ಕಣ್ಣುಗಳಿಂದಲೇ ತಿಳಿಯುತ್ತದೆ ಮಧುಮೇಹದ ಆರಂಭಿಕ ಹಂತ ! ಇಲ್ಲೇ ಎಚ್ಚೆತ್ತರೇ ತಪ್ಪುವುದು ಶುಗರ್ ಏರುವ ಸಮಸ್ಯೆ

ಮಧುಮೇಹದ ಆರಂಭಿಕ ಸಂಕೇತ ಕಣ್ಣುಗಳ ಮೂಲಕವೇ ತಿಳಿದು ಬಿಡುತ್ತದೆ. ಇದನ್ನು ಸೂಕ್ತ ಸಮಯಕ್ಕೆ ಪತ್ತೆ ಹಚ್ಚಿದರೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು.   

Written by - Ranjitha R K | Last Updated : Sep 5, 2024, 01:43 PM IST
  • ಮಧುಮೇಹವು ಇಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.
  • ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವ ಕಾಯಿಲೆ
  • ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿದ್ದರೆ ಎದುರಾಗುವುದು ಗಂಭೀರ ಸಮಸ್ಯೆ
ಕಣ್ಣುಗಳಿಂದಲೇ ತಿಳಿಯುತ್ತದೆ ಮಧುಮೇಹದ ಆರಂಭಿಕ ಹಂತ ! ಇಲ್ಲೇ ಎಚ್ಚೆತ್ತರೇ ತಪ್ಪುವುದು ಶುಗರ್ ಏರುವ ಸಮಸ್ಯೆ   title=

ಬೆಂಗಳೂರು :ಮಧುಮೇಹವು ಇಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್)ಮಟ್ಟದ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ.ಇದನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿದ್ದರೆ ಅಥವಾ  ನಿಯಂತ್ರಿಸದಿದ್ದರೆ,ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಮಧುಮೇಹವು ಅನೇಕ ರೋಗಲಕ್ಷಣಗಳನ್ನು ಹೊಂದಿದ್ದರೂ, ಅದರ ಆರಂಭಿಕ ಚಿಹ್ನೆ ಕಣ್ಣುಗಳಲ್ಲಿ ಕಂಡುಬರುತ್ತವೆ.ಕಣ್ಣುಗಳಲ್ಲಿನ ಕೆಲವು ಬದಲಾವಣೆಗಳು ಮಧುಮೇಹದ ಆರಂಭಿಕ ಚಿಹ್ನೆಯಾಗಿರಬಹುದು.ಇದನ್ನು ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿದರೆ ಮುಂದೆ ಆಗಬಹುದಾದ ಸಮಸ್ಯೆಯನ್ನು ಸುಲಭವಾಗಿ ತಡೆಯಬಹುದು. 

ಕಣ್ಣಿನಲ್ಲಿ ಕಾಣಿಸುವ ಮಧುಮೇಹದ ಲಕ್ಷಣಗಳು :
ಮಂದ ದೃಷ್ಟಿ :

 ಇದ್ದಕ್ಕಿದ್ದಂತೆ ದೃಷ್ಟಿ ಮಂದವಾದಂತೆ ಭಾಸವಾದರೆ,ದೃಷ್ಟಿ ಸರಿಯಾಗಿಲ್ಲ ಅನ್ನಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ.ಮಧುಮೇಹದ ಆರಂಭಿಕ ಹಂತಗಳಲ್ಲಿ,ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಬದಲಾವಣೆಯು ಕಣ್ಣುಗಳ ಮಸೂರದ ಊತವನ್ನು ಉಂಟುಮಾಡಬಹುದು.ಇದು ದೃಷ್ಟಿ ಮಂದವಾಗುವಂತೆ ಮಾಡುತ್ತದೆ. 

ಇದನ್ನೂ ಓದಿ : ಈ ಸಿಹಿ ಹಣ್ಣು ಮಧುಮೇಹಕ್ಕೆ ಮದ್ದು.. ಊಟದ ಮೊದಲು ತಿಂದರೆ ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ !

ಕಣ್ಣುಗಳಲ್ಲಿ ನೋವು  :
ಮಧುಮೇಹವು ಕಣ್ಣುಗಳಲ್ಲಿನ ನರಗಳ ಮೇಲೆ ಪರಿಣಾಮ ಬೀರುತ್ತದೆ.ಕಣ್ಣುಗಳಲ್ಲಿ ನೋವು ಅಥವಾ ಒತ್ತಡವನ್ನು ಉಂಟುಮಾಡುತ್ತದೆ.ಕಣ್ಣುಗಳಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಂಡರೆ ಎಚ್ಚರ ವಹಿಸಬೇಕು.ಸಮಯಕ್ಕೆ ಸರಿಯಾಗಿ  ಚಿಕಿತ್ಸೆ ನೀಡದಿದ್ದರೆ, ಸಮಸ್ಯೆ ಗಂಭೀರವಾಗಬಹುದು ಮತ್ತು ಗ್ಲುಕೋಮಾದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

ಕಣ್ಣುಗಳಲ್ಲಿ ಊತ : 
ಮಧುಮೇಹವು ಕಣ್ಣಿನ ಸುತ್ತ ಊತವನ್ನು ಉಂಟುಮಾಡಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಮತ್ತು ಕಣ್ಣುಗಳ ಜೀವಕೋಶಗಳ ಮೇಲೆ ಪರಿಣಾಮ ಬೀರಿದಾಗ ಈ ಊತ ಸಂಭವಿಸುತ್ತದೆ.ಕಣ್ಣುಗಳ ಸುತ್ತಲೂ ಊತ ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ.ಇದು ಮಧುಮೇಹದ ಆರಂಭಿಕ ಚಿಹ್ನೆಯಾಗಿರಬಹುದು. 

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್

ಇರುಳು ಕುರುಡು :
ರಾತ್ರಿ ವೇಳೆ ಅಥವಾ ಕಡಿಮೆ ಬೆಳಕಿನಲ್ಲಿ ನೋಡಲು ತೊಂದರೆಯಾಗುತ್ತಿದ್ದರೆ ಇದು  ಮಧುಮೇಹದ ಆರಂಭಿಕ ಲಕ್ಷಣವೂ ಆಗಿರಬಹುದು.ಮಧುಮೇಹ ಕಣ್ಣುಗಳ ನರಗಳ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ರಾತ್ರಿಯಲ್ಲಿ ದೃಷ್ಟಿ ದುರ್ಬಲವಾಗಬಹುದು. 

ದೃಷ್ಟಿಯಲ್ಲಿ ಹಠಾತ್ ಬದಲಾವಣೆ :
ಮಧುಮೇಹದಿಂದಲೂ ದೃಷ್ಟಿಯಲ್ಲಿ ಹಠಾತ್ ಬದಲಾವಣೆಗಳು ಸಂಭವಿಸಬಹುದು. ಈ ಬದಲಾವಣೆಗಳು ಅತ್ಯಂತ ವೇಗವಾಗಿ ಮತ್ತು ಕೆಲವೇ ದಿನಗಳಲ್ಲಿ ಗೋಚರಿಸಬಹುದು.ನಿಮ್ಮ ದೃಷ್ಟಿ ಹಠಾತ್ತನೆ ದುರ್ಬಲಗೊಂಡರೆ ಇದು ಮಧುಮೇಹದ ಗಂಭೀರ ಸಮಸ್ಯೆಯಾದ ಡಯಾಬಿಟಿಕ್ ರೆಟಿನೋಪತಿಯ ಸಂಕೇತವಾಗಿರಬಹುದು.

 

(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News