ಆಸ್ತಿಗಾಗಿ ಅಜ್ಜಿಯನ್ನೂ ಬಿಡದ ಕೀಚಕರು: 98 ವರ್ಷದ ವೃದ್ಧೆ ಕಿಡ್ನಾಪ್

ಆಸ್ತಿಗಾಗಿ ಕೆಲವರು ಎಂತಹ ನೀಚ ಕೃತ್ಯಕ್ಕೂ ರೆಡಿ ಆಗಿರ್ತಾರೆ. ಆದ್ರೆ ಆ ನೀಚರಲ್ಲೇ ಅತಿ ನೀಚರ ಕತೆ ಇದು. ಕೇವಲ 7 ಎಕರೆ ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಸ್ವತಃ ಸಂಬಂಧಿಕರೇ ಕಿಡ್ನಾಪ್ ಮಾಡಿದ್ದಾರೆ.

Edited by - Zee Kannada News Desk | Last Updated : Dec 16, 2021, 12:35 PM IST
  • ಆಸ್ತಿಗಾಗಿ 98 ವರ್ಷದ ವೃದ್ಧೆ ಕಿಡ್ನಾಪ್
  • ವೃದ್ಧೆಯನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
  • ಆಡೂರು ಪೊಲೀಸ್ ಠಾಣೆಯಲ್ಲಿ ಸಂಬಂಧಿಕರ ವಿರುದ್ಧ ದೂರು ದಾಖಲು
ಆಸ್ತಿಗಾಗಿ ಅಜ್ಜಿಯನ್ನೂ ಬಿಡದ ಕೀಚಕರು: 98 ವರ್ಷದ ವೃದ್ಧೆ ಕಿಡ್ನಾಪ್ title=
ವೃದ್ಧೆ ಕಿಡ್ನಾಪ್

ಹಾವೇರಿ: ಆಸ್ತಿಗಾಗಿ ಕೆಲವರು ಎಂತಹ ನೀಚ ಕೃತ್ಯಕ್ಕೂ ರೆಡಿ ಆಗಿರ್ತಾರೆ. ಆದ್ರೆ ಆ ನೀಚರಲ್ಲೇ ಅತಿ ನೀಚರ ಕತೆ ಇದು. ಕೇವಲ 7 ಎಕರೆ ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಸ್ವತಃ ಸಂಬಂಧಿಕರೇ ಕಿಡ್ನಾಪ್ ಮಾಡಿದ್ದಾರೆ.

ವೃದ್ಧೆ ದೇವಕ್ಕ ದುಂಡಣ್ಣನವರ ಅವರನ್ನ ಸ್ವತಃ ಅವರ ಸಂಬಂಧಿಕರೇ ಆದ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ್ ಮತ್ತು ಮಂಜಪ್ಪ ಕಿಡ್ನಾಪ್ ಮಾಡಿದ್ದಾರೆ ಎಂದು  ಆರೋಪಿಸಲಾಗಿದೆ.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಜ್ರ, ಬಸ್ ಪಾಸ್ ದರ ಕಡಿತ, ಪರಿಷ್ಕೃತ ಟಿಕೆಟ್ ರೇಟ್ ಎಷ್ಟು ಗೊತ್ತೇ?

ವೃದ್ಧೆಗೆ ಮಕ್ಕಳು ಇರಲಿಲ್ಲ:

ಅಷ್ಟಕ್ಕೂ ವೃದ್ಧೆ ದೇವಕ್ಕ ಅವರಿಗೆ ಮಕ್ಕಳು ಇರಲಿಲ್ಲ. ಹೀಗಾಗಿ ಅದೇ ಗ್ರಾಮದ ಮಾಣಿಕಪ್ಪ ಕುಟುಂಬಸ್ಥರು ದೇವಕ್ಕನನ್ನ ಹಲವು ವರ್ಷಗಳಿಂದ ಆರೈಕೆ ಮಾಡಿಕೊಂಡು ಬಂದಿದ್ದರು. ಹೀಗಾಗಿ ತನ್ನ ಜಮೀನನ್ನ ಮಾಣಿಕಪ್ಪ ಹೆಸರಿಗೆ ಅಜ್ಜಿ ಬರೆದುಕೊಟ್ಟಿದ್ದರು. ಕೆಲ ವರ್ಷಗಳ ಹಿಂದೆ ಮಾಣಿಕಪ್ಪ ಮೃತಪಟ್ಟಿದ್ದು, ಮಾಣಿಕಪ್ಪ ಅವರ ಕುಟುಂಬಸ್ಥರು ವೃದ್ಧೆಯ ಜಮೀನು ಉಳಿಮೆ ಮಾಡುತ್ತಿದ್ದರು.

ಸಿಸಿ ಕ್ಯಾಮರಾದಲ್ಲಿ ಸೆರೆ:
 
ಹೀಗೆ ಮಾಣಿಕಪ್ಪ ಮನೆಯವರು ಜಮೀನಿಗೆ ಹೋಗಿದ್ದಾಗ ವೃದ್ಧೆಯನ್ನ ಹುಡುಕಾಡಿ ಆಕೆಯ ಸಂಬಂಧಿಕರೇ ಹೊತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲ ಐವರು ಸೇರಿ ವೃದ್ಧೆಯನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಐವರು ಸಂಬಂಧಿಕರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: KPSC ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News