ಉಡುಪಿ: ಆಸ್ತಿ ವಿಚಾರಕ್ಕೆ ಗಲಾಟೆ.. ಅಣ್ಣನನ್ನೇ ಕೊಂದ ತಮ್ಮ

ಸಹೋದರರ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಡುಪಿಯ ಜಿಲ್ಲೆಯ ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬ್ಳಕಟ್ಟೆದಲ್ಲಿ ನಡೆದಿದೆ. 

Written by - MANU KUMAR ARYA | Edited by - Chetana Devarmani | Last Updated : Mar 18, 2022, 06:14 PM IST
  • ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಗಲಾಟೆ
  • ಕತ್ತಿಯಿಂದ ಹಲ್ಲೆ ಮಾಡಿ ಅಣ್ಣನ ಕೊಲೆ
ಉಡುಪಿ: ಆಸ್ತಿ ವಿಚಾರಕ್ಕೆ ಗಲಾಟೆ.. ಅಣ್ಣನನ್ನೇ ಕೊಂದ ತಮ್ಮ   title=
ಅಣ್ಣನ ಕೊಲೆ

ಉಡುಪಿ: ಆಸ್ತಿ ವಿಚಾರಕ್ಕಾಗಿ ಕುಟುಂಬದಲ್ಲಿ (Family) ಕಲಹಗಳು ಸಹಜ. ಆಸ್ತಿಗಾಗಿ ಅಪ್ಪ-ಮಗ, ಅಣ್ಣ-ತಮ್ಮ, ಅಕ್ಕ- ತಂಗಿಯರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೊದಿರುವ ಘಟನೆಗಳು ಸಾಕಷ್ಟಿವೆ. 

ಹೆಣ್ಣು, ಹೊನ್ನು, ಮಣ್ಣು ಎಂಥವರನ್ನು ಕೂಡ ಕ್ರೂರಿಯನ್ನಾಗಿ ಮಾಡಿಬಿಡುತ್ತದೆ. ಈಗ ನಾವು ಹೇಳುತ್ತಿರುವ  ಸ್ಟೋರಿಯಲ್ಲೂ ಆಸ್ತಿಗಾಗಿ ನಡೆದ ಸಣ್ಣ ಗಲಾಟೆ ಕೊಲೆಯಲ್ಲಿ (Murder) ಅಂತ್ಯವಾಗಿದೆ.

ಇದನ್ನೂ ಓದಿ: ಪುಟಿನ್ ಸಾರಿದ ಸಮರದಲ್ಲಿ ಮಡಿದವರೆಷ್ಟು? ಖೆರ್ಸನ್ ಪ್ರದೇಶದ ಆಡಳಿತ ರಷ್ಯಾ ಪಾಲಾಗಿದ್ದು ಹೇಗೆ?

ಆಸ್ತಿ ವಿಚಾರಕ್ಕೆ ಅಣ್ಣ-ತಮ್ಮನ (Sibling) ನಡುವೆ ಗಲಾಟೆಯಾಗಿದೆ. ಸಹೋದರರ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಡುಪಿಯ ಜಿಲ್ಲೆಯ ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬ್ಳಕಟ್ಟೆದಲ್ಲಿ ನಡೆದಿದೆ. 

ಬಾಲಕೃಷ್ಣ ಮತ್ತು ಅವರ ಸೋದರನಾದ ದಯಾನಂದನ ನಡುವೆ ಮನೆಯ ವಾಸ್ತವ್ಯಕ್ಕೆ ಸಂಬಂಧಪಟ್ಟಂತೆ ವಿವಾದ‌ ಮೊದಲಿನಿಂದಲು ಇತ್ತು. ಇದೇ ವಿಚಾರವಾಗಿ ಸಹೋದರರ (Brother) ನಡುವೆ ಗಲಾಟೆಗಳು ಹಲವಾರು ಬಾರಿ ನಡೆದಿದೆ.

ಇದನ್ನೂ ಓದಿ: The Kashmir Files:‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ Y ಕೆಟಗರಿ ಭದ್ರತೆ

ಆದ್ರೆ ಇಂದು ಅಣ್ಣ-ತಮ್ಮನ ಆಸ್ತಿ (Property) ಗಲಾಟೆ ಜೋರಾಗಿದೆ. ಈ ವೇಳೆ‌ ಕೋಪಗೊಂಡ ದಯಾನಂದ ತನ್ನ ಅಣ್ಣ ಬಾಲಕೃಷ್ಣನ ತಲೆಗೆ ಕತ್ತಿಯಿಂದ ಹೊಡೆದಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಬಾಲಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News