Super Hit Government Scheme: ಯಾವುದೇ ಪ್ರೀಮಿಯಂ ಪಾವತಿಸದೇ ಪಡೆಯಿರಿ 75000 ಹಾಗೂ ಮಕ್ಕಳ ಸ್ಕಾಲರ್ಷಿಪ್, ಈ ಯೋಜನೆಗೆ ತಕ್ಷಣ ಅಪ್ಲೈ ಮಾಡಿ

Aam Aadmi Bima Yojana: ಈ ಯೋಜನೆಯು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದು ಪ್ರಮುಖವಾಗಿ ಗ್ರಾಮೀಣ ಭೂರಹಿತ ಕುಟುಂಬಗಳಿಗೆ ಹೇಳಿ ಮಾಡಿಸಿದ ಸ್ಕೀಮ್ (Aam Aadmi Bima Yojana Scheme) ಆಗಿದೆ . ಮನೆಯ ಯಜಮಾನ ಅಕಾಲಿಕ ಮರಣ ಹೊಂದಿದ ಕುಟುಂಬಗಳಿಗೆ ಈ ಯೋಜನೆಯು ಹಣಕಾಸಿನ ನೆರವು ಒದಗಿಸುತ್ತದೆ.

Written by - Nitin Tabib | Last Updated : Sep 26, 2021, 05:36 PM IST
  • ಭೂರಹಿತ ಗ್ರಾಮೀಣರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿದೆ ಈ ಅದ್ಭುತ ಯೋಜನೆ.
  • ಇದರಲ್ಲಿ ನೀವು ಯಾವುದೇ ರೀತಿಯ ಪ್ರಿಮಿಯಂ ಇಲ್ಲದೆ 75000 ಪಡೆಯಬಹುದು.
  • ಇದಲ್ಲದೆ ಮಕ್ಕಳಿಗೆ ಸ್ಕಾಲರ್ಶಿಪ್ ಕೂಡ ಸಿಗುತ್ತದೆ.
Super Hit Government Scheme: ಯಾವುದೇ ಪ್ರೀಮಿಯಂ ಪಾವತಿಸದೇ ಪಡೆಯಿರಿ 75000 ಹಾಗೂ ಮಕ್ಕಳ ಸ್ಕಾಲರ್ಷಿಪ್, ಈ ಯೋಜನೆಗೆ ತಕ್ಷಣ ಅಪ್ಲೈ ಮಾಡಿ title=
Super Hit Government Scheme (File Photo)

ನವದೆಹಲಿ: Aam Aadmi Bima Yojana - ಸರ್ಕಾರವು ಗ್ರಾಮೀಣ ಭೂರಹಿತ ಕುಟುಂಬಗಳಿಗೆ ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಲೇ ಇದೆ. ಈ ಅನುಕ್ರಮದಲ್ಲಿ, ಕೇಂದ್ರ ಸರ್ಕಾರವು LIC ನಡೆಸುತ್ತಿರುವ ಆಮ್ ಆದ್ಮಿ ಬಿಮಾ ಯೋಜನೆಯನ್ನು ಆರಂಭಿಸಿದೆ. ಇದು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದು ಗ್ರಾಮೀಣ ಭೂರಹಿತ ಕುಟುಂಬಗಳ ಸಹಾಯಕ್ಕಾಗಿ. ಗ್ರಾಮೀಣ ಭೂಹೀನ ಕುಟುಂಬದ ಮುಖ್ಯಸ್ಥರು ಅಕಾಲಿಕವಾಗಿ ಮರಣ ಹೊಂದಿದರೆ ಮತ್ತು ಕುಟುಂಬವು ತುಂಬಾ ತೊಂದರೆಯಲ್ಲಿದ್ದರೆ, ಅವರಿಗೆ ಈ ಯೋಜನೆಯಡಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಯಾರಿಗೆ ಈ ಯೋಜನೆಯ ಲಾಭ ಸಿಗುತ್ತದೆ? (AABY)
ಈ ಯೋಜನೆಯ ಲಾಭ ಪಡೆಯಲು, ಅರ್ಜಿದಾರರ ವಯಸ್ಸು 18-59 ವರ್ಷಗಳ ನಡುವೆ ಇರಬೇಕು. ಇದರ ಹೊರತಾಗಿ, ಕುಟುಂಬದ ಮುಖ್ಯಸ್ಥರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಬಿಪಿಎಲ್ ಕುಟುಂಬದ ಗಳಿಸುವ ಸದಸ್ಯರು ಈ ಯೋಜನೆಯ ಲಾಭ ಪಡೆಯಬಹುದು.

ಈ ಯೋಜನೆಯ ಲಾಭಗಳೇನು? (Aam Aadmi Bima Yojana Benefits)
ಈ ಯೋಜನೆಯ ಅಡಿ ಲಾಭಾರ್ಥಿಗಳಿಗೆ ಒಟ್ಟು 5 ಲಾಭಗಳು ಸಿಗುತ್ತವೆ
1. ಅರ್ಜಿದಾರರು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದರೆ, ಈ ಯೋಜನೆಯಡಿ ಅವರ ಕುಟುಂಬಕ್ಕೆ 30,000 ರೂ. ಸಿಗುತ್ತದೆ.
2. ಯೋಜನೆಯನ್ನು ತೆಗೆದುಕೊಳ್ಳುವ ವ್ಯಕ್ತಿಯು ಅಪಘಾತದಿಂದ ಸಾವನ್ನಪ್ಪಿದರೆ, ಆತನ ನಾಮಿನಿಗೆ 75,000 ರೂ. ಸಿಗುತ್ತದೆ.
3. ಕುಟುಂಬದ ಮುಖ್ಯಸ್ಥರು ಅಪಘಾತದಲ್ಲಿ ದೈಹಿಕ ಅಂಗವಿಕಲರಾದರೆ, ಅವರಿಗೆ 75,000 ರೂ. ಲಭಿಸುತ್ತದೆ. 
4. ಯೋಜನೆಯನ್ನು ತೆಗೆದುಕೊಳ್ಳುವ ವ್ಯಕ್ತಿಯು ಮಾನಸಿಕ ವಿಕಲಚೇತನನಾಗಿದ್ದರೆ, ಅವನು 37,500 ರೂ. ಲಭಿಸುತ್ತದೆ.
5. ಐದನೇ ಲಾಭದಡಿಯಲ್ಲಿ, ಯೋಜನೆ ತೆಗೆದುಕೊಳ್ಳುವವರು ಸತ್ತರೆ, ಕುಟುಂಬದ ಇಬ್ಬರು ಮಕ್ಕಳಿಗೆ 9 ನೇ ತರಗತಿಯಿಂದ 12 ನೇ ತರಗತಿಯವರೆಗೆ ಪ್ರತಿ ತಿಂಗಳು 100 ರೂ. ಶಿಷ್ಯ ವೇತನ ಸಿಗುತ್ತದೆ.

ಯಾವುದೇ ಪ್ರೀಮಿಯಂ ನೀಡಬೇಕಾಗಿಲ್ಲ (Excellent Government Scheme)
ಈ ಯೋಜನೆಯ ಅತಿ ದೊಡ್ಡ  ವೈಶಿಷ್ಟ್ಯ ಎಂದರೆ, ಈ ಯೋಜನೆಯ ಪ್ರಿಮಿಯಂ ರೂ.200. ಇದರಲ್ಲಿ ಶೇ.50ರಷ್ಟು ಪ್ರಿಮಿಯಂ ಕೇಂದ್ರ ಸರ್ಕಾರ ನೀಡಿದರೆ, ಉಳಿದ ಶೇ.50ರಷ್ಟು ಪ್ರಿಮಿಯಂ ರಾಜ್ಯ ಸರ್ಕಾರ ನೀಡುತ್ತದೆ. ಒಟ್ಟಾರೆ ಹೇಳುವುದಾದರೆ ಯಾವುದೇ ಓರ್ವ ವ್ಯಕ್ತಿ ಈ ಯೋಜನೆಯ ಲಾಭವನ್ನು ಯಾವುದೇ ರೀತಿಯ ಪ್ರಿಮಿಯಂ ಪಾವತಿಸಲಿ ಪಡೆಯಬಹುದು.

ಅಗತ್ಯ ದಾಖಲೆಗಳು
ಈ ಯೋಜನೆಯ ಲಾಭ ಪಡೆಯಲು, ನೀವು 5 ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಪಡಿತರ ಚೀಟಿ, ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಸಲ್ಲಿಸುವ ಮೂಲಕ ನೀವು ಈ ಯೋಜನೆಗೆ ಸೇರಬಹುದು.

ಇದನ್ನೂ ಓದಿ-Gold Hallmarking Big Update: ಹಬ್ಬಗಳು ಆರಂಭವಾಗುವುದಕ್ಕು ಮುನ್ನ ಗೋಲ್ಡ್ ಹಾಲಮಾರ್ಕಿಂಗ್ ಕುರಿತು ಬಿಗ್ ಅಪ್ಡೇಟ್ ಪ್ರಕಟ

ಈ ರೀತಿ ಕ್ಲೇಮ್ ಮಾಡಿ
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ, ಕ್ಲೇಮ್ ಅನ್ನು  NEFT ಮೂಲಕ ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುತ್ತದೆ. NEFT ಸೌಲಭ್ಯ ಇಲ್ಲದಿದ್ದರೆ, ಯಾವುದೇ ಅಧಿಕಾರಿಯ ಅನುಮೋದನೆಯ ನಂತರ, ಕ್ಲೇಮ್ ಮೊತ್ತವನ್ನು ಫಲಾನುಭವಿಯ ಖಾತೆಗೆ ಕಳುಹಿಸಲಾಗುತ್ತದೆ. ಅಪಘಾತದ ಸಂದರ್ಭದಲ್ಲಿ ಹಣಕಾಸಿನ ನೆರವು ಪಡೆಯುತ್ತಿರುವಾಗ ಫಲಾನುಭವಿಯು ಸ್ವತಃ ಯೋಜನೆಯನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಿರಬಹುದು. ಇದೇ ವೇಳೆ ಯೋಜನೆಯ ಚಂದಾದಾರರು ಮೃತಪಟ್ಟರೆ, ನಂತರ LIC ಯಿಂದ ಆತನ ನಾಮಿನೇಟ್ ಖಾತೆಗೆ ಹಣವನ್ನು ಕಳುಹಿಸಲಾಗುತ್ತದೆ.

ಇದನ್ನೂ ಓದಿ-ಫ್ಲಿಪ್‌ಕಾರ್ಟ್‌ Big Billion Days ಜೊತೆಗೆ Amazon ಪೈಪೋಟಿ : ಸೆಲ್ ದಿನಾಂಕ ಬದಲಾವಣೆ, ಮತ್ತಷ್ಟು ಡಿಸ್ಕೌಂಟ್!

ಗಮನಿಸಬೇಕಾದ ಸಂಗತಿಯೆಂದರೆ, ಸರ್ಕಾರದ ಈ ಅದ್ಭುತ ಯೋಜನೆಯ ಅಡಿಯಲ್ಲಿ, ಅಂಗವೈಕಲ್ಯದ ಸಂದರ್ಭದಲ್ಲಿ, ವಿಮಾದಾರನು ಸ್ವತಃ ಹಕ್ಕು ಸಾಧಿಸುತ್ತಾನೆ. ಇದಕ್ಕಾಗಿ, ಅವರು ಕ್ಲೈಮ್ ಫಾರ್ಮ್ ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಮತ್ತು ಮುಖ್ಯವಾಗಿ, ಎಲ್‌ಐಸಿ ಆಮ್ ಆದ್ಮಿ ಬಿಮಾ ಯೋಜನೆಯಡಿ ವಿಮಾದಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ. ವಿದ್ಯಾರ್ಥಿವೇತನದ ಮೊತ್ತವು ತಿಂಗಳಿಗೆ 100 ರೂ. ಈ ವಿದ್ಯಾರ್ಥಿವೇತನವನ್ನು 6 ತಿಂಗಳ ಮಧ್ಯಂತರದಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ-Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News