ಎರಡು ಕುಟುಂಬದ ಅಧಿಕಾರಕ್ಕೆ  ಬ್ರೇಕ್: ಹನೂರಲ್ಲಿ ಜೆಡಿಎಸ್ ಕಮಾಲ್ 

ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂರು ಕೈ ಪಾಲಾದರೇ ಹನೂರಲ್ಲಿ ಮಾತ್ರ ತೆನೆ ಹೊತ್ತ ಮಹಿಳೆಯನ್ನು ‌ಈ ಬಾರಿ ಬೆಂಬಲಿಸಿದ್ದಾನೆ.‌ ಜೊತೆಗೆ, 2 ಕುಟುಂಬಗಳ ನಡುವೆ ಅಷ್ಟೇ ಇದ್ದ ಅಧಿಕಾರಕ್ಕೆ ಬ್ರೇಕ್ ಬಿದ್ದಿದೆ.

Written by - Zee Kannada News Desk | Last Updated : May 13, 2023, 05:13 PM IST
  • ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರವಾದ " ಜನ ಸಂಕಲ್ಪ ಯಾತ್ರೆ"ಯೂ ರಾಜ್ಯದಲ್ಲಿ ಹನೂರು ತಾಲೂಕಿನಿಂದಲೇ ಆರಂಭಗೊಂಡಿತ್ತು‌.
  • ಜೆ.ಪಿ‌.ನಡ್ಡಾ, ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಸುದೀಪ್ ಹನೂರಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.
  • ಪ್ರಜಾ ಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ, ಡಿಕೆಶಿ ಬಂದಿದ್ದರೇ ಚುನಾವಣೆ ಹೊತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಬೃಹತ್ ಸಮಾವೇಶ ನಡೆಸಿದ್ದರು.
ಎರಡು ಕುಟುಂಬದ ಅಧಿಕಾರಕ್ಕೆ  ಬ್ರೇಕ್: ಹನೂರಲ್ಲಿ ಜೆಡಿಎಸ್ ಕಮಾಲ್  title=

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂರು ಕೈ ಪಾಲಾದರೇ ಹನೂರಲ್ಲಿ ಮಾತ್ರ ತೆನೆ ಹೊತ್ತ ಮಹಿಳೆಯನ್ನು ‌ಈ ಬಾರಿ ಬೆಂಬಲಿಸಿದ್ದಾನೆ.‌ ಜೊತೆಗೆ, 2 ಕುಟುಂಬಗಳ ನಡುವೆ ಅಷ್ಟೇ ಇದ್ದ ಅಧಿಕಾರಕ್ಕೆ ಬ್ರೇಕ್ ಬಿದ್ದಿದೆ.

ಹೌದು..., ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ನಾಗಪ್ಪ ಕುಟುಂಬ ಹಾಗೂ ಕಾಂಗ್ರೆಸ್ ನ ರಾಜೂಗೌಡ ಕುಟುಂಬದ ನಡುವೆಯಷ್ಟೇ ಹಂಚಿಕೆಯಾಗುತ್ತಿದ್ದ ಅಧಿಕಾರ ಈ ಬಾರಿ ಬದಲಾಗಿದ್ದು  ಜೆಡಿಎಸ್ ಗೆ ಮತದಾರ ಬೆಂಬಲಿಸಿದ್ದಾನೆ.

ಹನೂರಿನಲ್ಲಿ ಕಳೆದ 3 ಸಾಲಿನಿಂದ ಶಾಸಕ ನರೇಂದ್ರ ಆರಿಸಿ ಬರುತ್ತಿದ್ದರು‌.‌ ನಾಗಪ್ಪ ಪುತ್ರ ಡಾ.ಪ್ರೀತನ್ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು.‌ದೂರದ ಬೆಂಗಳೂರಿನಿಂದ ಬಂದು ಕಳೆದ 5 ವರ್ಷಗಳಿಂದ ನಿರಂತರ ಕೆಲಸ- ಕಾರ್ಯ ಮಾಡುತ್ತಿದ್ದ ಜೆಡಿಎಸ್ ಮಂಜುನಾಥ್ ಗೆ ಜನಾಶೀರ್ವಾದ ಸಿಕ್ಕಿದ್ದು 2 ಕುಟುಂಬದ ನಡುವೆ ಇದ್ದ ಅಧಿಕಾರ ಈ ಬಾರಿ ಬದಲಾಗಿದೆ‌.

ಇದನ್ನೂ ಓದಿ: Chikkamagalore Vidhan Sabha Chunav: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೈ ಕಲಿಗಳದ್ದೇ ಮೇಲು ಗೈ!

ಮತದಾರರನ್ನು ಸೆಳೆಯದ ಸ್ಟಾರ್ ಪ್ರಚಾರ: 

ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರವಾದ " ಜನ ಸಂಕಲ್ಪ ಯಾತ್ರೆ"ಯೂ ರಾಜ್ಯದಲ್ಲಿ ಹನೂರು ತಾಲೂಕಿನಿಂದಲೇ ಆರಂಭಗೊಂಡಿತ್ತು‌. ಜೆ.ಪಿ‌.ನಡ್ಡಾ, ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಸುದೀಪ್ ಹನೂರಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಪ್ರಜಾ ಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ, ಡಿಕೆಶಿ ಬಂದಿದ್ದರೇ ಚುನಾವಣೆ ಹೊತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಬೃಹತ್ ಸಮಾವೇಶ ನಡೆಸಿದ್ದರು. ಬಹಿರಂಗ ಪ್ರಚಾರಕ್ಕೆ ಎರಡು ದಿನ ಬಾಕಿ ಇರುವಾಗವಷ್ಟೇ ಎಚ್ಡಿಕೆ ಅರ್ಧ ತಾಸು ರೋಡ್ ಶೋ ಮಾಡಿದ್ದರು. ಮತದಾರ ಕೊನೆಗೂ ಜೆಡಿಎಸ್ ಬೆಂಬಲಿಸಿ ಮಂನುನಾಥ್ ಗೆಲ್ಲಿಸುವ ಮೂಲಕ ದಶಕಗಳಿಂದ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ನಡೆಸಿದ್ದ ಎರಡು ಕುಟುಂಬಗಳು ಈ ಬಾರಿ ಅಧಿಕಾರ ಕಳೆದುಕೊಂಡಿದೆ.

ಪ್ರಾರಂಭದಿಂದಕೂ ಕೈ ಹಿನ್ನಡೆ: ಮೂರನೇ ಸ್ಥಾನಕ್ಜೆ ಕಮಲ: 

ಮೊದಲ ಸುತ್ತಿನಿಂದ ಕೊನೆಯ 19 ನೇ ಸುತ್ತಿನಲ್ಲೂ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಿಕೊಂಡು ಬಂದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಬಿಜೆಪಿ ಸಂಘಟನೆ ಛಿದ್ರವಾಗಿರುವುದು ಮತಯಂತ್ರದಲ್ಲಿ ನಿಚ್ಚಳವಾಗಿದೆ.

ಬದಲಾವಣೆ ಜಗದ ನಿಯಮ: 

ಹನೂರಿನ ವಿಜೇತ ಅಭ್ಯರ್ಥಿ ' ಬದಲಾವಣೆ ಜಗದ ನಿಯಮ , ಜನಾಶೀರ್ವಾದಕ್ಕೆ ಎಲ್ಲರೂ ತಲೆ ಬಾಗಲೇ ಬೇಕು'  ಎಂದಿದ್ದಾರೆ
ನನ್ನ ಮೇಲೆ ನಂಬಿಕೆ ಇಟ್ಟು, ಹಲವು ಭರವಸೆಗಳನ್ನು ಇಟ್ಟು ಜನರು ಹರಸಿದ್ದಾರೆ, ಆದ್ಯತೆ ಮೇರೆಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ, ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆ, ಜನರ ಜೊತೆ ಸದಾ ಇರುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.

ಪಡೆದ ಮತಗಳ ವಿವರ: 

ಜೆಡಿಎಸ್- ಮಂಜುನಾಥ್- 75632

ಕಾಂಗ್ರೆಸ್- ಆರ್‌.ನರೇಂದ್ರ- 57978

ಬಿಜೆಪಿ- ಡಾ.ಪ್ರೀತನ್- 35,870

ನೋಟಾ ಮತಗಳು: 602

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News