RR ನಗರದ್ಲಲಿ ಕುಸುಮಾಗೆ ಶುರುವಾಯ್ತಾ ಸೋಲಿನ ಭಯ?: ನಿನ್ನೆ ಹೇಳಿದ ಮಾತಿನಂತೆ ನಡೆಯದ ಕೈ​ ಅಭ್ಯರ್ಥಿ

ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆ ಸಾಧಿಸಿರುವುದರಿಂದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾಗೆ ಸೋಲಿನ ಭಯ ಆರಂಭ

Last Updated : Nov 10, 2020, 01:00 PM IST
  • ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆ ಸಾಧಿಸಿರುವುದರಿಂದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾಗೆ ಸೋಲಿನ ಭಯ ಆರಂಭ
  • ನಿನ್ನೆ ಕುಸುಮಾ ಬೆಳಗ್ಗೆ 11 ಗಂಟೆಗೆ ಮತಗಟ್ಟೆಗೆ ತೆರಳುವುದಾಗಿ ತಿಳಿಸಿದ್ದರು. ಆದರೆ, ಗಂಟೆ 12 :30 ಆಗುತ್ತಿದ್ದರು. ಇನ್ನು ಮತಗಟ್ಟೆಗೆ ಬರದಿರುವುದು ಕುತೂಹಲ
  • ಮತಗಟ್ಟೆಗೆ ಬರದೇ ಮನೆಯಲ್ಲಿಯೇ ಉಳಿದ ಕುಸುಮಾ
RR ನಗರದ್ಲಲಿ ಕುಸುಮಾಗೆ ಶುರುವಾಯ್ತಾ ಸೋಲಿನ ಭಯ?: ನಿನ್ನೆ ಹೇಳಿದ ಮಾತಿನಂತೆ ನಡೆಯದ ಕೈ​ ಅಭ್ಯರ್ಥಿ title=
Image Courtesy kusuma Hanumantharayappa twitter

ಬೆಂಗಳೂರು: ರಾಜರಾಜೇಶ್ವರಿ(RR) ನಗರ ಉಪಚುನಾವಣೆಯಲ್ಲಿ ಮತಎಣಿಕೆ ಮುಂಜಾನೆ 8 ಗಂಟೆಗೆ ಆರಂಭವಾದಾಗಿನಿಂದಲೂ ಬಿಜೆಪಿ(BJP) ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆ ಸಾಧಿಸಿರುವುದರಿಂದ ಕಾಂಗ್ರೆಸ್​(congress) ಅಭ್ಯರ್ಥಿ ಕುಸುಮಾಗೆ ಸೋಲಿನ ಭಯ ಆರಂಭವಾಗಿದೆ ಎನ್ನಲಾಗಿದೆ.

ಬೈಎಲೆಕ್ಷನ್ ರಿಸಲ್ಟ್: RR.ನಗರ, ಶಿರಾ ಎರಡೂ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ; ಕಾಂಗ್ರೆಸ್, ಜೆಡಿಎಸ್ ಹಿನ್ನಡೆ

ಮುನಿರತ್ನ ಅವರು ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ. ಬಹುತೇಕ ಗೆಲುವು ಖಚಿತ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕುಸುಮಾ(Kusuma)ಗೆ ಭಯ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಕುಸುಮಾ ಮತಗಟ್ಟೆಗೆ ಬರದೇ ಮನೆಯಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ.

Karnataka Bypoll Results 2020: ಕಾಂಗ್ರೆಸ್ ಅಭ್ಯರ್ಥಿಗೆ ಕೋವಿಡ್ ಪಾಸಿಟಿವ್

ನಿನ್ನೆ ಕುಸುಮಾ ಬೆಳಗ್ಗೆ 11 ಗಂಟೆಗೆ ಮತಗಟ್ಟೆಗೆ ತೆರಳುವುದಾಗಿ ತಿಳಿಸಿದ್ದರು. ಆದರೆ, ಗಂಟೆ 12 :30 ಆಗುತ್ತಿದ್ದರು. ಇನ್ನು ಮತಗಟ್ಟೆಗೆ ಬರದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಹಿಳೆಯರ ಸಂಭ್ರಮ: RR ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಕೌಂಟಿಂಗ್ ಸೆಂಟರ್ ಬಳಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಮುನಿರತ್ನ ಪರ ಘೋಷಣೆ ಕೂಗಿ ಮಹಿಳಾ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Trending News