಮಮತಾ ಮೋಹನ್‌ದಾಸ್‌ ಆರೋಪ
  • ಕನ್ನಡದ ಗೂಳಿ ಸಿನಿಮಾದ ನಟಿ
Mamata Mohandas: ನಯನತಾರಾ ಬೆದರಿಕೆ ಹಾಕಿ ಆ ಅವಕಾಶ ಕಿತ್ತುಕೊಂಡ್ರು - ‘ಗೂಳಿ’ ನಟಿ ಮಮತಾ ಮೋಹನ್‌ದಾಸ್‌  title=
Mamata Mohandas - Nayantara

Mamta Mohandas : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಇಷ್ಟಪಡುವ ಪ್ರತೊಯೊಬ್ಬರಿಗೂ ಕುಸೇಲನ್ ಸಿನಿಮಾ ಬಗ್ಗೆ ಗೊತ್ತೇ ಇರುತ್ತದೆ. ಪಿ ವಾಸು ನಿರ್ದೇಶನದ ಈ ಸಿನಿಮಾವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟೀಕಿಸಿದ್ದರು. ರಜನಿಕಾಂತ್ ಈ ಚಿತ್ರದಲ್ಲಿ ನಟಿಸಲೇ ಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದರು. 1 ಆಗಸ್ಟ್ 2008 ರಂದು ಕುಸೇಲನ್ ಸಿನಿಮಾ ಬಿಡುಗಡೆಯಾಯಿತು. ಕೆಲವು ತಿಂಗಳ ಹಿಂದೆ ಯುಟ್ಯೂಬ್ ಚಾನೆಲ್‌ನಲ್ಲಿ ನಟಿ ಮಮತಾ ಮೋಹನ್‌ದಾಸ್ ಅವರೊಂದಿಗಿನ ಸಂದರ್ಶನದಲ್ಲಿ ಮತ್ತೊಮ್ಮೆ ಈ ಕುಸೇಲನ್ ಸಿನಿಮಾ ಪ್ರಸ್ತಾಪವಾಗಿದೆ. 

ನಟಿಯ ಹೇಳಿಕೆಯ ಪ್ರಕಾರ, ಕುಸೇಲನ್‌ ಸಿನಿಮಾದಲ್ಲಿ ರಜನಿಕಾಂತ್ ಅವರೊಂದಿಗೆ ಓಂ ಜರಾರೆ ಹಾಡಿನಲ್ಲಿ ನಟಿಸಲು ಮಮತಾ ಮೋಹನ್‌ದಾಸ್  ಅವರಿಗೆ ಅವಕಾಶ ಸಿಕ್ಕಿತು. ಹಾಡಿನ ಶೂಟಿಂಗ್ ಒಂದೆರಡು ದಿನಗಳ ಕಾಲ ನಡೆಯಿತು, ಆದರೆ ಈ ಹಾಡನ್ನು ಚಿತ್ರದಿಂದ ಎಡಿಟ್ ಮಾಡಲಾಗಿದೆ. ಇದನ್ನು ತಿಳಿದು ಮಮತಾ ಅವರಿಗೆ ಶಾಕ್‌ ಆಗಿತ್ತಂತೆ. ಆದರೆ ಅದು ಆ ಚಿತ್ರದ ನಾಯಕಿ (ನಯನತಾರಾ) ಇದಕ್ಕೆಲ್ಲ ಕಾರಣ ಎಂದು ನಂತರದಲ್ಲಿ ತಿಳಿಯಿತಂತೆ. ಇದನ್ನು ಮಮತಾ ಮೋಹನ್‌ದಾಸ್‌ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಪಟಾಕಿ ಪೋರಿ ದಿಯಾ ಹೆಗ್ಡೆ ʼಸರಿಗಮಪʼ ಮುಗಿದಿದ್ದಕ್ಕೆ ಏನಂದ್ಳು ಗೋತ್ತಾ..!  

ಮತ್ತೊಬ್ಬ ನಟಿಯನ್ನು ಹಾಡಿಗೆ ಕರೆದರೆ ಕುಸೇಲನ್ ಸೆಟ್‌ಗೆ ಬರುವುದಿಲ್ಲ ಎಂದು ನಯನತಾರಾ ಚಿತ್ರತಂಡಕ್ಕೆ ಹೇಳಿದ್ದರು ಎಂದು ಮಮತಾ ತಿಳಿಸಿದ್ದಾರೆ. ಈ ಕಾರಣದಿಂದ ಚಿತ್ರದಲ್ಲಿನ ತಮ್ಮ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದು ಮಮತಾ ಹೇಳಿದ್ದಾರೆ. ಕುಸೇಲನ್‌ನಲ್ಲಿ ಮಮತಾ ಅವರ ಒಂದು ಶಾಟ್ ಮಾತ್ರ ಉಳಿದಿದೆ ಮತ್ತು ಅದು ಅವರಿಗೆ ತುಂಬಾ ನಿರಾಶಾದಾಯಕವಾಗಿತ್ತು. ಈ ಆರೋಪಗಳಿಗೆ ನಯನತಾರಾ ಇನ್ನೂ ಪ್ರತಿಕ್ರಿಯಿಸಿಲ್ಲ.

ಈ ಹಿನ್ನಡೆಗಳ ಹೊರತಾಗಿಯೂ, ಮಮತಾ ಮೋಹನ್‌ದಾಸ್‌ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದಿದ್ದಾರೆ. ಕನ್ನಡದ ಗೂಳಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂನ ಹಲವು ಸಿನಿಮಾಗಳಲ್ಲಿ ಮಮತಾ ಮೋಹನ್‌ದಾಸ್‌ ನಟಿಸಿದ್ದಾರೆ. ಅವರ ಮುಂಬರುವ ಚಿತ್ರ ರುದ್ರಂಗಿಗಾಗಿ ಕಾಯುತ್ತಿದ್ದಾರೆ. ಅಜಯ್ ಸಾಮ್ರಾಟ್ ನಿರ್ದೇಶನದ, ರುದ್ರಂಗಿ ಮೇ 26 ರಂದು ಬಿಡುಗಡೆಯಾಗಲಿದೆ. ರುದ್ರಂಗಿಯ ಕಥಾಹಂದರವು 1940 ರ ಸಮಯದಲ್ಲಿ ನಡೆಯುತ್ತದೆ. ಇದು ತೆಲಂಗಾಣದ ಹಳ್ಳಿಯೊಂದರ ಕ್ರೂರ ಜಮೀನ್ದಾರನ ಕಥೆಯನ್ನು ತೋರಿಸುತ್ತದೆ. ಈ ಚಿತ್ರದ ಟೀಸರ್ ಏಪ್ರಿಲ್ 19 ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಇದನ್ನೂ ಓದಿ: ಡ್ಡೆ ಹುಡುಗರಿಗೆ ಆಲ್ಕೋಹಾಲ್‌ ನಶೆ ಹೆಚ್ಚಿಸುವಂತೆ ಕಾಣುತ್ತಿರುವ ಹಾಲ್ಕೋವಾದಂತ ತಾರೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News