ಮುಂದಿನ ಮೂರು ದಿನಗಳವೆರೆಗೆ ಬಿರುಗಾಳಿ ಸಹಿತ ಮಳೆ : ಈ ಜಿಲ್ಲೆಗಳಿಗೆ ಹೈ ಅಲರ್ಟ್

ಇಂದಿನಿಂದ ಮೂರು ದಿನಗಳವ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ.  ಈ ಜಿಲ್ಲೆಗಳಲ್ಲಿ ನಿರಂತರ ವರ್ಷಧಾರೆಯಾಗಲಿದ್ದು, ಬಿರುಗಾಳಿಯ ಎಚ್ಚರಿಕೆ ಕೂಡಾ ನೀಡಲಾಗಿದೆ. 

Written by - Ranjitha R K | Last Updated : Nov 10, 2023, 09:35 AM IST
  • ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆ
  • ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ
  • ದೆಹಲಿ-ಎನ್‌ಸಿಆರ್‌ನಲ್ಲಿ ಕೃತಕ ಮಳೆಯ ಕುರಿತು ಚರ್ಚೆ
ಮುಂದಿನ ಮೂರು ದಿನಗಳವೆರೆಗೆ ಬಿರುಗಾಳಿ ಸಹಿತ  ಮಳೆ : ಈ ಜಿಲ್ಲೆಗಳಿಗೆ ಹೈ ಅಲರ್ಟ್  title=

Rain AlertToday : ಮುಂದಿನ ಮೂರು ದಿನಗಳವರೆಗೆ ರಾಜ್ಯದ 15 ಜಿಲೆಗಳಲ್ಲಿ ಭಾರೀ ಮಳೆಯಾಗಲಿದೆ. ಮೂರು ದಿನಗಳವರೆಗೆ ಈ ಜಿಲ್ಲೆಗಳಲ್ಲಿ ನಿರಂತರ ವರ್ಷಧಾರೆಯಾಗಲಿದ್ದು, ಬಿರುಗಾಳಿಯ ಎಚ್ಚರಿಕೆ ಕೂಡಾ ನೀಡಲಾಗಿದೆ. ಅಲ್ಲದೆ, ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ನವೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಅಥವಾ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದಿನಿಂದ ಮೂರು ದಿನಗಳವ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. 

ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರ ಕಿವಿ ಮೇಲೂ ಹೂವಿಟ್ಟಿರುವ ಸಿದ್ದರಾಮಯ್ಯ & ಡಿಕೆಶಿ..!

ಮೂರು ದಿನಗಳವರೆಗೆ ಎಡೆ ಬಿಡದೇ ಮಳೆ ಸುರಿಯಲಿದ್ದು, ಬಿರುಗಾಳಿ ಕೂಡಾ ಬೀಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಗಂಟೆಗೆ 30ರಿಂದ 40 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಎನ್ನಲಾಗಿದೆ. 

ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಮಳೆ‌ ಮುನ್ಸೂಚನೆ ನೀಡಲಾಗಿದೆ. 

ಇನ್ನು ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ವಾಯು ಮಾಲಿನ್ಯದ ಪರಿಣಾಮ ಉಸಿರು ಬಿಗಿ ಹಿಡಿಯುವ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯಾದರೆ ಒಂದಷ್ಟು ಮಾಲಿನ್ಯ ದೂರವಾಗುತ್ತದೆ. ನೈಸರ್ಗಿಕ ಮಳೆಗೆ ಮುನ್ನವೇ ದೆಹಲಿ-ಎನ್‌ಸಿಆರ್‌ನಲ್ಲಿ ಕೃತಕ ಮಳೆಯ ಕುರಿತು ಚರ್ಚೆ ನಡೆದಿದೆ. 

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿಗೆ ನೂಕಿದೆ-ಎಚ್ಡಿಕೆ

ಎನ್‌ಸಿಆರ್‌ನಲ್ಲಿ ಕ್ಲೌಡ್ ಸೀಡಿಂಗ್ ಮೂಲಕ ಮಾಲಿನ್ಯವನ್ನು ಹೇಗೆ ಮತ್ತು ಯಾವಾಗ ನಿಯಂತ್ರಿಸಬೇಕು ಎಂದು ಸಿಐಐ ಜೊತೆಗೆ ತಮ್ಮ ತಂಡವು ಕಳೆದ 2 ತಿಂಗಳುಗಳಿಂದ ಯೋಜಿಸುತ್ತಿದೆ ಎಂದು ಐಐಟಿ-ಕೆ ತಿಳಿಸಿದೆ. CII ಕಚೇರಿಯು ಅತ್ಯಂತ ಸಕ್ರಿಯವಾಗಿದೆ ಮತ್ತು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡರೊಂದಿಗೂ ಸಮನ್ವಯ ಸಾಧಿಸುತ್ತಿದೆ.

ತಾತ್ಕಾಲಿಕ ವ್ಯವಸ್ಥೆಯು 7-10 ದಿನಗಳವರೆಗೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ :
ವಾಸ್ತವವಾಗಿ, ಮೋಡ ಬಿತ್ತನೆಯ ಮೂಲಕ ಮಳೆಯಾದಾಗ, ಧೂಳಿನ ಕಣಗಳು ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತವೆ. ಇದರಿಂದ ಪರಿಸರ ಮಾಲಿನ್ಯ  ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಆದರೆ, ಮೋಡ ಬಿತ್ತನೆಯ ಮೂಲಕ ಮಾಲಿನ್ಯದ ನಿಯಂತ್ರಣವು ತಾತ್ಕಾಲಿಕವಾಗಿದ್ದು, ಇದರ ಪರಿಣಾಮ  ಒಂದರಿಂದ ಎರಡು ವಾರಗಳವರೆಗೆ ಮಾತ್ರ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News