ಬೆಂಗಳೂರಿನ ಶ್ವಾನ‌ ಪ್ರಿಯರಿಗೆ ಬ್ಯಾಡ್ ನ್ಯೂಸ್

Benglauru News: ನಗರದಲ್ಲಿ ಶ್ವಾನ ಸಾಕಾಣಿಕೆ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು,  ವಿವಿಧ ತಳಿಗಳ ನಾಯಿಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸಹ ಏರಿಕೆಯಾಗಿದೆ.   

Written by - Yashaswini V | Last Updated : Nov 10, 2023, 10:32 AM IST
  • ಬೆಂಗಳೂರಿಗರೇ ಇನ್ಮುಂದೆ ಬೇಕಾ‌ ಬಿಟ್ಟಿ ಮನೆಯಲ್ಲಿ ಶ್ವಾನ ಸಾಕುವಂತಿಲ್ಲ.
  • ಮುದ್ದಿನ ಶ್ವಾನದ ಮಲಮೂತ್ರ ವಿಸರ್ಜನೆಗೆ ನಿಮಗಿಷ್ಟ ಬಂದಾಗ ಹೊರಗಡೆ ಕರೆದೊಯ್ಯಂಗಿಲ್ಲ
  • ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ಶ್ವಾನ ಪ್ರೀತಿಗೂ ಕೂಡ ಹೊಸ ನಿಯಮ ಜಾರಿಯಾಗಲಿದೆ.
ಬೆಂಗಳೂರಿನ ಶ್ವಾನ‌ ಪ್ರಿಯರಿಗೆ ಬ್ಯಾಡ್ ನ್ಯೂಸ್  title=
shock to dog lovers in bengaluru

New Rules For Dog Lovers: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸಿಸುವ ಶ್ವಾನ ಪ್ರಿಯರಿಗೆ ಕೆಟ್ಟ ಸುದ್ದಿಯೊಂದಿದೆ. ನೀವೂ ಶ್ವಾನ ಪ್ರಿಯರಾಗಿದ್ದರೆ, ನಿಮ್ಮ ಮನೆಯಲ್ಲೂ ನಾಯಿ ಸಾಕಿದ್ದರೆ ಅಥವಾ ನಾಯಿ ಸಾಕುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸುದ್ದಿಯನ್ನೊಮ್ಮೆ ನೀವು ಓದಲೇ ಬೇಕು. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುವ ಮಂದಿ ಇನ್ಮುಂದೆ ಬೇಕಾ‌ ಬಿಟ್ಟಿ ಮನೆಯಲ್ಲಿ ಶ್ವಾನ ಸಾಕುವಂತಿಲ್ಲ.  ಮುದ್ದಿನ ಶ್ವಾನದ ಮಲಮೂತ್ರ ವಿಸರ್ಜನೆಗೆ, ನಿಮಗಿಷ್ಟ ಬಂದಾಗ ಹೊರಗಡೆ ಕರೆದೊಯ್ಯಂಗಿಲ್ಲ.  ಬೆಂಗಳೂರಿನಲ್ಲಿ ಇನ್ಮುಂದೆ ಶ್ವಾನ ಪ್ರೀತಿಗೂ ಕೂಡ ಹೊಸ ನಿಯಮ ಜಾರಿಯಾಗಲಿದೆ. ಈ ಕುರಿತಂತೆ ಬಿಬಿಎಂಪಿ ಪಶು ಸಂಗೋಪನೆ ಇಲಾಖೆಯಿಂದ ಪ್ರತ್ಯೇಕ‌ ಮಾರ್ಗ ಸೂಚಿ ಬಿಡುಗಡೆಗೆ ಪ್ಲಾನ್ ರೂಪಿಸಿದೆ. 

ಇದನ್ನೂ ಓದಿ- ಮುಂದಿನ ಮೂರು ದಿನಗಳವೆರೆಗೆ ಬಿರುಗಾಳಿ ಸಹಿತ ಮಳೆ : ಈ ಜಿಲ್ಲೆಗಳಿಗೆ ಹೈ ಅಲರ್ಟ್

ಆಗಿದ್ರೆ ಏನೇನ್ ಮಾರ್ಗಸೂಚಿ ಸಾಧ್ಯತೆ..?
1. ಒಂದು ಮನೆಯಲ್ಲಿ‌ ಗರಿಷ್ಠ ಎಷ್ಟು ನಾಯಿಗಳನ್ನ ಸಾಕಬಹುದು..?
2. ಮಲ ಮೂತ್ರ ವಿಸರ್ಜನೆಗೆ ಎಷ್ಟು ಗಂಟೆಗೆ ಮನೆಯಿಂದ‌ ಹೊರಗಡೆ  ಕರೆದುಕೊಂಡು ಹೋಗಬೇಕು..?
3. ನೆರೆ ಹೊರೆಯವರಿಗೆ ತೊಂದ್ರೆಯಾಗದಂತೆ ಏನೇನ್‌ ಕ್ರಮ ತೆಗೆದುಕೊಳ್ಳಬೇಕು..?
4. ನಾಯಿ ಸಾಕಲು ಮತ್ತು ಮಾರಾಟ ಮಾಡಲು  ಕಡ್ಡಾಯವಾಗಿ ಅನುಮತಿ
5. ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಹಾಕಿಸಿರಬೇಕು.

ಯಾಕೆ ಜಾರಿಯಾಗಲಿದೆ ಹೊಸ ಮಾರ್ಗಸೂಚಿ...?
ನಗರದಲ್ಲಿ ಶ್ವಾನ ಸಾಕಾಣಿಕೆ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು,  ವಿವಿಧ ತಳಿಗಳ ನಾಯಿಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸಹ ಏರಿಕೆಯಾಗಿದೆ. ಇನ್ನೂ ಸಾಕು ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಅಕ್ಕಪಕ್ಕದ ನಿವಾಸಿಗಳಿಂದ  ಪಶುಸಂಗೋಪನಾ ಇಲಾಖೆಗೆ ಸಾಲು ಸಾಲು ದೂರುಗಳು ಬರುತ್ತಿವೆ. 

ಇದನ್ನೂ ಓದಿ- ನಾನು ಸಿಎಂ ಆಕಾಂಕ್ಷಿ-ಸತೀಶ್ ಜಾರಕಿಹೊಳಿ

ಇತ್ತೀಚಿಗಷ್ಟೇ ನಟ ದರ್ಶನ್ ಮನೆಯ ಸಾಕು ನಾಯಿ ಮಹಿಳೆಯ ಮೇಲೆ ಅಟ್ಯಾಕ್ ಮಾಡಿರುವ ಆರೋಪದ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಎಫ್‌ಐ‌ಆರ್ ಕೂಡ ದಾಖಲಾಗಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ಬಿ‌ಬಿಎಂಪಿ ಪಶು ಸಂಗೋಪನೆ ಇಲಾಖೆ ಶ್ವಾನ ಸಾಕಾಣಿಕೆಗೆ ಪ್ರತ್ಯೇಕ‌ ಮಾರ್ಗ ಸೂಚಿ ಬಿಡುಗಡೆಗೆ ಪ್ಲಾನ್ ಮಾಡಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News