ಪೊಲೀಸರು ಜೆಟ್‌ ಲ್ಯಾಗ್​ಗೆ ಬಂದಿಲ್ಲ ಅಂತಾ ಸುಳ್ಳು ಹೇಳಿದ್ರಾ ರಾಕ್‌ಲೈನ್‌..?

ಕಾಟೇರ ಚಿತ್ರತಂಡ ಪಬ್​ನಲ್ಲಿ ಇದ್ದಾಗ ಪೊಲೀಸರು ಅಲ್ಲಿಗೆ ಬಂದೇ ಇಲ್ಲಾ ಅಂತಾ ರಾಕ್​ಲೈನ್​ ವೆಂಕಟೇಶ್​ ಹೇಳಿದ್ದರು. ಆದರೆ ಪಬ್‌ಗೆ ಜನವರಿ 3ರಂದು ರಾತ್ರಿ ಎರಡು ಬಾರಿ ಪೊಲೀಸರು ಭೇಟಿ ನೀಡಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Written by - VISHWANATH HARIHARA | Edited by - Krishna N K | Last Updated : Jan 14, 2024, 04:32 PM IST
  • ಪಬ್​ಗೆ ಪೊಲೀಸರು ಬಂದೇ ಇಲ್ಲಾ ಅಂತಾ ರಾಕ್​ಲೈನ್​ ವೆಂಕಟೇಶ್​ ಹೇಳಿದ್ದರು.
  • ಪಬ್‌ಗೆ ಜನವರಿ 3ರಂದು ರಾತ್ರಿ ಎರಡು ಬಾರಿ ಪೊಲೀಸರು ಭೇಟಿ ನೀಡಿದ್ದರು.
  • ರಾಕ್​ಲೈನ್​ ವೆಂಕಟೇಶ್​ ಸುಳ್ಳು ಹೇಳಿದ್ರಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಪೊಲೀಸರು ಜೆಟ್‌ ಲ್ಯಾಗ್​ಗೆ ಬಂದಿಲ್ಲ ಅಂತಾ ಸುಳ್ಳು ಹೇಳಿದ್ರಾ ರಾಕ್‌ಲೈನ್‌..? title=

ಬೆಂಗಳೂರು : ರಾಜಾಜಿನಗರದಲ್ಲಿ ಇರುವ ಜೆಟ್​ ಲ್ಯಾಗ್​ ಪಬ್​ನಲ್ಲಿ ‘ಕಾಟೇರ’ ಚಿತ್ರತಂಡ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿರುವ ಪ್ರಕರಣ ಈಗ ಮತ್ತೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ದರ್ಶನ್​ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಸುಬ್ರಹ್ಮಣ್ಯ ನಗರ ಪೊಲೀಸರು ನೋಟಿಸ್​ ನೀಡಿ ವಿಚಾರಣೆಗೆ ಕರೆಸಿಕೊಂಡಿದ್ದರು. ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಸುಳ್ಳು ಹೇಳಿದ್ರಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. 

ಕಾಟೇರ ಚಿತ್ರತಂಡ ಪಬ್​ನಲ್ಲಿ ಇದ್ದಾಗ ಪೊಲೀಸರು ಅಲ್ಲಿಗೆ ಬಂದೇ ಇಲ್ಲಾ ಅಂತಾ ರಾಕ್​ಲೈನ್​ ವೆಂಕಟೇಶ್​ ಹೇಳಿದ್ದರು. ಆದರೆ ಪಬ್‌ಗೆ ಜನವರಿ 3ರಂದು ರಾತ್ರಿ ಎರಡು ಬಾರಿ ಪೊಲೀಸರು ಭೇಟಿ ನೀಡಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ. ಸದ್ಯ ರಾಕ್‌ಲೈನ್‌ ಪೊಲೀಸರ ಮೇಲಿನ ಕೋಪಕ್ಕೆ ಸುಳ್ಳು ಹೇಳಿದ್ರಾ ಎಂಬ ಪ್ರಶ್ನೆ ಎದುರಾಗಿದೆ. ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ರಾತ್ರಿ 12:45ಕ್ಕೆ ಭೇಟಿ ನೀಡಿ ರೆಸ್ಟೋಬಾರ್ ಕ್ಲೋಸ್ ಮಾಡಿಸಿ ಹೋಗಿದ್ದರು. 

ಇದನ್ನೂ ಓದಿ: ಫೋಟೋಗ್ರಾಫರ್‌ ಹೆಗಲಿಗೆ ಕೈ ಹಾಕಿದ ಕೆಜಿಎಫ್‌ ರಮೀಕಾ:‌ ರವೀನಾ ವೈರಲ್‌ ವಿಡಿಯೋ!

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್​ನಲ್ಲಿ ಉಲ್ಲೇಖ ಆಗಿರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ರಾತ್ರಿ 12:40ಕ್ಕೆ ಪಬ್ ಕ್ಲೋಸ್ ಮಾಡಿಸಲು ಹೋಗಿದ್ದರು. ಗ್ರಾಹಕರನ್ನು ಹೊರಗೆ ಕಳಿಸಿ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು. ಈ ವೇಳೆ ಸೆಲೆಬ್ರಿಟಿಗಳ ಬಗ್ಗೆಯೂ ಪಬ್​ ಸಿಬ್ಬಂದಿಗೆ ಪ್ರಶ್ನೆ ಮಾಡಲಾಯಿತು. ಸಿನಿಮಾದವರ ಮೀಟಿಂಗ್​ ಇದೆ. 20 ನಿಮಿಷ ಮೀಟಿಂಗ್ ಮಾಡಿ ಎಲ್ಲರೂ ಹೋಗ್ತಾರೆ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್. ಹೀಗಾಗಿ ವೈಯಕ್ತಿಕ ಮಾತುಕತೆ ಇದೆ. ಬಾರ್ ಕೌಂಟರ್ ಎಲ್ಲವನ್ನೂ ಕ್ಲೋಸ್ ಮಾಡಿದ್ದೇವೆ ಎಂದು ಪಬ್​ ಸಿಬ್ಬಂದಿ ಉತ್ತರಿಸಿದ್ದರು.

ಬಳಿಕ ರಾಬರಿ ಆಗಿದೆ ಅಂತ ಕಂಟ್ರೋಲ್ ರೂಂಗೆ ಕಾಲ್ ಬಂದಿದ್ದರಿಂದ ಪೊಲೀಸರು ಅಲ್ಲಿಗೆ ತೆರಳಿದ್ದರು. ಇನ್ನು, ಪೊಲೀಸರು ಎರಡನೇ ಬಾರಿಗೆ ಪಬ್​ಗೆ ಬಂದಿದ್ದು ರಾತ್ರಿ 2:51ಕ್ಕೆ. ಆ ವೇಳೆ ಅಲ್ಲಿ ಜನ ಸೇರಿದ್ದನ್ನು ಕ್ಲಿಯರ್ ಮಾಡಿಸಿ ರೆಸ್ಟೋಬಾರ್ ಒಳಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಅವಧಿ ಮೀರಿ ಪಬ್ ಓಪನ್‌ ಆಗಿದ್ದಕ್ಕೆ ಪಬ್‌​ ಕ್ಲೋಸ್ ಮಾಡಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ಇದನ್ನೂ ಓದಿ:Drone Prathap : ಸಾಮಾನ್ಯವಾಗಿ ಕಾಣುವ ಡ್ರೋನ್‌ ಪ್ರತಾಪ್‌ ಆಸ್ತಿ ಮೌಲ್ಯ ಎಷ್ಟು ಗೊತ್ತೆ..? ಶಾಕ್‌ ಆಗ್ತೀರಾ

ಪೊಲೀಸ್ ನಿಯಮ ಉಲ್ಲಂಘನೆ ಹಾಗೂ ಅಬಕಾರಿ ನಿಯಮದ ಅಡಿ ಕೇಸ್ ದಾಖಲಾಗಿತ್ತು. ಪಬ್‌ ಮಾಲೀಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. ಆದರೆ ಅಂದು ಪೊಲೀಸರೇ ಬಂದಿಲ್ಲ ಅಂತ ಮಾಧ್ಯಮಗಳ ಮುಂದೆ ರಾಕ್​ಲೈನ್​ ವೆಂಕಟೇಶ್ ಹೇಳಿದ್ದು ಈಗ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News