ಮುಚ್ಚಿಡಲು ಏನೂ ಇಲ್ಲ, ನಮ್ಮದು ಕಾನೂನು ಪಾಲಿಸುವ ಪಕ್ಷ : ಕಾಂಗ್ರೆಸ್

ನ್ಯಾಷನಲ್ ಹೆರಾಲ್ಡ್-ಎಜೆಎಲ್ ಡೀಲ್‌ಗೆ ಸಂಬಂಧಿಸಿದಂತೆ ಸೋಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಲಿದ್ದಾರೆ. 

Written by - Channabasava A Kashinakunti | Last Updated : Jun 8, 2022, 05:26 PM IST
  • ನಮ್ಮದು ಕಾನೂನು ಪಾಲಿಸುವ ಪಕ್ಷ
  • ನ್ಯಾಷನಲ್ ಹೆರಾಲ್ಡ್-ಎಜೆಎಲ್ ಡೀಲ್‌ಗೆ ಸಂಬಂಧಿಸಿದಂತೆ
  • ಸೋಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ
ಮುಚ್ಚಿಡಲು ಏನೂ ಇಲ್ಲ, ನಮ್ಮದು ಕಾನೂನು ಪಾಲಿಸುವ ಪಕ್ಷ : ಕಾಂಗ್ರೆಸ್ title=

ನವದೆಹಲಿ : ನಮ್ಮದು ಕಾನೂನು ಪಾಲಿಸುವ ಪಕ್ಷವಾಗಿದ್ದು, ಅದರ ನಾಯಕರಿಗೆ ಮುಚ್ಚಿಡಲು ಏನೂ ಇಲ್ಲ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. 

ನ್ಯಾಷನಲ್ ಹೆರಾಲ್ಡ್-ಎಜೆಎಲ್ ಡೀಲ್‌ಗೆ ಸಂಬಂಧಿಸಿದಂತೆ ಸೋಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಲಿದ್ದಾರೆ. 

ಇದನ್ನೂ ಓದಿ : JP Nadda : ಪಶ್ಚಿಮ ಬಂಗಾಳದ ವಂದೇ ಮಾತರಂ ಭವನ ಭೇಟಿ ನೀಡಿದ ಜೆಪಿ ನಡ್ಡಾ!

ಕೇಂದ್ರ ತನಿಖಾ ಸಂಸ್ಥೆಯಿಂದ "ತಮಗೆ ಮುಚ್ಚಿಡಲು ಏನೂ ಇಲ್ಲ" ಎಂದು ಅದರ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಇಡಿ ಮುಂದೆ ಹಾಜರಾಗುತ್ತಾರೆ ಮತ್ತು ಬಿಜೆಪಿ ಇದರಿಂದ ಪಾಠ ಕಲಿಯಬೇಕು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ಸೋನಿಯಾ ಗಾಂಧಿ ಅವರಿಗೆ ಕೊರೊನಾವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಅವರು ಏಜೆನ್ಸಿಯಿಂದ ಸಮಯ ಕೋರಿದ್ದರು. ಗುರುವಾರ ನೆಗೆಟಿವ್ ಟೆಸ್ಟ್ ಬಂದಿದೆ ಆದ್ರೆ, ಇನ್ನೂ ಚೇತರಿಸಿಕೊಂಡಿಲ್ಲ. 

ಜೂನ್ 13 ರಂದು ಇಡಿ ಮುಂದೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ತಿಳಿಸಲಾಗಿದ್ದು, ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಈ ಹಿಂದೆ ಜೂನ್ 2 ರಂದು ಅವರಿಗೆ ಸಮನ್ಸ್ ನೀಡಲಾಗಿತ್ತು ಆದರೆ ಆ ಸಮಯದಲ್ಲಿ ಅವರು ವಿದೇಶದಲ್ಲಿದ್ದ ಕಾರಣ ಸಮಯ ಕೋರಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ನಮ್ಮದು ಕಾನೂನು ಪಾಲಿಸುವ ಪಕ್ಷ, ನಾವು ನಿಯಮಗಳನ್ನು ಅನುಸರಿಸುತ್ತೇವೆ. ಆದ್ದರಿಂದ, ಅವರನ್ನು ಕರೆದರೆ, ಅವರು ಹೋಗುತ್ತಾರೆ, ನಾವು ಮುಚ್ಚಿಡಲು ಏನೂ ಇಲ್ಲ". ನಾವು ಅವರಂತಲ್ಲ, 2002ರಿಂದ 2013ರವರೆಗೆ ಅಮಿತ್ ಶಾ ಓಡಾಡುತ್ತಿದ್ದಾಗ ನಮಗೆ ನೆನಪಿದೆ ಎಂದರು. "ಸತ್ಯದ ಮಾರ್ಗವನ್ನು ಅನುಸರಿಸುವ ಜನರು ಎಂತಹವರು ಎಂಬುದರ ಕುರಿತು ಅವರು ನಮ್ಮಿಂದ ಕೆಲವು ಪಾಠಗಳನ್ನು ಕಲಿಯುತ್ತಾರೆ. ಅವರು ನಮ್ಮಿಂದ ಕಲಿಯಬೇಕು" ಎಂದು ಹೇಳಿದರು.

ಕೇಂದ್ರ ದೆಹಲಿಯಲ್ಲಿರುವ ತನಿಖಾ ಸಂಸ್ಥೆಯ ಪ್ರಧಾನ ಕಚೇರಿಗೆ ಸೋಮವಾರ ರಾಹುಲ್ ಗಾಂಧಿ ಹಾಜರಾಗುವ ಮೂಲಕ ಕಾಂಗ್ರೆಸ್ ಇದನ್ನು ದೊಡ್ಡ ಕಾರ್ಯಕ್ರಮವನ್ನಾಗಿ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : Cabinet Decision: ದೇಶದ ಲಕ್ಷಾಂತರ ಅನ್ನದಾತರಿಗೊಂದು ಭಾರಿ ಸಂತಸದ ಸುದ್ದಿ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News