Tamannah: ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?

Tamannaah Bhatia : ಇತ್ತೀಚೆಗೆ ತಮನ್ನಾ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಸ್ಥಾನಗಳನ್ನು ರೌಂಡ್ಸ್‌ ಹಾಕುವುದು, ಪೂಜೆ ಮಾಡುವುದನ್ನು ಕಾಣಬಹುದು. ತಮನ್ನಾ ಕಾವಿ ತೊಟ್ಟು ಕಾಣಿಸಿಕೊಂಡಿದ್ದಾರೆ. 

Written by - Chetana Devarmani | Last Updated : Feb 10, 2023, 09:15 AM IST
  • ಆಧ್ಯಾತ್ಮಿಕ ಸೇವೆಯಲ್ಲಿ ನಟಿ ತಮನ್ನಾ
  • ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!!
  • ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?
Tamannah: ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ? title=
Tamannaah Bhatia

Tamannah Bhatia Visit to Linga Bhairavi temple: ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್‌ ವಿಚಾರದ ಬಳಿಕ ಟಾಲಿವುಡ್‌ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮನ್ನಾ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಸ್ಥಾನಗಳನ್ನು ರೌಂಡ್ಸ್‌ ಹಾಕುವುದು, ಪೂಜೆ ಮಾಡುವುದನ್ನು ಕಾಣಬಹುದು. ಮಿಲ್ಕಿ ಬ್ಯೂಟಿ ತಮನ್ನಾಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಿರುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ತೆಲುಗು ಅಲ್ಲದೆ ತಮಿಳಿನಲ್ಲೂ ಹಲವು ಸೂಪರ್ ಹಿಟ್ ಚಿತ್ರಗಳನ್ನು ಪಡೆದ ಈ ಬೆಡಗಿ, ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ : DDLJ release: ‘ಪಠಾಣ್​’ ಸಕ್ಸಸ್‌ ಬೆನ್ನಲ್ಲೇ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ರೀ-ರಿಲೀಸ್!

ಇತ್ತೀಚೆಗೆ ಎಫ್3 ಚಿತ್ರದ ಮೂಲಕ ಮತ್ತೊಂದು ಯಶಸ್ಸನ್ನು ಗಳಿಸಿದ ಮಿಲ್ಕಿ ಬ್ಯೂಟಿ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕೀರ್ತಿ ಸುರೇಶ್ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದೆ ಶುರುವಾದ ಈ ಸಿನಿಮಾದ ಶೂಟಿಂಗ್ ಸದ್ಯ ಶರವೇಗದಲ್ಲಿ ಸಾಗುತ್ತಿದೆ. ಬಾಲಿವುಡ್‌ನಲ್ಲೂ ತಮನ್ನಾ ಬ್ಯುಸಿಯಾಗಿದ್ದಾರೆ. ಆದರೆ ಕೆಲವು ತಿಂಗಳುಗಳಿಂದ ಮಿಲ್ಕಿ ಬ್ಯೂಟಿಯ ರೊಮ್ಯಾನ್ಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆಕೆ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೊಸ ವರ್ಷಾಚರಣೆಯ ಅಂಗವಾಗಿ, ಗೋವಾದಲ್ಲಿ ಇಬ್ಬರು ಭೇಟಿಯಾದ ಚಿತ್ರ ವೈರಲ್ ಆಗಿದ್ದು, ಅವರ ಪ್ರೀತಿ ಗಟ್ಟಿಯಾಗಿದೆ. ಆದರೆ, ಈ ಸುದ್ದಿಗೆ ತಮನ್ನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೆಲ್ಲದರ ನಡುವೆ ತಮನ್ನಾ ಕಾವಿ ತೊಟ್ಟು ಕಾಣಿಸಿಕೊಂಡಿದ್ದಾರೆ.

 

 

ಶೂಟಿಂಗ್ ಇಲ್ಲದಿದ್ದಾಗ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಆಧ್ಯಾತ್ಮಿಕ ಹಾದಿ ಹಿಡಿದಿರುವ ತಮನ್ನಾ, ಇತ್ತೀಚೆಗಷ್ಟೇ ಕೇಸರಿ ವಸ್ತ್ರ ಧರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಶಾ ಫೌಂಡೇಶನ್‌ ನಲ್ಲಿರುವ ಲಿಂಗಭೈರವಿ ದೇವಿಯ ದರ್ಶನ ಪಡೆದಿದ್ದಾರೆ. ದೇವಿಗೆ ಆರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಯೋಗಾಶ್ರಮದಿಂದ ಆಹ್ವಾನ ಬಂದಿದ್ದು ತುಂಬಾ ಖುಷಿ ತಂದಿದೆ ಎಂದು ಹೇಳಿದ್ದಾರೆ. ಅಮ್ಮನ ದರ್ಶನ ಮಾಡಿದ್ದು ಮಾನಸಿಕ ನೆಮ್ಮದಿ ನೀಡಿದೆ. ಮೇಲಾಗಿ.. ಜೀವನದಲ್ಲಿ ಸೋಲುಗಳ ಭಯ ಮತ್ತು ಚಿಂತೆ ದೂರವಾಗುತ್ತದೆ ಎಂದಿದ್ದಾರೆ ತಮನ್ನಾ.

ಇದನ್ನೂ ಓದಿ : Narendra modi : ಶಾರುಖ್‌ ಖಾನ್‌ ಸಿನಿಮಾ ʼಪಠಾಣ್‌ʼ ಹೊಗಳಿದ ಪಿಎಂ ಮೋದಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News