ವೇದಾಂತ್ ಪ್ರಾಣಕ್ಕೆ ಅಪಾಯ: ಅನ್ನಕ್ಕೆ ವಿಷ ಬೆರೆಸಿದ ಸುಹಾಸಿನಿ!

Gattimela: ಗಟ್ಟಿಮೇಳ ಧಾರವಾಹಿಯಲ್ಲಿ ಸುಹಾಸಿನಿ ವೇದಾಂತ್‌ಗೆ ತಿನ್ನೋ ಅನ್ನಕ್ಕೆ ವಿಷ ಬೆರೆಸಿ ನೀಡುತ್ತಾಳೆ. ಆಗ ವೇದಾಂತ್‌ ಅದನ್ನೂ ಯಾರ ಮಾತು ಕೇಳದೆ ಅದನ್ನು ತಿನ್ನುತ್ತಾನೆ. ಹಾಗಾದ್ರೆ ವೇದಾಂತ್ಗೆ ಏನಾಗುತ್ತೆ? ವೇದಾಂತ್‌ ಪ್ರಾಣ ಅಪಾಯದಲ್ಲಿದೇಯಾ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Jan 5, 2024, 11:49 AM IST
  • ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್‌ ಎಂಬ ಮುಖ್ಯ ಪಾತ್ರದಲ್ಲಿ ಇದ್ದು, ವೇದಾಂತ್‌ ಚಿಕ್ಕಮ್ಮ ಸುಹಾಸಿನಿಯೇ ಈ ಸೀರಿಯಲ್‌ನಲ್ಲಿ ಖಳನಾಯಕಿ
  • ಸುಹಾಸಿನಿ ವೇದಾಂತ್‌ಗಾಗಿ ತಿನ್ನೋ ಅನ್ನಕ್ಕೆ ವಿಷ ಬೆರೆಸಿದ್ದಾಳೆ.ಮನೆಯಲ್ಲಿ ವೇದಾಂತ್‌ ಪ್ರಾಣ ಕಳೆದುಕೊಂಡರೇ ಇಡೀ ಮನೆಯಲ್ಲಿರುವರು ಸತ್ತಂತೆ ಎಂದು ಭಾವಿಸಿ ಇಂತಹ ಕೃತ್ಯ ಕೆಲಸ ಮಾಡಿದ್ದಾಳೆ.
  • ಅದೇ ಸಮಯದಲ್ಲಿ ವೇದಾಂತ್‌ ಜೊತೆಗೆ ಬಂದ ಅಮೂಲ್ಯ, ವೇದಾಂತ್‌ ಅನ್ನ ತಿನ್ನಲು ಹೊರಟಾಗ ತಡೆದು ಮೊದಲು ಒಂದು ತುತ್ತು ಸುಹಾಸಿನಿಗೆ ತಿನ್ನಲು ಹೇಳುತ್ತಾಳೆ.
ವೇದಾಂತ್ ಪ್ರಾಣಕ್ಕೆ ಅಪಾಯ: ಅನ್ನಕ್ಕೆ ವಿಷ ಬೆರೆಸಿದ ಸುಹಾಸಿನಿ! title=

Gattimela Last Episode: ನಾಲ್ಕು ಜನ ಹೆಣ್ಣು ಮಕ್ಕಳಿರುವ ಮಧ್ಯಮ ವರ್ಗದ ಕುಟುಂಬದ ವಿಭಿನ್ನ ಕಥೆಯ ಧಾರವಾಹಿಯೇ ಗಟ್ಟಿಮೇಳ. ಈ ಧಾರಾವಾಹಿ ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಕಳೆದ ಐದು ವರ್ಷದಿಂ ಪ್ರಸಾರವಾಗುತ್ತಾಯಿದ್ದು, ಈ ಧಾರವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್‌ ಎಂಬ ಮುಖ್ಯ ಪಾತ್ರದಲ್ಲಿ ಇದ್ದು, ವೇದಾಂತ್‌ ಚಿಕ್ಕಮ್ಮ ಸುಹಾಸಿನಿಯೇ ಈ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಎಂಬುದು ವೀಕ್ಷಕರಿಗೆ ತಿಳಿದಿರುವ ವಿಷಯ.

ಸದ್ಯ ಗಟ್ಟಿಮೇಳ ಈ ಧಾರಾವಾಹಿ ಸದ್ಯ ಅಂತಿಮ ಸಂಚಿಕೆಗೆ ತಲುಪುದ್ದು, ಜೀ ಕನ್ನಡ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡಿರುವ ಪ್ರೋಮೋದಲ್ಲಿ ಸುಹಾಸಿನಿ ವೇದಾಂತ್‌ಗಾಗಿ ತಿನ್ನೋ ಅನ್ನಕ್ಕೆ ವಿಷ ಬೆರೆಸಿದ್ದಾಳೆ.ಮನೆಯಲ್ಲಿ ವೇದಾಂತ್‌ ಪ್ರಾಣ ಕಳೆದುಕೊಂಡರೇ ಇಡೀ ಮನೆಯಲ್ಲಿರುವರು ಸತ್ತಂತೆ ಎಂದು ಭಾವಿಸಿ ಇಂತಹ ಕೃತ್ಯ ಕೆಲಸ ಮಾಡಿದ್ದಾಳೆ.ಬಳಿಕ ವೇದಾಂತ್‌ನ ಕರೆದು ನಾನೆ ನಿನಗೋಸ್ಕರ ಕೈಯಾರ ಅಡುಗೆ ಮಾಡಿದ್ದೀನಎಂದು ಹೇಳಿ ವೇದಾಂತ್‌ಗೆ ವಿಷ ಬೆರೆಸಿದ ಊಟವನ್ನು ನೀಡಿದ್ದಾಳೆ.

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಇದನ್ನೂ ಓದಿ: ಮ್ಯಾಕ್ಸ್‌ ಕ್ಲೈಮ್ಯಾಕ್ಸ್‌ ಲುಕ್‌ ಔಟ್‌: ಸುದೀಪ್‌ ಸ್ಟೈಲ್‌ ರಿವೀಲ್!

ಅದೇ ಸಮಯದಲ್ಲಿ ವೇದಾಂತ್‌ ಜೊತೆಗೆ ಬಂದ ಅಮೂಲ್ಯ, ವೇದಾಂತ್‌ ಅನ್ನ ತಿನ್ನಲು ಹೊರಟಾಗ ತಡೆದು ಮೊದಲು ಒಂದು ತುತ್ತು ಸುಹಾಸಿನಿಗೆ ತಿನ್ನಲು ಹೇಳುತ್ತಾಳೆ. ಆಗ ಸುಹಾಸಿನಿ ವೇದಾಂತ್‌ಗೋಸ್ಕರ ನ್ನ ಕೈಯಾರ ಅಡುಗೆ ಮಾಡಿದ್ದೀನಿ. ಮೊದಲು ಅವನೇ ತಿನ್ನಬೇಕು ಎಂದಳು. ಆಗ ಅಮೂಲ್ಯ ಅತ್ತೆ ಸುಳ್ಳು ಹೇಳ್ಬೇಡಿ. ನಿಜ ಹೇಳಿ. ಇದರಲ್ಲಿ ವಿಷ ಬೆರೆಸಿದ್ದೀರಲ್ವ ಎನ್ನುತ್ತಾಳೆ. ಆಗ ವೇದಾಂತ್‌ ಸುಹಾಸಿನಿ ಪರವಾಗಿ ಅಮ್ಮ ಈ ರೀತಿ ಮಾಡಲ್ಲ. ಯಾರು ಇಲ್ಲದೆ ಸಮಯದಲ್ಲಿ ಚಿಕ್ಕ ವಯಸ್ಸಿನಿಂದ ಸಾಕಿ ಬೆಳೆಸಿದ್ದಾರೆ ಎನ್ನುತ್ತಾನೆ.

ಆಗ ಸುಹಾಸಿನಿ ವೇದಾಂತ್‌ ನೀನೊಬ್ಬನ್ನೇ ನನ್ನ ಅರ್ಥ ಮಾಡಿಕೊಂಡಿರುವುದು ಅಂತ ಹೇಳುತ್ತಾಳೆ. ಮತ್ತೆ ವೇದಾಂತ್‌ ತಿನ್ನಲು ಹೋದಾಗ ಅಮೂಲ್ಯ ತಟ್ಟೆಯನ್ನು ಕಿತ್ತುಕೊಳ್ಳೋಕೆ ಪ್ರಯತ್ನಿಸುತ್ತಾಳೆ. ಆಗ ವೇದಾಂತ್‌ ಕೋಪಗೊಂಡು ಈ ಅನ್ನದಲ್ಲಿ ವಿಷ ಇದೆಯೋ ಇಲ್ಲವೂ. ಅದನ್ನ ತಿಳಿದಿಕೊಳ್ಳಬೇಕಂದ್ರೆ  ನಾನು ಇದನ್ನ ತಿನ್ನಲೇ ಬೇಕು ಎನ್ನುತ್ತಾನೆ. ಮತ್ತೆ ಅಮೂಲ್ಯ ದಯವಿಟ್ಟು ಅರ್ಥ ಮಾಡ್ಕೋ ಅಂತಾಳೆ. ಅದಕ್ಕೆ ವೇದಾಂತ್‌  ಆಣೆ ಹಾಕುತ್ತಾನೆ. ಅದಕ್ಕೆ ನಿನ್ನೆ ಆಣೆ ಗೀಣೆ ನಂಬೋದಿಲ್ಲ ಎನ್ನುತ್ತಾಳೆ ಅಮೂಲ್ಯ.  

ಇದನ್ನೂ ಓದಿ: Janhvi Kapoor: ನನ್ನ ಕಣ್ಣಲ್ಲ.. ಹುಡುಗರು ಬೇರೆ ನೋಡ್ತಾರೆ : ಜಾನ್ವಿ ಹಾಟ್ ಕಾಮೆಂಟ್ ವೈರಲ್

ಅದಕ್ಕೆ ವೇದಾಂತ್‌ ಈ ಅನ್ನ ತಿನ್ನುವುಡಕ್ಕೆ ಬಿಡಲಿಲ್ಲ ಎಂದ್ರೆ ನಾನೇ ವಿಷ ಕುಡಿದು ಸತ್ತು ಹೋಗುತ್ತೀನಿ ಎನ್ನುತ್ತಾನೆ. ಹಠ ಬಿಡದ ವೇದಾಂತ್‌ ತಾಯಿ ಹೆಂಡತಿಯ ಮುಂದೆಯೇ ಅನ್ನ ತಿನ್ನುತ್ತಾನೆ. ವೇದಾಂತ್‌ ಬದುಕುತ್ತಾನಾ ಅಥವಾ ಸಾಯಬಹುದಾ. ಏನಾಗಬಹುದು ವೇದಾಂತ್‌ಗೆ? ಮುಂದಿನ ಕಥೆ ಏನಾಗಬಹುದೆಂದು ತಿಳಿಯಲು ಇಂದು ರಾತಿ 8 ಗಂಟೆಗೆ ಗಟ್ಟಿಮೇಳ ಅಂತಿಮ ಸಂಚಿಕೆಯನ್ನು ಜೀ ಕನ್ನಡ ವಾಹನಿಯಲ್ಲಿ ವೀಕ್ಷಿಸಿ ಅಥವಾ ಜೀ5 ಆಪ್‌ನಲ್ಲಿ ಡೌನ್‌ ಲೋಡ್‌ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News