ನಡು ರಸ್ತೆಯಲ್ಲಿ ಯವತಿ ಮೈ ಮೇಲೆ ಕೈಹಾಕಿದ ಯವಕ.. ಕ್ಲಾಸ್‌ ತೆಗೆದುಕೊಂಡ ನಟ ನಾಗಶೌರ್ಯ..!

ಇತ್ತೀಚೆಗಷ್ಟೇ ಟಾಲಿವುಡ್‌ ನಟ ನಾಗಶೌರ್ಯ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ಎಲ್ಲರಿಗೂ ಗೊತ್ತೇ ಇದೆ. ತಾವು ಮಾಡುತ್ತಿರುವ ಚಿತ್ರಗಳು ಫ್ಲಾಪ್ ಆಗುತ್ತಿದ್ದರೂ ಒಂದೇ ಒಂದು ಚಿತ್ರ ಹಿಟ್ ಸಿನಿಮಾಗಾಗಿ ಹರಸಾಹಸ ಪಡುತ್ತಿದ್ದಾರೆ. 2021 ರಲ್ಲಿ ʼವರುಡು ಕವಲೇನುʼ ʼಲಕ್ಷʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಆದರೆ, ಆ ಚಿತ್ರದ ಅಷ್ಟಾಗಿ ಮೆಚ್ಚುಗೆ ಗಳಿಸಲಿಲ್ಲ. ಆ ನಂತರ ಬಿಡುಗಡೆಯಾದ ʼಕೃಷ್ಣವೃದ್ಧ ವಿಹಾರಿʼ ಸಿನಿಮಾ ಕೂಡ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು.

Written by - Krishna N K | Last Updated : Mar 1, 2023, 02:33 PM IST
  • ಟಾಲಿವುಡ್‌ ನಟ ನಾಗಶೌರ್ಯ ವಿಡಿಯೋ ಒಂದು ವೈರಲ್‌ ಆಗುತ್ತಿದೆ.
  • ವೀಡಿಯೋದಲ್ಲಿ ನಾಗ ಶೌರ್ಯ ಯುವಕನಿಗೆ ಹುಡುಗಿಯನ್ನು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ.
  • ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.
ನಡು ರಸ್ತೆಯಲ್ಲಿ ಯವತಿ ಮೈ ಮೇಲೆ ಕೈಹಾಕಿದ ಯವಕ.. ಕ್ಲಾಸ್‌ ತೆಗೆದುಕೊಂಡ ನಟ ನಾಗಶೌರ್ಯ..! title=

Naga Shaurya viral video : ಇತ್ತೀಚೆಗಷ್ಟೇ ಟಾಲಿವುಡ್‌ ನಟ ನಾಗಶೌರ್ಯ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ಎಲ್ಲರಿಗೂ ಗೊತ್ತೇ ಇದೆ. ತಾವು ಮಾಡುತ್ತಿರುವ ಚಿತ್ರಗಳು ಫ್ಲಾಪ್ ಆಗುತ್ತಿದ್ದರೂ ಒಂದೇ ಒಂದು ಚಿತ್ರ ಹಿಟ್ ಸಿನಿಮಾಗಾಗಿ ಹರಸಾಹಸ ಪಡುತ್ತಿದ್ದಾರೆ. 2021 ರಲ್ಲಿ ʼವರುಡು ಕವಲೇನುʼ ʼಲಕ್ಷʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಆದರೆ, ಆ ಚಿತ್ರದ ಅಷ್ಟಾಗಿ ಮೆಚ್ಚುಗೆ ಗಳಿಸಲಿಲ್ಲ. ಆ ನಂತರ ಬಿಡುಗಡೆಯಾದ ʼಕೃಷ್ಣವೃದ್ಧ ವಿಹಾರಿʼ ಸಿನಿಮಾ ಕೂಡ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು.

ಸದ್ಯ ನಾಗಶೌರ್ಯ ಅವರು ʼಫಲಾನಾ ಬಾಯ್ ಫಲಾನಾ ತಾರಿʼ ಚಿತ್ರದಲ್ಲಿ ಸಂಜಯ್ ಪಿಸಾಪತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುವ ಸಿದ್ಧವಾಗಿದೆ. ಈ ಚಿತ್ರದ ಮೂಲಕ ನಾಗಶೌರ್ಯ ಅವರನ್ನು ಟಾಲಿವುಡ್‌ಗೆ ಪರಿಚಯಿಸುತ್ತಿರುವ ವಾಸಲ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಆದರೆ ಈಗ ಅನಿರೀಕ್ಷಿತವಾಗಿ ನಾಗಶೌರ್ಯ ಸುದ್ದಿಯಲ್ಲಿದ್ದಾರೆ. ನಾಗಶೌರ್ಯ ಯುವಕನೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ

ವೀಡಿಯೋದಲ್ಲಿ ನಾಗ ಶೌರ್ಯ ಯುವಕನಿಗೆ ಹುಡುಗಿಯನ್ನು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಆದರೆ ಆ ಯುವಕ ಇವರು ನನ್ನ ಲವರ್‌ ಎಂದು ಹೇಳುತ್ತಿದ್ದಾನೆ. ಅಲ್ಲದೆ, ಯುವಕ ಯುವತಿಯನ್ನು ಹೊಡೆಯುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ಕಂಡ ನಾಗಶೌರ್ಯ ಯುವಕನ ಕೈ ಹಿಡಿದು ಬುದ್ದಿವಾದ ಹೇಳಿ ಕ್ಷಮೇ ಕೇಳುವಂತೆ ಹೇಳುವುತ್ತಿದ್ದಾರೆ. ಇನ್ನು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಇನ್ನು ಈ ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ವಿವಾದಕ್ಕೆ ನಿಜವಾದ ಕಾರಣವೇನು? ಈ ವಿವಾದದಲ್ಲಿ ನಾಗಶೌರ್ಯ ಅವರ ಪಾಲೂ ಇದೆಯೇ? ಅಥವಾ ಹೊರಗೆ ಯಾರಾದರೂ ಹೊಡೆಯುತ್ತಿದ್ದರೆ ಹೋಗಿ ಕ್ಷಮೆ ಕೇಳುವಂತೆ ನಾಗಶೌರ್ಯ ಕೇಳುತ್ತಿದ್ದಾನಾ? ಎಂಬ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News