ಯಶ್‌19 ಕಥೆ ಅಲ್ಲ...ರಾಕಿ ಬಾಯ್‌ ರಾವಣನ ವೇಷದಲ್ಲಿ ಮಿಂಚಿದ್ದು ಇದೇ ಸಿನಿಮಾಗಾಗಿ!

Yash New Movie Updates ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಯಶ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.   

Written by - Savita M B | Last Updated : Aug 24, 2023, 10:48 AM IST
  • ಈ ವರ್ಷ ಮುಗಿಯುತ್ತಾ ಬಂದರೂ ಯಾವುದೇ ಸ್ಟಾರ್‌ ಸಿನಿಮಾಗಳು ಕನ್ನಡ ಸಿನಿರಂಗದಲ್ಲಿ ಬಿಡುಗಡೆಯಾಗಿಲ್ಲ
  • ಸದ್ಯ ರಾಕಿಬಾಯ್‌ ಸಿನಿಮಾ ಕುರಿತಾಗಿ ಇಂಟ್ರೆಸ್ಟಿಂಗ್ ನ್ಯೂಸ್ ಲಭಿಸಿದೆ.
  • ಯಶ್‌ ಬಾಲಿವುಡ್‌ ರಾಮಾಯಣ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ
ಯಶ್‌19 ಕಥೆ ಅಲ್ಲ...ರಾಕಿ ಬಾಯ್‌ ರಾವಣನ ವೇಷದಲ್ಲಿ ಮಿಂಚಿದ್ದು ಇದೇ ಸಿನಿಮಾಗಾಗಿ!  title=

Rocking Star Yash Next Movie : ಈ ವರ್ಷ ಮುಗಿಯುತ್ತಾ ಬಂದರೂ ಯಾವುದೇ ಸ್ಟಾರ್‌ ಸಿನಿಮಾಗಳು ಕನ್ನಡ ಸಿನಿರಂಗದಲ್ಲಿ ಬಿಡುಗಡೆಯಾಗಿಲ್ಲ. ವರ್ಷದ ಆರಂಭದಲ್ಲಿ ಕ್ರಾಂತಿ ಸಿನಿಮಾ ರಿಲೀಸ್‌ ಆದರೂ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ರಾಕಿಬಾಯ್‌ ಸಿನಿಮಾ ಕುರಿತಾಗಿ  ಇಂಟ್ರೆಸ್ಟಿಂಗ್ ನ್ಯೂಸ್ ಲಭಿಸಿದೆ.

ಸದ್ಯ ಯಶ್‌ ಅವರ ಮುಂದಿನ ಸಿನಿಮಾ ಯಾವುದು ಅನ್ನೋದು ಯಾರಿಗು ಗೊತ್ತಿಲ್ಲ. ಅಲ್ಲದೇ ಕೆವಿಎನ್‌ ಪ್ರೊಡಕ್ಷನ್‌ ಮುಂದಿನ ಸಿನಿಮಾ ಯಶ್‌ 19 ಅಲ್ಲ ಅನ್ನೋದು ಕನ್ಫರ್ಮ್‌ ಆಗಿದೆ. ಹಾಗಾದರೆ ಯಶ್‌ ಮುಂದಿನ ಸಿನಿಮಾ ಯಾವುದು? ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್..‌

KGF ಸರಣಿ ಚಿತ್ರಗಳ ಯಶಸ್ಸಿನ ನಂತರ ಯಶ್‌ ಜೊತೆ ಸಿನಿಮಾ ಮಾಡಲು ಬಹುಭಾಷಾ ಡೈರೆಕ್ಟರ್‌ಗಳು ತುದಿಕಾಲಲ್ಲಿ ನಿಂತಿದ್ದಾರೆ. ಆದರೆ ಯಶ್‌ ತಾವು ಕನ್ನಡದಲ್ಲೇ ಸಿನಿಮಾ ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ಇದೆಲ್ಲದರ ನಡುವೆ ಯಶ್‌ ಬಾಲಿವುಡ್‌ ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆಂದು ಈ ಹಿಂದೆ ಚರ್ಚೆಯಾಗಿತ್ತು. 

ಇದನ್ನೂ ಓದಿ-Amala Poul : ಸಖತ್‌ ಪೋಟೋಶೂಟ್‌ನಲ್ಲಿ ಮಿಂಚಿದ ಹೆಬ್ಬುಲಿ ನಟಿ..ಪೋಟೋಸ್‌ ನೋಡಿ

ಸದ್ಯ ಯಶ್‌ ನಿತೇಶ್‌ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪೌರಾಣಿಕ ಚಿತ್ರದಲ್ಲಿ ರಾಕಿಬಾಯ್‌ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸದ್ದಿಲ್ಲದೇ ಯಶ್‌ ಅವರಿಗೆ ರಾವಣನ ವೇಷದಲ್ಲಿ ಟೆಸ್ಟ್‌ ನಡೆಯುತ್ತಿದೆ ಎನ್ನುವ ಸುದ್ದಿಯೊಂದು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. 

ನಿರ್ದೇಶಕ ನಿತೇಶ್‌ ತಿವಾರಿ ಅವರು ರಾಮಾಯಣವನ್ನು ಆಧರಿಸಿ ಸಿನಿಮಾ ಪ್ಲಾನ್‌ ಮಾಡಿದ್ದಾರೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ಶ್ರೀರಾಮನ ಪಾತ್ರ ಮಾಡುತ್ತಿದ್ದು, ರಾವಣನ ಪಾತ್ರಕ್ಕೆ ಯಶ್ ಸೂಕ್ತ ಎನ್ನುವ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇನ್ನು ಚಿತ್ರದ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. 

ರಾಮನಾಗಿ ರಣಬೀರ್‌ ಕಪೂರ್‌..ಸೀತೆ ಪಾತ್ರಕ್ಕೆ ಟೆಸ್ಟ್ ಮುಂದಿನ ದಿನಗಳಲ್ಲಿ ನಡೆಯಲಿದೆ. ಸದ್ಯ ರಾವಣನ  ಪಾತ್ರಕ್ಕೆ ಬೇರೆ ಬೇರೆ ಲುಕ್ ಟೆಸ್ಟ್ ಮಾಡಲಾಗಿದ್ದು, ಯಶ್ ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಮಾತ್ರ ಬಾಕಿ ಇದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.  

ಇದನ್ನೂ ಓದಿ-ಜಿಎಸ್‌ಟಿ ಚಿತ್ರಕ್ಕೆ ನಟಿ ಶೃತಿ ಶುಭ ಹಾರೈಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News