ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಕವಿ ಅಕ್ಕಿತಾಮ್ ಅಚುತನ್ ನಂಬೂತಿರಿ ಇನ್ನಿಲ್ಲ

ಜ್ಞಾನಪೀಠ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ಕವಿ ಅಕ್ಕಿತಾಮ್ ಅಚುತನ್ ನಂಬೂತಿರಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

Last Updated : Oct 15, 2020, 12:52 PM IST
ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಕವಿ ಅಕ್ಕಿತಾಮ್ ಅಚುತನ್ ನಂಬೂತಿರಿ ಇನ್ನಿಲ್ಲ  title=

ನವದೆಹಲಿ: ಜ್ಞಾನಪೀಠ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ಕವಿ ಅಕ್ಕಿತಾಮ್ ಅಚುತನ್ ನಂಬೂತಿರಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾದ ಅಕ್ಕಿತಾಮ್ ಬೆಳಿಗ್ಗೆ 8.10 ಕ್ಕೆ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ಪಾಲಕ್ಕಾಡ್ ಜಿಲ್ಲೆಯ ಕುಮಾರನಲ್ಲೂರಿನಲ್ಲಿರುವ ಅವರ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

ಮಲಯಾಳಂ ಕಾವ್ಯದಲ್ಲಿ ಆಧುನಿಕತಾವಾದವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕವಿ ನಿಜವಾದ ಗಾಂಧಿವಾದಿ, ಸಾಮಾಜಿಕ ಸುಧಾರಕ, ಪತ್ರಕರ್ತ ಮತ್ತು ಸರಳತೆಗೆ ಉದಾಹರಣೆಯಾಗಿದ್ದರು.

Trending News