ನ್ಯಾಯಾಲಯದ ಆವರಣದಲ್ಲಿಯೇ ಗುಂಡಿಟ್ಟು ವಕೀಲನ ಬರ್ಬರ ಹತ್ಯೆ..!

ವರದಿಗಳ ಪ್ರಕಾರ ನಿನ್ನೆ ರಾತ್ರಿ(ಅ.17) 11.45ರ ಸುಮಾರಿಗೆ ಶಹಜಾನ್‌ಪುರದ ಸಿವಿಲ್ ಕೋರ್ಟ್‌ನ 3ನೇ ಮಹಡಿಯಲ್ಲಿರುವ ಎಸಿಜೆಎಂ ಕಚೇರಿಯಲ್ಲಿ ಘಟನೆ ನಡೆದಿದೆ.

Written by - Puttaraj K Alur | Last Updated : Oct 18, 2021, 04:48 PM IST
  • ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲರಿಗೆ ಗುಂಡಿಟ್ಟು ಹತ್ಯೆ
  • ಉತ್ತರ ಪ್ರದೇಶದ ಶಹಜಾನ್‌ಪುರದ ಸಿವಿಲ್ ಕೋರ್ಟ್‌ನಲ್ಲಿ ಘಟನೆ
  • ನಾಡ ಪಿಸ್ತೂಲ್ ವಶಕ್ಕೆ ಪಡೆದಿರುವ ಉತ್ತರಪ್ರದೇಶ ಪೊಲೀಸರಿಂದ ತನಿಖೆ
ನ್ಯಾಯಾಲಯದ ಆವರಣದಲ್ಲಿಯೇ ಗುಂಡಿಟ್ಟು ವಕೀಲನ ಬರ್ಬರ ಹತ್ಯೆ..!   title=
ನ್ಯಾಯಾಲಯದ ಸಂಕೀರ್ಣದಲ್ಲಿಗುಂಡಿಕ್ಕಿ ವಕೀಲರ ಹತ್ಯೆ

ಶಹಜಾನ್‌ಪುರ್: ಜಿಲ್ಲಾ ನ್ಯಾಯಾಲಯದ ಸಂಕೀರ್ಣದ(District Court Complex)ಲ್ಲಿಯೇ ವಕೀಲರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಶಹಜಾನ್‌ಪುರದಲ್ಲಿ ನಡೆದಿದೆ. ವಕೀಲರ ಹತ್ಯೆಗೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. 

ವರದಿಗಳ ಪ್ರಕಾರ ನಿನ್ನೆ ರಾತ್ರಿ(ಅ.17) 11.45ರ ಸುಮಾರಿಗೆ ಶಹಜಾನ್‌ಪುರದ ಸಿವಿಲ್ ಕೋರ್ಟ್‌(Shahjahanpur Civil Court)ನ 3ನೇ ಮಹಡಿಯಲ್ಲಿರುವ ಎಸಿಜೆಎಂ ಕಚೇರಿಯಲ್ಲಿ ಘಟನೆ ನಡೆದಿದ್ದು, ವಕೀಲ ಭೂಪೆಂದ್ರ ಪ್ರತಾಪ್ ಸಿಂಗ್ ಎನ್ನುವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮೃತದೇಹದ ಬಳಿ ದೇಶೀಯವಾಗಿ ತಯಾರಿಸಲಾಗಿರುವ ನಾಡ ಪಿಸ್ತೂಲ್‌ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.  

ಇದನ್ನೂ ಓದಿ: ಪೊಲೀಸ್ ದೌರ್ಜನ್ಯಕ್ಕೆ ಬೇಸತ್ತು ಶ್ರೀರಾಮನ ಬಳಿ ನ್ಯಾಯ ಕೇಳಲು ಹೋದ ವ್ಯಕ್ತಿ..!

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು(UP Police) ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.  ಘಟನೆ ನಡೆದಾಗ ಕಚೇರಿಯಲ್ಲಿ ಯಾರೂ ಇರಲಿಲ್ಲ. ಮಾಹಿತಿ ಬಂದ ತಕ್ಷಣ ಎಸ್ಪಿ ಎಸ್.ಆನಂದ್, ಡಿಎಂ ಇಂದರ್ ವಿಕ್ರಮ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಪೊಲೀಸರು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಹುಡುಕುತ್ತಿದ್ದಾರೆ.

‘ವಕೀಲರ ಕೊಲೆ(Lawyer Shot Dead)ಗೆ ನಿಖರ ಕಾರಣ ತಿಳಿದುಬಂದಿಲ್ಲ. ದ್ವೇಷ ಸಾಧನೆಗೆ ಈ ಕೊಲೆ ನಡೆದಿದೆ ಎಂಬ ಅನುಮಾನ ಮೂಡಿದೆ. ಘಟನೆ ನಡೆದ ಸ್ಥಳದಿಂದ ನಾಡ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.  

ಇದನ್ನೂ ಓದಿ: VIDEO: ಸೂರತ್ ನ ವಿವಾ ಪ್ಯಾಕೆಜಿಂಗ್ ಕಂಪನಿಯಲ್ಲಿ ಅಗ್ನಿ ಅವಘಡ, 5ನೇ ಮಹಡಿಯಿಂದ ಕೆಳಕ್ಕೆ ಜಿಗಿದ ಜನ

ಇತ್ತೀಚೆಗಷ್ಟೇ ದೆಹಲಿಯ ರೋಹಿಣಿಯ ನ್ಯಾಯಾಲಯ(District Court Rohini)ದಲ್ಲಿ ದುಷ್ಕರ್ಮಿಗಳು ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ನ್ಯಾಯಾಲಯಗಳ ಆವರಣಗಳಲ್ಲಿಯೇ ಇಂತಹ ಘಟನೆಗಳು ನಡೆದಿರುವುದಕ್ಕೆ ದೆಹಲಿ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News