ಸೇವಾ ನ್ಯೂನ್ಯತೆ ಎಸಗಿದ ಎಸ್.ಎಸ್ ವಿ ಶೇಲ್ಟರ್ಸ್‍ಗೆ ಬಡ್ಡಿಯೊಂದಿಗೆ 28,01,080 ರೂ.ಹಣ ಹಿಂದಿರುಗಿಸಲು ಆದೇಶ

ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಕಮಲಾ ಬಡಿಗೇರ ಎಂಬುವವರು 2020 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ  ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್ ವಿ ಶೇಲ್ಟರ್ಸ್‍ನ ವಿಜಯಕುಮಾರ ಕಬಾಡಿ ರವರಿಂದ 875 ಚ.ಅಡಿ ವಿಸ್ತ್ರೀರ್ಣದ ಮಳಿಗೆಯನ್ನು ಖರೀಸಿದ್ದರು. ಅದಕ್ಕೆ ಅವರು ರೂ.27,41,080/-ಗಳಿಗೆ ಹಣ ಸಂದಾಯ ಮಾಡಿದ್ದರು.

Written by - Zee Kannada News Desk | Last Updated : Jan 16, 2024, 10:45 PM IST
  • ಈ ಬಗ್ಗೆ ಎದುರುದಾರ ವಿಜಯಕುಮಾರ ರವರು ದಿ.17/08/2020 ರಂದು ಒಪ್ಪಂದ ಪತ್ರ ಬರೆದುಕೊಟ್ಟಿದ್ದರು.
  • ಸದರಿ ಒಪ್ಪಂದದಂತೆ ದೂರುದಾರ ಎದುರುದಾರರಿಗೆ ಎಲ್ಲ ಹಣವನ್ನು ಸಂದಾಯ ಮಾಡಿದ್ದರು.
  • ಎದುರುದಾರರು ಒಪ್ಪಂದ ಪತ್ರದ ಪ್ರಕಾರ ನಿಗಧಿತ ಅವಧಿಯಲ್ಲಿ ಕಟ್ಟಡ ನಿರ್ಮಿಸಿ ಖರೀದಿ ಪತ್ರವನ್ನು ಮಾಡಿಕೊಟ್ಟಿರಲಿಲ್ಲ.
 ಸೇವಾ ನ್ಯೂನ್ಯತೆ ಎಸಗಿದ ಎಸ್.ಎಸ್ ವಿ ಶೇಲ್ಟರ್ಸ್‍ಗೆ ಬಡ್ಡಿಯೊಂದಿಗೆ 28,01,080 ರೂ.ಹಣ ಹಿಂದಿರುಗಿಸಲು ಆದೇಶ title=

ಧಾರವಾಡ: ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಕಮಲಾ ಬಡಿಗೇರ ಎಂಬುವವರು 2020 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ  ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್ ವಿ ಶೇಲ್ಟರ್ಸ್‍ನ ವಿಜಯಕುಮಾರ ಕಬಾಡಿ ರವರಿಂದ 875 ಚ.ಅಡಿ ವಿಸ್ತ್ರೀರ್ಣದ ಮಳಿಗೆಯನ್ನು ಖರೀಸಿದ್ದರು. ಅದಕ್ಕೆ ಅವರು ರೂ.27,41,080/-ಗಳಿಗೆ ಹಣ ಸಂದಾಯ ಮಾಡಿದ್ದರು.

ಇದನ್ನೂ ಓದಿ: ರವಿ ಬಸ್ರೂರು ನಿರ್ದೇಶನದ ಕಡಲ್ ಸಿನಿಮಾ ಜ.೧೯ಕ್ಕೆ ಬಿಡುಗಡೆ

ಈ ಬಗ್ಗೆ ಎದುರುದಾರ ವಿಜಯಕುಮಾರ ರವರು ದಿ.17/08/2020 ರಂದು ಒಪ್ಪಂದ ಪತ್ರ ಬರೆದುಕೊಟ್ಟಿದ್ದರು. ಸದರಿ ಒಪ್ಪಂದದಂತೆ ದೂರುದಾರ ಎದುರುದಾರರಿಗೆ ಎಲ್ಲ ಹಣವನ್ನು ಸಂದಾಯ ಮಾಡಿದ್ದರು. ಎದುರುದಾರರು ಒಪ್ಪಂದ ಪತ್ರದ ಪ್ರಕಾರ ನಿಗಧಿತ ಅವಧಿಯಲ್ಲಿ ಕಟ್ಟಡ ನಿರ್ಮಿಸಿ ಖರೀದಿ ಪತ್ರವನ್ನು ಮಾಡಿಕೊಟ್ಟಿರಲಿಲ್ಲ. ಎಸ್.ಎಸ್.ವಿ ಶೇಲ್ಟರ್ಸ್‍ರವರ ಇಂತಹ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರಳು ದಿ.16/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. 

ಇದನ್ನೂ ಓದಿ: ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು, ಮತ್ತದನ್ನೇ ಪುನರಾವರ್ತಿಸು; ಇದುವೇ ಪ್ರಧಾನಿ ಮೋದಿ ಮಂತ್ರ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ. ಹಿರೇಮಠ, 2020ರಲ್ಲಿ ದೂರುದಾರಳಿಂದ ರೂ. 27,41,080/- ಹಣವನ್ನು ಪಡೆದುಕೊಂಡು ಒಪ್ಪಂದ ಪತ್ರದಂತೆ ಹುಬ್ಬಳ್ಳಿ ಸೆಂಟರ್‍ನ ಮಾಲ್‍ನಲ್ಲಿ ಮಳಿಗೆ ನಿರ್ಮಿಸಿ ಆ ಬಗ್ಗೆ ಖರೀದಿ ಪತ್ರ ನೋಂದಾಯಿಸಿಕೊಡುವುದು ಎದುರುದಾರರ ಕರ್ತವ್ಯವಾಗಿದೆ. ಆದರೆ ಮಳಿಗೆ ನಿರ್ಮಿಸಿಲ್ಲಾ. ಅಲ್ಲದೇ ಆ ಬಗ್ಗೆ ಖರೀದಿ ಪತ್ರವನ್ನು ಮಾಡಿಕೊಡದಿರುವುದು ಗ್ರಹಕರ ರಕ್ಷಣಾ ಕಾಯದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ. 

ದೂರುದಾರರು ಸಂದಾಯ ಮಾಡಿದ ರೂ. 27,41,080/- ಮತ್ತು ಅದರ ಮೇಲೆ ಹಣ ನೀಡಿದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/-  ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎಸ್.ಎಸ್ ವಿ ಶೇಲ್ಟರ್ಸ್‍ನ ವಿಜಯಕುಮಾರ ಕಬಾಡಿ ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News