/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಕೆಲವರಿಗೆ ಮಹಿಳೆಯರು,ಎಸ್ಸಿ,ಎಸ್ಟಿ ಜನರು ಸಚಿವರಾಗುವುದು ಸಹಿಸಲಾಗುತ್ತಿಲ್ಲ-ಪ್ರಧಾನಿ ಮೋದಿ

ಸಂಸತ್ತಿನಲ್ಲಿ ಪ್ರತಿಪಕ್ಷದ ಗಲಾಟೆ ನಡುವೆ ಈಗ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ಮೋದಿ ಕೆಲವರಿಗೆ ಹೆಚ್ಚಿನ ಮಹಿಳೆಯರು,ಎಸ್‌ಸಿ ಮತ್ತು ಎಸ್‌ಟಿಗಳು ಸಚಿವರಾಗುತ್ತಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

Last Updated : Jul 19, 2021, 10:13 PM IST
  • ಸಂಸತ್ತಿನಲ್ಲಿ ಪ್ರತಿಪಕ್ಷದ ಗಲಾಟೆ ನಡುವೆ ಈಗ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ಮೋದಿ ಕೆಲವರಿಗೆ ಹೆಚ್ಚಿನ ಮಹಿಳೆಯರು,ಎಸ್‌ಸಿ ಮತ್ತು ಎಸ್‌ಟಿಗಳು ಸಚಿವರಾಗುತ್ತಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
  • 'ಕೆಲವು ಜನರು ಮಹಿಳೆಯರನ್ನು ಮಂತ್ರಿಗಳಾಗಿ ನೋಡುವುದರಲ್ಲಿ ನೋವು ಅನುಭವಿಸುತ್ತಾರೆ ಮತ್ತು ಮಂತ್ರಿಗಳಾಗಿ ಅವರ ಪರಿಚಯವನ್ನು ಅನುಮತಿಸಲು ಸಿದ್ಧರಿಲ್ಲ" ಎಂದು ಅವರು ಹೇಳಿದರು.
ಕೆಲವರಿಗೆ ಮಹಿಳೆಯರು,ಎಸ್ಸಿ,ಎಸ್ಟಿ ಜನರು ಸಚಿವರಾಗುವುದು ಸಹಿಸಲಾಗುತ್ತಿಲ್ಲ-ಪ್ರಧಾನಿ ಮೋದಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷದ ಗಲಾಟೆ ನಡುವೆ ಈಗ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ಮೋದಿ ಕೆಲವರಿಗೆ ಹೆಚ್ಚಿನ ಮಹಿಳೆಯರು,ಎಸ್‌ಸಿ ಮತ್ತು ಎಸ್‌ಟಿಗಳು ಸಚಿವರಾಗುತ್ತಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ಸಂಸತ್ತಿನ ಮಾನ್ಸೂನ್ ಅಧಿವೇಶನದ ಮೊದಲ ದಿನ ಪ್ರಧಾನಿ ಮೋದಿ (Narendra Modi) ಮಾತನಾಡಿ 'ಹಲವಾರು ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಹಲವಾರು ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಎಲ್ಲರಿಗೂ ಹೆಮ್ಮೆ ಪಡಬೇಕು ಎಂದು ಹೇಳಿದರು.

'ಹಲವಾರು ಹೊಸ ಮಂತ್ರಿಗಳು ರೈತರ ಮಕ್ಕಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರು.ಹೆಚ್ಚಿನ ಮಹಿಳೆಯರು, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ಸದಸ್ಯರು ಮಂತ್ರಿಗಳಾಗುತ್ತಿದ್ದಾರೆ ಎಂದು ಕೆಲವರು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ- 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು

ರೈತರ ಮಕ್ಕಳು ಇಂದು ಮಂತ್ರಿಗಳಾಗುತ್ತಿರುವುದನ್ನು ನೋಡಿ ಕೆಲವರು ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದರು."ಆದಿವಾಸಿಗಳು / ದಲಿತರ ಬಗ್ಗೆ ಕೆಲವು ಜನರಿಗೆ ಯಾವ ರೀತಿಯ ದ್ವೇಷವಿದೆ, ಅಂತಹ ಸಮುದಾಯಗಳ ಮಂತ್ರಿಗಳನ್ನು ಈ ಸದನದಲ್ಲಿ ಪರಿಚಯಿಸಲು ಅವರು ಅನುಮತಿಸುವುದಿಲ್ಲ" ಎಂದು ಪ್ರಧಾನಿ ಮೋದಿ ಪ್ರತಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಕೆಲವು ಜನರು ಮಹಿಳೆಯರನ್ನು ಮಂತ್ರಿಗಳಾಗಿ ನೋಡುವುದರಲ್ಲಿ ನೋವು ಅನುಭವಿಸುತ್ತಾರೆ ಮತ್ತು ಮಂತ್ರಿಗಳಾಗಿ ಅವರನ್ನು ಪರಿಚಯಿಸಲು ಅನುಮತಿಸುತ್ತಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ

ಕ್ಯಾಬಿನೆಟ್ ಮಂತ್ರಿಗಳಾಗಿ ಒಟ್ಟು 15 ನಾಯಕರು ಪ್ರಮಾಣವಚನ ಸ್ವೀಕರಿಸಿದರು ಮತ್ತು 28 ನಾಯಕರು ಜುಲೈ 7 ರಂದು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು, ಅದರಲ್ಲಿ 27 ಮಂತ್ರಿಗಳು ಒಬಿಸಿ ಸಮುದಾಯಕ್ಕೆ ಸೇರಿದವರು. ಇದು ಕೇಂದ್ರ ಸರ್ಕಾರದಲ್ಲಿ ದಾಖಲೆಯ ಒಬಿಸಿ ಮಂತ್ರಿಗಳ ಸಂಖ್ಯೆ ಎಂದು ವರದಿಯಾಗಿದೆ.

ಕ್ಯಾಬಿನೆಟ್ ವಿಸ್ತರಣೆಯ ನಂತರ, ದಲಿತ ಸಮುದಾಯವು ಸರ್ಕಾರದಲ್ಲಿ 12 ಮಂತ್ರಿಗಳ ದಾಖಲೆಯನ್ನು ಹೊಂದಿದೆ ಮತ್ತು ಪರಿಶಿಷ್ಟ ಪಂಗಡದ ಮಂತ್ರಿಗಳ ಸಂಖ್ಯೆ ಈಗ 8 ಕ್ಕೆ ಏರಿದೆ, ಇದು ಇಲ್ಲಿಯವರೆಗೆ ಯಾವುದೇ ಸರ್ಕಾರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿದೆ ಎಂದು ವರದಿಯಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರ ಸಂಖ್ಯೆಯೂ 11 ಕ್ಕೆ ಏರಿದೆ.

ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಏತನ್ಮಧ್ಯೆ, ವಿರೋಧ ಪಕ್ಷದ ಸದಸ್ಯರು ನಿರಂತರವಾಗಿ ಅಡ್ಡಿಪಡಿಸಿದ ಮಧ್ಯೆ ಲೋಕಸಭೆ ಮತ್ತು ರಾಜ್ಯಸಭಾ ಪ್ರಕ್ರಿಯೆಯನ್ನು ಕೆಲವು ಗಂಟೆಗಳ ಕಾಲ ಮುಂದೂಡಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.