ರಾಮ್‌ ಚರಣ್‌ಗೆ ನಾಯಕಿಯಾಗಿ ಸಾಯಿ ಪಲ್ಲವಿ..! ಆ ಸ್ಟಾರ್‌ ಡೈರೆಕ್ಟರ್‌ ಪ್ರಯತ್ನ ಫಲ ನೀಡುತ್ತಾ?

Sai Pallavi-Ram Charan: ನಿರೀಕ್ಷೆಗೂ ಮೀರಿದ ಜೋಡಿಗಳು ಈಗಾಗಲೇ ಬೆಳ್ಳಿತೆರೆಗೆ ಬಂದಿವೆ. ಆದರೆ ಇನ್ನೂ ಹೆಚ್ಚು ಕ್ರೇಜಿ ಕಾಂಬಿನೇಷನ್‌ಗಳನ್ನು ಪ್ರೇಕ್ಷಕರು ನೋಡಲಿದ್ದಾರೆ ಎನ್ನುವುದಕ್ಕೆ ಈ ವೈರಲಾ ಸುದ್ದಿಯೇ ಸಾಕ್ಷಿ.. ಏನದು ಅಂತೀರಾ ಈ ಸ್ಟೋರಿ ಓದಿ..  

Written by - Savita M B | Last Updated : Nov 16, 2023, 06:34 PM IST
  • ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ಕ್ರೇಜಿ ಸುದ್ದಿ ವೈರಲ್ ಆಗಿದೆ.
  • ರಾಮ್‌ ಚರಣ್‌ ಹಾಗೂ ಸಾಯಿಪಲ್ಲವಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ
  • ಯಾವುದು ಆ ಸಿನಿಮಾ ಅನ್ನೋ ಡಿಟೇಲ್ಸ್‌ ಇಲ್ಲಿದೆ
ರಾಮ್‌ ಚರಣ್‌ಗೆ ನಾಯಕಿಯಾಗಿ ಸಾಯಿ ಪಲ್ಲವಿ..! ಆ ಸ್ಟಾರ್‌ ಡೈರೆಕ್ಟರ್‌ ಪ್ರಯತ್ನ ಫಲ ನೀಡುತ್ತಾ? title=

Tollywood News: ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ಕ್ರೇಜಿ ಸುದ್ದಿ ವೈರಲ್ ಆಗಿದೆ. ಅದೇ ರಾಮ್‌ ಚರಣ್‌ ಹಾಗೂ ಸಾಯಿಪಲ್ಲವಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋದು.. 

ಇನ್ನು ಸಾಯಿ ಪಲ್ಲವಿ ಹೆಚ್ಚು ಕಮರ್ಷಿಯಲ್ ಇರುವ ಚಿತ್ರಗಳಲ್ಲಿ ನಟಿಸುವುದಿಲ್ಲ. ಹೌದು ನಾಯಕಿಯ ಪಾತ್ರಕ್ಕೆ ನಟನೆಯ ಸ್ಕೋಪ್ ಇದ್ದರೆ ಮಾತ್ರ ಅವರು ಸಿನಿಮಾಗಳಿಗೆ ಗ್ರೀನ್‌ ಸಿಗ್ನಲ್‌ ನೀಡುತ್ತಾರೆ.. ಈ ವಿಷಯದಲ್ಲಿ ಎಂತಹ ದೊಡ್ಡ ಸೂಪರ್‌ಸ್ಟಾರ್‌ ಜೊತೆಗಿನ ಅವಕಾಶವನ್ನಾದರೂ ನಟಿ ಸಾಯಿ ಪಲ್ಲವಿ ನಿರಾಕರಿಸುತ್ತಾರೆ. 

ಇದನ್ನೂ ಓದಿ-ಪ್ರತಾಪ್‌ ನೀನು ನನಗೆ ದೇವರು ಕಣೋ..! ಬೆಳಿಗ್ಗೆ ಎದ್ದು ನಿನ್ನನ್ನೇ ನೊಡ್ತೀನಿ, ಒಳ್ಳೆಯದಾಗುತ್ತೆ..

ಇದಕ್ಕೆ ಸಾಕ್ಷಿ ಈ ಹಿಂದೆ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಅವಕಾಶ ಬಂದಾಗ, ಕಥೆ ಕೇಳಿದ ತಕ್ಷಣ ಪಲ್ಲವಿ ಅದನ್ನು ತಿರಸ್ಕರಿಸಿದ್ದರು. ಹಾಗಾಗಿ ಸಾಯಿ ಪಲ್ಲವಿ ತುಂಬಾ ವಿಶೇಷ ಎನಿಸಿದರು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಸಾಯಿ ಪಲ್ಲವಿ ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ..

ಸದ್ಯ ರಾಮ್ ಚರಣ್ ಶಂಕರ್ ಅವರ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಗೇಮ್ ಚೇಂಜರ್ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ ಎಂಬ ವಿಶ್ವಾಸಾರ್ಹ ಮಾಹಿತಿ ಇದೆ... ಇದೇ ವೇಳೆ... ರಾಮ್ ಚರಣ್ ಅವರ ಮುಂದಿನ ಸಿನಿಮಾವನ್ನು ಉಪ್ಪೇನ ಖ್ಯಾತಿಯ ಬುಚ್ಚಿ ಬಾಬು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ..

 ಇನ್ನು ಈ ಸಿನಿಮಾದ ಕುರಿತಾಗಿ ಅನೇಕರ ಹೆಸರುಗಳು ಕೇಳಿಬರುತ್ತಿದ್ದು,, ಕೆಲವು ಹೆಸರುಗಳು ಈಗಾಗಲೇ ಹೊರಬಿದ್ದಿವೆ..ಆದರೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.. ಅದಕ್ಕೂ ಮುನ್ನ ಮೃಣಾಲ್ ಹೆಸರು ಕೇಳಿ ಬಂದಿತ್ತು. ಆ ನಂತರ ಜಾನ್ವಿ ಕಪೂರ್.. ಇದೀಗ ಈ ಇಬ್ಬರಲ್ಲ ಸಾಯಿ ಪಲ್ಲವಿ ಎಂಬ ಹೊಸ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ-Bigg Boss: ಬಿಗ್ ಬಾಸ್ ಸ್ಪರ್ಧಿ ಪ್ರಗ್ನೆಂಟ್..! ದೊಡ್ಮನೆಯಿಂದಲೇ ಸೋರಿಕೆಯಾದ ಶಾಕಿಂಗ್ ಸತ್ಯ

ಗ್ರಾಮೀಣ ಹಿನ್ನಲೆಯಲ್ಲಿ ಈ ಸ್ಪೋರ್ಟ್ಸ್ ಡ್ರಾಮಾ ರೀತಿಯಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಸಾಯಿ ಪಲ್ಲವಿ ನಾಯಕಿಯಾಗಿ ಬಂದರೆ ಚೆನ್ನಾಗಿರುತ್ತದೆ ಎಂದು ಬುಚ್ಚಿಬಾಬು ಅಭಿಪ್ರಾಯಪಟ್ಟಿದ್ದಾರೆ. ಸಾಯಿ ಪಲ್ಲವಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಈ ಕಥೆಯಲ್ಲಿ ಹಳ್ಳಿ ಹುಡುಗಿಯಾಗಿರುವುದರಿಂದ ಸಾಯಿ ಪಲ್ಲವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. 

ಅಷ್ಟೇ ಅಲ್ಲ, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ವೆಂಕಟ ಸತೀಶ್ ಕಿಲಾರು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್ ಅಡಿಯಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿರುವರುವ ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ.. ಆದರೆ ಈ ವಿಷಯವನ್ನು ನಿರ್ಮಾಪಕರು ಅಧಿಕೃತವಾಗಿ ಪ್ರಕಟಿಸಿಲ್ಲ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News