"ಮೋದಿ ಕಳ್ಳ" ಎಂದಿದ್ದೇ ತಡ ಕಳ್ಳ ಮೋದಿಗಳೆಲ್ಲ ಬಿಲದಿಂದ ಹೊರಬರುತ್ತಿವೆ!: ಕಾಂಗ್ರೆಸ್

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮೋದಿ ಕಳ್ಳ’ ಎಂದಿದ್ದೇ ತಡ ಕಳ್ಳ ಮೋದಿಗಳೆಲ್ಲ ಬಿಲದಿಂದ ಹೊರಬರುತ್ತಿವೆ! ಈ ಕಳ್ಳ ಮೋದಿಗೂ ಬಿಜೆಪಿಗೂ ಅದೇನು ಅವಿನಾಭಾವ ಸಂಬಂಧ?!’ ಎಂದು ಪ್ರಶ್ನಿಸಿದೆ.

Written by - Puttaraj K Alur | Last Updated : Mar 30, 2023, 05:00 PM IST
  • ಮೋದಿ ಕಳ್ಳ ಎಂದಿದ್ದೇ ತಡ ಕಳ್ಳ ಮೋದಿಗಳೆಲ್ಲ ಬಿಲದಿಂದ ಹೊರಬರುತ್ತಿವೆ!
  • ಕರ್ನಾಟಕದ ಬಿಜೆಪಿ ನಾಯಕರಿಂದ ಪ್ರೇರಣೆ ಪಡೆದು ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಪೋರ್ನ್ ವೀಕ್ಷಿಸಿದ್ದಾರೆ
  • ಅಶ್ಲೀಲ ಸಿಡಿಗೂ ಬಿಜೆಪಿಗೂ ಏನು ಈ ಬಾಂಧವ್ಯ, ಏನು ಈ ಸಂಬಂಧ! ಎಂದು ಕಾಂಗ್ರೆಸ್ ಪ್ರಶ್ನೆ
"ಮೋದಿ ಕಳ್ಳ" ಎಂದಿದ್ದೇ ತಡ ಕಳ್ಳ ಮೋದಿಗಳೆಲ್ಲ ಬಿಲದಿಂದ ಹೊರಬರುತ್ತಿವೆ!: ಕಾಂಗ್ರೆಸ್ title=
ಲಲಿತ್ ಮೋದಿಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮೋದಿ ಕಳ್ಳ’ ಎಂದಿದ್ದೇ ತಡ ಕಳ್ಳ ಮೋದಿಗಳೆಲ್ಲ ಬಿಲದಿಂದ ಹೊರಬರುತ್ತಿವೆ! ಈ ಕಳ್ಳ ಮೋದಿಗೂ ಬಿಜೆಪಿಗೂ ಅದೇನು ಅವಿನಾಭಾವ ಸಂಬಂಧ?!’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಬಿಜೆಪಿಗೆ ಬಿಸಿ ತುಪ್ಪವಾದ ಒಳಮೀಸಲಾತಿ ಅಸ್ತ್ರ

ಅಶ್ಲೀಲ ಸಿಡಿಗೂ ಬಿಜೆಪಿಗೂ ಏನು ಸಂಬಂಧ?

‘ಅಶ್ಲೀಲ ಚಿತ್ರ ಮಾಡುವವರೂ ಬಿಜೆಪಿಗರೇ, ನೋಡುವವರೂ ಬಿಜೆಪಿಗರೇ! ಕರ್ನಾಟಕದ ಬಿಜೆಪಿ ನಾಯಕರಿಂದ ಪ್ರೇರಣೆ ಪಡೆದು ತ್ರಿಪುರಾ ವಿಧಾನಸಭೆಯಲ್ಲೂ ಬಿಜೆಪಿ ಶಾಸಕರೊಬ್ಬರು ಪೋರ್ನ್ ವೀಕ್ಷಣೆ ಮಾಡಿದ್ದಾರೆ. ಆ ಮಟ್ಟಿಗೆ ಬಿಜೆಪಿ ದೇಶಕ್ಕೆ ಮಾದರಿಯಾಗಿದೆ! ಅಶ್ಲೀಲ ಸಿಡಿಗೂ ಬಿಜೆಪಿಗೂ ಏನು ಈ ಬಾಂಧವ್ಯ, ಏನು ಈ ಸಂಬಂಧ!’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ಕಾರ್ಯಕರ್ತರಿಗೇ ಅಸಹ್ಯ ಹುಟ್ಟಿದೆ

‘ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿಸಿದ ಬಿಜೆಪಿ ಕಾರ್ಯಕರ್ತರೇ ಈಗ ಚುನಾವಣೆಯಲ್ಲಿ ಬಿಜೆಪಿಯ ಬುಡ ಅಲ್ಲಾಡಿಸುತ್ತಾರೆ. #40PercentSarkaraದ ಮೇಲೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ಅಸಹ್ಯ ಹುಟ್ಟಿದೆ. ಹಲವು ಬಿಜೆಪಿ ಶಾಸಕರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದು, Go back ಎನ್ನುತ್ತಿರುವುದೇ ಇದಕ್ಕೆ ಉದಾಹರಣೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: BSY ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ "ಸಂತೋಷ ಕೂಟ"ದ ಕೈವಾಡ: ಕಾಂಗ್ರೆಸ್

‘ಆರ್.ಅಶೋಕ್ ಅವರಿಗೆ - Go back, ವಿ.ಸೊಮ್ಮಣ್ಣರಿಗೆ - Go back, ಅರುಣ್ ಸೋಮಣ್ಣರಿಗೆ - Go back, ನಳೀನ್ ಕುಮಾರ್ ಕಟೀಲರಿಗೆ - Go back ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರರ ಮನೆ ಮೇಲೆ ದಾಳಿ. ಇದು ಬಿಜೆಪಿ ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ತೋರಿದ ಪ್ರೀತಿಯ ನಿದರ್ಶನಗಳು. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅದರ ಕಾರ್ಯಕರ್ತರೇ ಒದ್ದೋಡಿಸುತ್ತಾರೆ!’ ಎಂದು ಕಾಂಗ್ರೆಸ್ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News